ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನಮ್ಮ ರಾಜ್ಯದಲ್ಲಿ ಹಲವಾರು ವಿಧದ ಬೆಳೆಗಳನ್ನು ಬೆಳೆಯಲಾಗುತ್ತದೆ. ಅದರಲ್ಲಿಯೂ ಉತ್ತರ ಕರ್ನಾಟಕ ಭಾಗದಲ್ಲಿ ಹತ್ತು ಹಲವು ರೀತಿಯ ಬೆಳೆಗಳನ್ನು ಬೆಳೆಯಲಾಗುತ್ತದೆ.
Thank you for reading this post, don't forget to subscribe!ಇಂತಹ ಬೆಳೆಗಳಲ್ಲಿ ಉತ್ತರ ಕರ್ನಾಟಕದ ಅತಿ ಪ್ರಮುಖವಾದ ಬೆಳೆ ಎಂದರೆ ಅದು ತೊಗರಿ ಎಂದರೆ ಬಹುಷಃ ತಪ್ಪಾಗಲಿಕ್ಕಿಲ್ಲ.
ಇದನ್ನೂ ಓದಿ: ಪಿಎಂ ಕಿಸಾನ್ 19 ನೇ ಕಂತಿನ ಹಣ ಈ ದಿನಾಂಕದಂದು ಜಮಾ ಆಗಲಿದೆ! ತಪ್ಪದೇ ಈ ಕೆಲಸ ಮಾಡಿ
ಒಣ ಬೇಸಾಯದ ಪ್ರಮುಖ ಬೆಳೆಯಾದ ತೊಗರಿ,ಉತ್ತರ ಕರ್ನಾಟಕದ ಬಡ ರೈತನ ಪಾಲಿಗೆ ಒಂದು ವರದಾನವೇ ಸರಿ. ಏಕೆಂದರೆ ಮುಂಗಾರು ಸಾಮಾನ್ಯಕ್ಕಿಂತ ಕಡಿಮೆ ಆದಾಗಲೂ ಈ ಬೆಳೆ ರೈತನ ಕೈ ಬಿಡುವುದಿಲ್ಲ.
ಅಲ್ಲದೇ ತೊಗರಿ ಬೆಳೆ ಬೆಳೆಯಲು ಉಳಿದ ಬೆಳೆಗಳಿಗಿಂತ ಶ್ರಮ ಸ್ವಲ್ಪ ಕಡಿಮೆ ಎನ್ನಬಹುದು. ಈ ಕಾರಣಕ್ಕಾಗಿಯೂ ಇದು ಬೆಳೆಯಲು ಸರಳವಾಗಿ ಅತಿ ಹೆಚ್ಚು ಪ್ರದೇಶವನ್ನು ಆಕ್ರಮಿಸಿದೆ.
ಇದನ್ನೂ ಓದಿ: PM Awas Yojana: ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ 2.5 ಲಕ್ಷ ರೂಪಾಯಿ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ
ಅದರಲ್ಲೂ ಕಲಬುರ್ಗಿ ಭಾಗದಲ್ಲಿ ಬೆಳೆಯಲಾಗುವ ತೊಗರಿ ಬೆಳೆಗೆ GI ಟ್ಯಾಗ್ ಕೂಡ ದೊರೆತದ್ದು ಈ ಬೆಳೆಯ ಕೀರ್ತಿಗೆ ಸಿಕ್ಕಿಸಿದ ಮತ್ತೊಂದು ಗರಿ.
ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ ನೀಡಿದ್ದೇವೆ. ತಪ್ಪದೇ ಕೊನೆಯವರೆಗೂ ಓದಿರಿ.
ತೊಗರಿ ಬೆಳೆಗೆ ಭರ್ಜರಿ ಕನಿಷ್ಠ ಬೆಂಬಲ ಬೆಲೆ:
ತೊಗರಿ ಬೆಳೆ ಬೆಳೆಯುವ ರೈತರಿಗೆ ರಾಜ್ಯ ಸರ್ಕಾರ ಇದೀಗ ಒಂದು ಒಳ್ಳೆಯ ಸಿಹಿ ಸುದ್ದಿ ನೀಡಿದ್ದು, ತೊಗರಿ ಬೆಳೆಯನ್ನು ಭರ್ಜರಿ ಕನಿಷ್ಠ ಬೆಂಬಲ ಬೆಲೆ ನೀಡಿ ಖರೀದಿಸಲು ಮುಂದಾಗಿದೆ.
ಹೌದು ಸ್ನೇಹಿತರೆ ರಾಜ್ಯ ಸರ್ಕಾರ ಇದೀಗ ತೊಗರಿ ಬೆಳೆಗೆ ಪ್ರತಿ ಕ್ವಿಂಟಲ್ ಗೆ 7750 ರೂಪಾಯಿ ಕೊಟ್ಟು ಅರ್ಹ ರೈತರಿಂದ ಖರೀದಿಸಲು ಮುಂದಾಗಿದೆ.
ಯಾವ ಯಾವ ರೈತರು ತೊಗರಿ ಬೆಂಬಲ ಬೆಲೆ ಲಾಭ ಪಡೆಯಬಹುದು ?
ಇನ್ನು ತಮ್ಮ ತೊಗರಿ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆಗೆ (msp on tur dal) ಮಾರಾಟ ಮಾಡಲು ಬಯಸುವ ರೈತರು ತಮ್ಮ ಹತ್ತಿರದ PACS/ FPO/TAPCMS ಗಳಲ್ಲಿ ತಮ್ಮ ಫ್ರೂಟ್ಸ್ FID ಸಂಖ್ಯೇ ನೀಡಿ ನೋಂದಣಿ ಮಾಡಿಕೊಂಡು ತೊಗರಿ ಮಾರಾಟ ಮಾಡಬಹುದಾಗಿದೆ ಎಂದು ಕೃಷಿ ಮಾರಾಟ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ನಿಮ್ಮ FID ನಂಬರ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!

ಯಾವ ಯಾವ ಜಿಲ್ಲೆಯ ರೈತರಿಗೆ ಸಿಗಲಿದೆ ಲಾಭ:
ಇನ್ನು ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ರಾಜ್ಯ ಸರ್ಕಾರವು ಪ್ರತಿಯೊಬ್ಬ ರೈತನಿಂದ ಪ್ರತಿ ಎಕರೆಗೆ 4 ಕ್ವಿಂಟಾಲ್ ನಂತೆ ಗರಿಷ್ಠ ಒಬ್ಬ ರೈತನಿಂದ 40 ಕ್ವಿಂಟಲ್ ವರೆಗೆ ತೊಗರಿಯನ್ನು ಖರೀದಿಸಲಿದೆ.
ಇನ್ನು ರಾಜ್ಯದ ಪ್ರಮುಖ ತೊಗರಿ ಬೆಳೆಯುವ ಜಿಲ್ಲೆಗಳಾದ ಕಲಬುರ್ಗಿ, ರಾಯಚೂರು ,ಬೀದರ್, ವಿಜಯಪುರ,ಬೆಳಗಾವಿ,ಯಾದಗಿರಿ,ಬಾಗಲಕೋಟೆ,ಬಳ್ಳಾರಿ,ವಿಜಯನಗರ,ಕೊಪ್ಪಳ ಜಿಲ್ಲೆಯ ರೈತರು ತಮ್ಮ ಜಿಲ್ಲೆಗಳಲ್ಲಿ ತೆರೆಯಲಾಗಿರುವ ಖರೀದಿ ಕೇಂದ್ರಗಳಲ್ಲಿ ಹೆಸರು ನೊಂದಾಯಿಸಿಕೊಂಡು ತಮ್ಮ ತೊಗರಿ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆಗೆ ಮಾರಾಟ ಮಾಡಬಹುದಾಗಿದೆ.
ಓದುಗರಲ್ಲಿ ವಿನಂತಿ:
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode