ಸ್ನೇಹಿತರೆ ಭಾರತದ ಹಲವು ನದಿಗಳು ಕಾರ್ಖಾನೆಯ ತ್ಯಾಜ್ಯದಿಂದ ದೊಡ್ಡ ದೊಡ್ಡ ನಗರಗಳ ತ್ಯಾಜ್ಯ ವಸ್ತು ವಿನಿಂದ ಕೂಡಿ ಮಲಿನವಾಗಿವೆ. ಆದರೆ ಅದೊಂದು ನದಿ ಮಾತ್ರ ಸಂಪೂರ್ಣ ತಿಳಿಯಾಗಿದ್ದು ಸ್ವಚ್ಛತೆಗೆ ಹೆಸರುವಾಸಿಯಾಗಿದೆ. ಈ ಕಾರಣದಿಂದಲೇ ಅಲ್ಲಿಗೆ ವರ್ಷದುದ್ದಕ್ಕೂ ಸಾವಿರಾರು ಪ್ರವಾಸಿಗರು ಬರುತ್ತಾರೆ.
ಸ್ನೇಹಿತರೆ ಭಾರತದ ಹಲವು ನದಿಗಳು ಕಾರ್ಖಾನೆಯ ರಾಸಾಯನಿಕದಿಂದ, ದೊಡ್ಡ ದೊಡ್ಡ ನಗರಗಳ ತ್ಯಾಜ್ಯ ವಸ್ತು ವಿನಿಂದ ಕೂಡಿ ಮಲಿನವಾಗಿವೆ. ಆದರೆ ಅದೊಂದು ನದಿ ಮಾತ್ರ ಸಂಪೂರ್ಣ ತಿಳಿಯಾಗಿದ್ದು ಸ್ವಚ್ಛತೆಗೆ ಹೆಸರುವಾಸಿಯಾಗಿದೆ. ಈ ಕಾರಣದಿಂದಲೇ ಅಲ್ಲಿಗೆ ವರ್ಷದುದ್ದಕ್ಕೂ ಸಾವಿರಾರು ಪ್ರವಾಸಿಗರು ಬರುತ್ತಾರೆ. ಹಾಗಾದರೆ ಯಾವುದು ಆ ನದಿ ಮತ್ತು ಅದು ಎಲ್ಲಿದೆ ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.
Thank you for reading this post, don't forget to subscribe!ಸ್ನೇಹಿತರೆ ಆ ನದಿಯ ಹೆಸರು ಡವ್ಕಿ ನದಿ. ವಾಹ್ ಉಮ್ಗೋಟ್ ಎಂದೂ ಕರೆಯಲ್ಪಡುವ ಉಮ್ಗೋಟ್/ಡವ್ಕಿ ನದಿಯು ಭಾರತದ ಮೇಘಾಲಯದ ಪಶ್ಚಿಮ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಜೈನ್ತಿಯಾ ಬೆಟ್ಟಗಳ ಕೆಳಭಾಗದಲ್ಲಿರುವ ಒಂದು ಪುಟ್ಟ ಪಟ್ಟಣವಾದ ಡಾವ್ಕಿಯ ಮೂಲಕ ಹರಿಯುವ ನದಿಯಾಗಿದೆ . ಈ ಪಟ್ಟಣವು ವ್ಯವಹಾರಿಕ ಮತ್ತು ದೇಶದ ಭದ್ರತೆ ದೃಷ್ಟಿಯಿಂದ ಪ್ರಮುಖ ಸ್ಥಳವಾಗಿದೆ. ಅಲ್ಲದೇ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ವ್ಯಾಪಾರ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ .
ಉಮ್ಗೋಟ್, ಭಾರತದ ಸ್ವಚ್ಛ ನದಿಗಳಲ್ಲಿ ಒಂದಾಗಿದ್ದು, ಇದು ಸ್ಥಳೀಯ ಮೀನುಗಾರರಿಗೆ ಪ್ರಮುಖ ಮೀನುಗಾರಿಕೆ ಸ್ಥಳವಾಗಿದೆ . ಅವರ ಜೀವನೋಪಾಯಕ್ಕೆ ಬೆನ್ನೆಲುಬಾಗಿದೆ. ಈ ನದಿಯು ಭಾರತ-ಬಾಂಗ್ಲಾದೇಶದ ಗಡಿಯಲ್ಲಿದ್ದು, ಪ್ರವಾಹದ ಏರಿಕೆಯಿಂದ ಉಂಟಾಗುವ ನದಿಯ ಬಿಳಿ ಭಾಗವು ಎರಡು ದೇಶಗಳ ನಡುವಿನ ಅನಧಿಕೃತ ( unofficial) ಗಡಿಯನ್ನು ಗುರುತಿಸುತ್ತದೆ. ಈ ನದಿಯ ವಿಶೇಷ ಏನೆಂದರೆ ಇಲ್ಲಿನ ನೀರು ಸಂಪೂರ್ಣ ತಿಳಿಯಾಗಿದ್ದು, ನಿಮ್ಮ ಪ್ರತಿಬಿಂಬ ನೀರಿನ ಮೇಲೆ ಬೀಳದೆ ನೀರಿನ ಕೆಳಗೆ ಕಾಣಿಸುತ್ತದೆ. ಅಷ್ಟು ಸ್ವಚ್ಛ ನದಿ ಇದಾಗಿದೆ. ಈ ಕಾರಣಕ್ಕಾಗಿ ಇಲ್ಲಿಗೆ ವರ್ಷದುದ್ದಕ್ಕೂ ಹಲವಾರು ಪ್ರವಾಸಿಗರು ಬಂದು ಈ ನದಿಯ ಸೌಂದರ್ಯವನ್ನು ಆಸ್ವಾದಿಸುತ್ತಾರೆ .
ಉಮ್ಗೋಟ್ ನದಿಯ ಮೇಲೆ ಒಂದು ತೂಗು ಸೇತುವೆ (ಡವ್ಕಿ ಸೇತುವೆ) ತೂಗುಹಾಕಲಾಗಿದೆ. ಇದನ್ನು 1932 ರಲ್ಲಿ ನಿರ್ಮಿಸಲಾಯಿತು.ಇಲ್ಲಿಂದ ದಾವ್ಕಿ ಅಥವಾ ಉಮ್ಗೊಟ್ ನದಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲದು. ಏಪ್ರಿಲ್ 2021 ರಲ್ಲಿ, ಮೇಘಾಲಯ ಸರ್ಕಾರವು ವಿದ್ಯುತ್ ಕೊರತೆಯ ದೃಷ್ಟಿಯಿಂದ ನದಿಗೆ ಅಣೆಕಟ್ಟು ನಿರ್ಮಿಸುವ ನಿರ್ಧಾರವನ್ನು ತೆಗೆದುಕೊಂಡಿತು. ಈ ಯೋಜನೆಯು ಉದ್ದೇಶಿತ 210 MW ಉಮ್ಗೋಟ್ ಜಲವಿದ್ಯುತ್ ಯೋಜನೆಯಾಗಿದ್ದು, ಇದು ಸ್ಥಳೀಯ ಗ್ರಾಮಸ್ಥರಿಂದ ಸಾಕಷ್ಟು ಹಿನ್ನಡೆ ಮತ್ತು ವಿರೋಧವನ್ನು ಎದುರಿಸಿದ್ದರಿಂದ ಅದು ಕೊನೆಗೆ ಅದು ರದ್ದಾಗಿತು.
ಈ ಮೇಲೆ ಕಾಣುವ ಚಿತ್ರ ನೋಡಿದರೆ ನಮಗೆ ಕಂಡು ಬರುತ್ತದೆ. ಮೇಘಾಲಯದ ದಾವ್ಕಿ ನದಿ, ಅದರ ಸ್ಪಷ್ಟ, ಪಾರದರ್ಶಕ ನೀರು ಮತ್ತು ದೈವಿಕತೆ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ ಎಂಬುದು. ಸಾಧ್ಯವಾದರೆ ಒಮ್ಮೆ ನೋಡಿ ಬನ್ನಿ..
ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನೀವು ನಮ್ಮ ವೆಬ್ ಸೈಟಿಗೆ ಮೊದಲ ಬಾರಿ ಬಂದಿದ್ದರೆ ನಮ್ಮ ವೆಬ್ಸೈಟ್ನ ನೋಟಿಫಿಕೇಶನ್ಗಳನ್ನು ‘allow’ ಮಾಡಿಕೊಳ್ಳಿ.
"SSLC ವಿದ್ಯಾರ್ಥಿಗಳೇ ಗಮನಿಸಿ! ಪೂರ್ವಸಿದ್ಧತಾ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಬದಲಾವಣೆಗಳು ನಡೆದಿವೆ. ಪರೀಕ್ಷೆಗೆ ಸಜ್ಜಾಗಲು ಹಾಗೂ ಯಾವುದೇ ತಡಸ್ಥಿತಿಯಿಂದ ತಪ್ಪಿಸಿಕೊಳ್ಳಲು…
ರಾಜ್ಯದಲ್ಲಿ ತೀವ್ರ ಚಳಿ ಹೆಚ್ಚುತ್ತಿರುವ ಹಿನ್ನೆಲೆ 7 ಜಿಲ್ಲೆಗಳಿಗೆ ‘ಶೀತ ಗಾಳಿ’ ಎಚ್ಚರಿಕೆ ಜಾರಿಯಾಗಿದೆ. ಡಿಸೆಂಬರ್ 13 ರವರೆಗೆ ತಾಪಮಾನ…
BBK 12 ಫಿನಾಲೆಗೆ ಮುನ್ನವೇ ಬಿಗ್ಬಾಸ್ ಕನ್ನಡ 12ರ ವಿನ್ನರ್ ಹೆಸರು ವಿಕಿಪೀಡಿಯಾದಲ್ಲಿ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ…
ಜಮೀನು ಅಥವಾ ನಿವೇಶನ ಖರೀದಿ ಮಾಡುವಾಗ ಆ ಜಮೀನು ಯಾರಿಗೆ ಸಂಬಂಧಿಸಿದ್ದು, ಅಥವಾ ನೀವು ನಿಂತಿರುವ ಜಮೀನು ಅಥವಾ ನಿವೇಶನ…
ಪ್ರತ್ಯೇಕ ಕುಟುಂಬಕ್ಕೆ ₹4000 ಪ್ರತ್ಯೇಕವಾಗಿ ನೀಡಲಾಗುವ ಗೃಹಲಕ್ಷ್ಮಿ ಯೋಜನೆ, ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ಕುರಿತು ಕರ್ನಾಟಕ ಸರ್ಕಾರದಿಂದ…
ರೈತರಿಗೆ ಸರ್ಕಾರದಿಂದ ಶೇ. 90 ರಷ್ಟು ಸಬ್ಸಿಡಿಯಲ್ಲಿ ಲಭ್ಯವಾಗುತ್ತಿರುವ ವಿವಿಧ ಕೃಷಿ ಯಂತ್ರೋಪಕರಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಯಾವ ಯಂತ್ರಗಳಿಗೆ…