Categories: information

ಭಾರತದ ಅತಿ ವಿಚಿತ್ರವಾದ ಈ ನದಿ ಬಗ್ಗೆ ನಿಮಗೆಷ್ಟು ಗೊತ್ತು? ಅಷ್ಟಕ್ಕೂ ಏನಿದರ ವಿಶೇಷ ಗೊತ್ತಾ?

ಸ್ನೇಹಿತರೆ ಭಾರತದ ಹಲವು ನದಿಗಳು ಕಾರ್ಖಾನೆಯ ತ್ಯಾಜ್ಯದಿಂದ ದೊಡ್ಡ ದೊಡ್ಡ ನಗರಗಳ ತ್ಯಾಜ್ಯ ವಸ್ತು ವಿನಿಂದ ಕೂಡಿ ಮಲಿನವಾಗಿವೆ. ಆದರೆ ಅದೊಂದು ನದಿ ಮಾತ್ರ ಸಂಪೂರ್ಣ ತಿಳಿಯಾಗಿದ್ದು ಸ್ವಚ್ಛತೆಗೆ ಹೆಸರುವಾಸಿಯಾಗಿದೆ. ಈ ಕಾರಣದಿಂದಲೇ ಅಲ್ಲಿಗೆ ವರ್ಷದುದ್ದಕ್ಕೂ ಸಾವಿರಾರು ಪ್ರವಾಸಿಗರು ಬರುತ್ತಾರೆ.

Spread the love

ಸ್ನೇಹಿತರೆ ಭಾರತದ ಹಲವು ನದಿಗಳು ಕಾರ್ಖಾನೆಯ ರಾಸಾಯನಿಕದಿಂದ, ದೊಡ್ಡ ದೊಡ್ಡ ನಗರಗಳ ತ್ಯಾಜ್ಯ ವಸ್ತು ವಿನಿಂದ ಕೂಡಿ ಮಲಿನವಾಗಿವೆ. ಆದರೆ ಅದೊಂದು ನದಿ ಮಾತ್ರ ಸಂಪೂರ್ಣ ತಿಳಿಯಾಗಿದ್ದು ಸ್ವಚ್ಛತೆಗೆ ಹೆಸರುವಾಸಿಯಾಗಿದೆ. ಈ ಕಾರಣದಿಂದಲೇ ಅಲ್ಲಿಗೆ ವರ್ಷದುದ್ದಕ್ಕೂ ಸಾವಿರಾರು ಪ್ರವಾಸಿಗರು ಬರುತ್ತಾರೆ. ಹಾಗಾದರೆ ಯಾವುದು ಆ ನದಿ ಮತ್ತು ಅದು ಎಲ್ಲಿದೆ ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.

Thank you for reading this post, don't forget to subscribe!
Davki River

ಸ್ನೇಹಿತರೆ ಆ ನದಿಯ ಹೆಸರು ಡವ್ಕಿ ನದಿ. ವಾಹ್ ಉಮ್ಗೋಟ್ ಎಂದೂ ಕರೆಯಲ್ಪಡುವ ಉಮ್ಗೋಟ್/ಡವ್ಕಿ ನದಿಯು ಭಾರತದ ಮೇಘಾಲಯದ ಪಶ್ಚಿಮ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಜೈನ್ತಿಯಾ ಬೆಟ್ಟಗಳ ಕೆಳಭಾಗದಲ್ಲಿರುವ ಒಂದು ಪುಟ್ಟ ಪಟ್ಟಣವಾದ ಡಾವ್ಕಿಯ ಮೂಲಕ ಹರಿಯುವ ನದಿಯಾಗಿದೆ . ಈ ಪಟ್ಟಣವು ವ್ಯವಹಾರಿಕ ಮತ್ತು ದೇಶದ ಭದ್ರತೆ ದೃಷ್ಟಿಯಿಂದ ಪ್ರಮುಖ ಸ್ಥಳವಾಗಿದೆ. ಅಲ್ಲದೇ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ವ್ಯಾಪಾರ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ .

ಉಮ್ಗೋಟ್, ಭಾರತದ ಸ್ವಚ್ಛ ನದಿಗಳಲ್ಲಿ ಒಂದಾಗಿದ್ದು, ಇದು ಸ್ಥಳೀಯ ಮೀನುಗಾರರಿಗೆ ಪ್ರಮುಖ ಮೀನುಗಾರಿಕೆ ಸ್ಥಳವಾಗಿದೆ . ಅವರ ಜೀವನೋಪಾಯಕ್ಕೆ ಬೆನ್ನೆಲುಬಾಗಿದೆ. ಈ ನದಿಯು ಭಾರತ-ಬಾಂಗ್ಲಾದೇಶದ ಗಡಿಯಲ್ಲಿದ್ದು, ಪ್ರವಾಹದ ಏರಿಕೆಯಿಂದ ಉಂಟಾಗುವ ನದಿಯ ಬಿಳಿ ಭಾಗವು ಎರಡು ದೇಶಗಳ ನಡುವಿನ ಅನಧಿಕೃತ ( unofficial) ಗಡಿಯನ್ನು ಗುರುತಿಸುತ್ತದೆ. ಈ ನದಿಯ ವಿಶೇಷ ಏನೆಂದರೆ ಇಲ್ಲಿನ ನೀರು ಸಂಪೂರ್ಣ ತಿಳಿಯಾಗಿದ್ದು, ನಿಮ್ಮ ಪ್ರತಿಬಿಂಬ ನೀರಿನ ಮೇಲೆ ಬೀಳದೆ ನೀರಿನ ಕೆಳಗೆ ಕಾಣಿಸುತ್ತದೆ. ಅಷ್ಟು ಸ್ವಚ್ಛ ನದಿ ಇದಾಗಿದೆ. ಈ ಕಾರಣಕ್ಕಾಗಿ ಇಲ್ಲಿಗೆ ವರ್ಷದುದ್ದಕ್ಕೂ ಹಲವಾರು ಪ್ರವಾಸಿಗರು ಬಂದು ಈ ನದಿಯ ಸೌಂದರ್ಯವನ್ನು ಆಸ್ವಾದಿಸುತ್ತಾರೆ .

ಉಮ್ಗೋಟ್ ನದಿಯ ಮೇಲೆ ಒಂದು ತೂಗು ಸೇತುವೆ (ಡವ್ಕಿ ಸೇತುವೆ) ತೂಗುಹಾಕಲಾಗಿದೆ. ಇದನ್ನು 1932 ರಲ್ಲಿ ನಿರ್ಮಿಸಲಾಯಿತು.ಇಲ್ಲಿಂದ ದಾವ್ಕಿ ಅಥವಾ ಉಮ್ಗೊಟ್ ನದಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲದು. ಏಪ್ರಿಲ್ 2021 ರಲ್ಲಿ, ಮೇಘಾಲಯ ಸರ್ಕಾರವು ವಿದ್ಯುತ್ ಕೊರತೆಯ ದೃಷ್ಟಿಯಿಂದ ನದಿಗೆ ಅಣೆಕಟ್ಟು ನಿರ್ಮಿಸುವ ನಿರ್ಧಾರವನ್ನು ತೆಗೆದುಕೊಂಡಿತು. ಈ ಯೋಜನೆಯು ಉದ್ದೇಶಿತ 210 MW ಉಮ್ಗೋಟ್ ಜಲವಿದ್ಯುತ್ ಯೋಜನೆಯಾಗಿದ್ದು, ಇದು ಸ್ಥಳೀಯ ಗ್ರಾಮಸ್ಥರಿಂದ ಸಾಕಷ್ಟು ಹಿನ್ನಡೆ ಮತ್ತು ವಿರೋಧವನ್ನು ಎದುರಿಸಿದ್ದರಿಂದ ಅದು ಕೊನೆಗೆ ಅದು ರದ್ದಾಗಿತು.

ಈ ಮೇಲೆ ಕಾಣುವ ಚಿತ್ರ ನೋಡಿದರೆ ನಮಗೆ ಕಂಡು ಬರುತ್ತದೆ. ಮೇಘಾಲಯದ ದಾವ್ಕಿ ನದಿ, ಅದರ ಸ್ಪಷ್ಟ, ಪಾರದರ್ಶಕ ನೀರು ಮತ್ತು ದೈವಿಕತೆ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ ಎಂಬುದು. ಸಾಧ್ಯವಾದರೆ ಒಮ್ಮೆ ನೋಡಿ ಬನ್ನಿ..

ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನೀವು ನಮ್ಮ ವೆಬ್ ಸೈಟಿಗೆ ಮೊದಲ ಬಾರಿ ಬಂದಿದ್ದರೆ ನಮ್ಮ ವೆಬ್ಸೈಟ್ನ ನೋಟಿಫಿಕೇಶನ್ಗಳನ್ನು ‘allow’ ಮಾಡಿಕೊಳ್ಳಿ.

Recent Posts

ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆದುಕೊಳ್ಳುವವರಿಗೆ ಶಾಕಿಂಗ್ ನ್ಯೂಸ್! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು  ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…

55 years ago

Gruhalakshmi: ಗೃಹಲಕ್ಷ್ಮಿ ಯೋಜನೆಯ 16 ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…

55 years ago

KSRTC:ಕೆ ಎಸ್ ಆರ್ ಟಿ ಸಿ ಬಸ್ ದರ ಏರಿಕೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…

55 years ago

ತೊಗರಿ ಬೆಳೆಗಾರರಿಗೆ ಭರ್ಜರಿ ಸಿಹಿ ಸುದ್ದಿ! ತೊಗರಿಗೆ ಭರ್ಜರಿ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ ಸರ್ಕಾರ!

ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ…

55 years ago

ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ದಿನಾಂಕ ವಿಸ್ತರಣೆ ! ಈಗಲೇ ಈ ಕೆಲಸ ಮಾಡಿ

ಇದೀಗ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶುಭ ಸುದ್ದಿಯನ್ನು ನೀಡಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರು ಇದೀಗ ತಮ್ಮ ಬಿಪಿಎಲ್…

55 years ago

PM Awas Yojana: ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ 2.5 ಲಕ್ಷ ರೂಪಾಯಿ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅರ್ಹ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಫಲಾನುಭವಿಗಳಿಗೆ 1.30…

55 years ago