ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಆಳ್ವಿಕೆ ನಡೆಸಿದ ನೂರಾರು ಸಾಮ್ರಾಜ್ಯಗಳು ಅದ್ಭುತ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಆದರೆ ನಿಮಗೆ ಗೊತ್ತಾ ಭಾರತದಲ್ಲಿ ಮಾತ್ರವಲ್ಲದೆ ಹೊರದೇಶದಲ್ಲಿಯೂ ಹಲವು ಹಿಂದೂ ದೇವಾಲಯಗಳಿವೆ ಎಂದು? ಹಾಗಾದರೆ ಯಾವುವು ದೇವಾಲಯಗಳು ಮತ್ತು ಅವು ಯಾವ ದೇಶದಲ್ಲಿ ನೆಲೆಸಿವೆ ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.
ಸ್ನೇಹಿತರೇ ಬಹುಶಃ ಭಾರತದಲ್ಲಿ ಇರುವಷ್ಟು ಹಿಂದೂ ದೇವಾಲಯಗಳು ಜಗತ್ತಿನ ಬೇರಾವ ದೇಶದಲ್ಲೂ ಕಾಣಸಿಗುವುದಿಲ್ಲ. ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಆಳ್ವಿಕೆ ನಡೆಸಿದ ನೂರಾರು ಸಾಮ್ರಾಜ್ಯಗಳು ಅದ್ಭುತ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಆದರೆ ನಿಮಗೆ ಗೊತ್ತಾ ಭಾರತದಲ್ಲಿ ಮಾತ್ರವಲ್ಲದೆ ಹೊರದೇಶದಲ್ಲಿಯೂ ಹಲವು ಹಿಂದೂ ದೇವಾಲಯಗಳಿವೆ ಎಂದು? ಹಾಗಾದರೆ ಯಾವುವು ದೇವಾಲಯಗಳು ಮತ್ತು ಅವು ಯಾವ ದೇಶದಲ್ಲಿ ನೆಲೆಸಿವೆ ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.
Thank you for reading this post, don't forget to subscribe!1. ಅಂಗ್ಕೋರ್ ವಾಟ್ ದೇವಾಲಯ: ಕಾಂಬೋಡಿಯಾದ ದಟ್ಟ ಕಾಡಿನ ನಡುವೆ ನೆಲೆಸಿರುವ ಈ ದೇವಾಲಯವು ಜಗತ್ತಿನ ಅತಿದೊಡ್ಡ ಹಿಂದೂ ದೇವಾಲಯವಾಗಿದೆ. ಕಾಂಬೋಡಿಯಾದ ಖ್ಮೇರ್ ರಾಜವಂಶದ ಸೂರ್ಯವರ್ಮನ್ 2 ಇದನ್ನು ರಚಿಸದನೆಂದು ಇತಿಹಾಸ ಹೇಳುತ್ತದೆ. ಈ ದೇವಾಲಯದ ಮೇಲೆ ಭಾರತದ ಚೋಳ ಸಾಮ್ರಾಜದ ಪ್ರಭಾವವು ಬಹಳಷ್ಟಿದೆ.
2. ಪ್ರಬಂಬನ್ ದೇವಾಲಯ: ಇದು ಇಂಡೋನೇಷ್ಯಾದ ಅತಿದೊಡ್ಡ ಹಿಂದೂ ದೇವಾಲಯವಾಗಿದೆ. ಇದು ಬ್ರಹ್ಮ,ವಿಷ್ಣು,ಮಹೇಶ್ವರ ತ್ರಿಮೂರ್ತಿಗಳ ದೇವಾಲಯವಾಗಿದ್ದು, ಇದನ್ನು ವಿಶ್ವ ಸಂಸ್ಥೆ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿದೆ.
3. ಪಶುಪತಿನಾಥ ದೇವಾಲಯ: ನೇಪಾಳಿಯ ಪಗೋಡ ಶೈಲಿಯಲ್ಲಿ ನಿರ್ಮಿತವಾಗಿರುವ ಈ ದೇವಾಲಯವು ನೇಪಾಳದ ಭಾಗಮತಿ ನದಿಯ ದಡದಲ್ಲಿದೆ. ಇದು ಶಿವನಿಗಾಗಿ ನಿರ್ಮಿಸಿದ ದೇವಾಲಯವಾಗಿದೆ
4. ಪ್ರಿಯ ವಿಹಿಯರ ದೇವಾಲಯ: ಈ ದೇವಾಲಯವು ಶಿವನ ವಿವಿಧ ಅವತಾರಗಳಲ್ಲಿ ಮುಖ್ಯವಾದ ಶಿಖರೇಶ್ವರ ಮತ್ತು ಭದ್ರೇಶ್ವರ ದೇವರಿಗೆ ಸಮರ್ಪಿಸಲಾಗಿದೆ. ಈ ದೇವಾಲಯವು ಕೂಡ ಕಾಂಬೋಡಿಯ ದೇಶದಲ್ಲಿದೆ. ಇದನ್ನು ಕೂಡ ಖ್ಮೇರ್ ರಾಜನಾದ ಸೂರ್ಯವರ್ಮನ್-1 ನಿರ್ಮಿಸಿದ್ದಾನೆ. ಇದನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವೆಂದು ಗುರುತಿಸಲಾಗಿದೆ.
5. ಕತಾಸ್ ರಾಜ್ ದೇವಾಲಯ: ಈ ದೇವಾಲಯವು ಶಿವನಿಗೆ ಎಂದು ನಿರ್ಮಿಸಲಾಗಿದೆ. ಪ್ರಸ್ತುತ ಇದು ಪಾಕಿಸ್ತಾನದಲ್ಲಿದ್ದು ಈ ದೇವಾಲಯದ ಕುರಿತು ಚೀನೀ ಯಾತ್ರಿಕ ಹು-ಯೆನ್-ತ್ಸಾಂಗ್ 7ನೇ ಶತಮಾನದಲ್ಲಿ ದಾಖಲಿಸಿದ್ದಾನೆ.
6. ಆದಿತ್ಯ ಸೂರ್ಯ ದೇವಾಲಯ: ಇದು ಸೂರ್ಯದೇವನಿಗೆ ಸಮರ್ಪಿತವಾದ ದೇವಾಲಯವಾಗಿದ್ದು ಪ್ರಸ್ತುತ ಇದು ಪಾಕಿಸ್ತಾನದ ಮುಲ್ತಾನದಲ್ಲಿದೆ ಈ ದೇವಾಲಯದ ಕುರಿತು ಚೀನಿ ಯಾತ್ರಿಕ ಹು-ಯೆನ್-ತ್ಸಾಂಗ್ ಮತ್ತು ಪರ್ಶಿಯನ್ ಭೋಗೋಳ ತಜ್ಞ ಅಲ್-ಇಸ್ತಕಾರಿ ಇದರ ಬಗ್ಗೆ ದಾಖಲಿಸಿದ್ದಾರೆ. ಈ ದೇವಾಲಯ ವು ಅತ್ಯಧಿಕ ಸಂಪತ್ತಿನಿಂದ ಕೂಡಿತ್ತು. ಹೀಗಾಗಿ ಹಲವಾರು ಬಾರಿ ಮಹಮ್ಮದ್ ಘಜ್ನಿ ದಾಳಿಗೆ ತುತ್ತಾಗಿದೆ.
7. ಮುನೇಶ್ವರಂ ದೇವಾಲಯ: ಈ ದೇವಾಲಯವು ಕೂಡ ಶಿವನಿಗೆ ಸಮರ್ಪಿತವಾದ ದೇವಾಲಯವಾಗಿದ್ದು ಇದು ಅತ್ಯಂತ ಪ್ರಾಚೀನ ಕಾಲದ ದೇವಾಲಯವೆಂದು ಗುರುತಿಸಲಾಗಿದೆ. ಪ್ರಸ್ತುತ ಇದು ಶ್ರೀಲಂಕಾದಲ್ಲಿದೆ.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನೀವು ನಿಮ್ಮ ಜಮೀನಿನ ಆಕಾರಬಂದ್…
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ದಸರಾ ಹಬ್ಬದ ನಿಮಿತ್ತವಾಗಿ ಇತ್ತೀಚೆಗಷ್ಟೇ…
ಹಾಗಾದರೆ ಇಲ್ಲಿಯವರೆಗೆ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ (Pm kisan samman yojana) ಅಡಿಯಲ್ಲಿ ನಿಮ್ಮ ಖಾತೆಗೆ ಎಷ್ಟು…
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…
ರಸಗೊಬ್ಬರ ವಿತರಣೆಗೆ ರೈತರಿಗೆ FID ಕಡ್ಡಾಯವಾಗಿದೆ. ಈ ಹೊಸ ನಿಯಮದ ಉದ್ದೇಶ, ಹೇಗೆ ಕೆಲಸ ಮಾಡುತ್ತದೆ, ರೈತರಿಗೆ ಲಾಭ-ನಷ್ಟಗಳು ಏನು…
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನೀವು ಕೃಷಿ ಚಟುವಟಿಕೆಗಾಗಿ ಬ್ಯಾಂಕಿನಿಂದ…