Categories: information

ಹೊರದೇಶದಲ್ಲಿರುವ ಹಿಂದೂ ದೇವಾಲಯಗಳ ಬಗ್ಗೆ ನಿಮಗೆಷ್ಟು ಗೊತ್ತು? ಜಗತ್ತಿನ ಅತಿ ದೊಡ್ಡ ಹಿಂದೂ ದೇವಾಲಯ ಇರುವುದು ಎಲ್ಲಿ ಗೊತ್ತಾ?

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಆಳ್ವಿಕೆ ನಡೆಸಿದ ನೂರಾರು ಸಾಮ್ರಾಜ್ಯಗಳು ಅದ್ಭುತ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಆದರೆ ನಿಮಗೆ ಗೊತ್ತಾ ಭಾರತದಲ್ಲಿ ಮಾತ್ರವಲ್ಲದೆ ಹೊರದೇಶದಲ್ಲಿಯೂ ಹಲವು ಹಿಂದೂ ದೇವಾಲಯಗಳಿವೆ ಎಂದು? ಹಾಗಾದರೆ ಯಾವುವು ದೇವಾಲಯಗಳು ಮತ್ತು ಅವು ಯಾವ ದೇಶದಲ್ಲಿ ನೆಲೆಸಿವೆ ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.

Spread the love

ಸ್ನೇಹಿತರೇ ಬಹುಶಃ ಭಾರತದಲ್ಲಿ ಇರುವಷ್ಟು ಹಿಂದೂ ದೇವಾಲಯಗಳು ಜಗತ್ತಿನ ಬೇರಾವ ದೇಶದಲ್ಲೂ ಕಾಣಸಿಗುವುದಿಲ್ಲ. ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಆಳ್ವಿಕೆ ನಡೆಸಿದ ನೂರಾರು ಸಾಮ್ರಾಜ್ಯಗಳು ಅದ್ಭುತ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಆದರೆ ನಿಮಗೆ ಗೊತ್ತಾ ಭಾರತದಲ್ಲಿ ಮಾತ್ರವಲ್ಲದೆ ಹೊರದೇಶದಲ್ಲಿಯೂ ಹಲವು ಹಿಂದೂ ದೇವಾಲಯಗಳಿವೆ ಎಂದು? ಹಾಗಾದರೆ ಯಾವುವು ದೇವಾಲಯಗಳು ಮತ್ತು ಅವು ಯಾವ ದೇಶದಲ್ಲಿ ನೆಲೆಸಿವೆ ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.

Thank you for reading this post, don't forget to subscribe!

1. ಅಂಗ್ಕೋರ್ ವಾಟ್ ದೇವಾಲಯ: ಕಾಂಬೋಡಿಯಾದ ದಟ್ಟ ಕಾಡಿನ ನಡುವೆ ನೆಲೆಸಿರುವ ಈ ದೇವಾಲಯವು ಜಗತ್ತಿನ ಅತಿದೊಡ್ಡ ಹಿಂದೂ ದೇವಾಲಯವಾಗಿದೆ. ಕಾಂಬೋಡಿಯಾದ ಖ್ಮೇರ್ ರಾಜವಂಶದ ಸೂರ್ಯವರ್ಮನ್ 2 ಇದನ್ನು ರಚಿಸದನೆಂದು ಇತಿಹಾಸ ಹೇಳುತ್ತದೆ. ಈ ದೇವಾಲಯದ ಮೇಲೆ ಭಾರತದ ಚೋಳ ಸಾಮ್ರಾಜದ ಪ್ರಭಾವವು ಬಹಳಷ್ಟಿದೆ.

2. ಪ್ರಬಂಬನ್ ದೇವಾಲಯ: ಇದು ಇಂಡೋನೇಷ್ಯಾದ ಅತಿದೊಡ್ಡ ಹಿಂದೂ ದೇವಾಲಯವಾಗಿದೆ. ಇದು ಬ್ರಹ್ಮ,ವಿಷ್ಣು,ಮಹೇಶ್ವರ ತ್ರಿಮೂರ್ತಿಗಳ ದೇವಾಲಯವಾಗಿದ್ದು, ಇದನ್ನು ವಿಶ್ವ ಸಂಸ್ಥೆ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿದೆ.

3. ಪಶುಪತಿನಾಥ ದೇವಾಲಯ: ನೇಪಾಳಿಯ ಪಗೋಡ ಶೈಲಿಯಲ್ಲಿ ನಿರ್ಮಿತವಾಗಿರುವ ಈ ದೇವಾಲಯವು ನೇಪಾಳದ ಭಾಗಮತಿ ನದಿಯ ದಡದಲ್ಲಿದೆ. ಇದು ಶಿವನಿಗಾಗಿ ನಿರ್ಮಿಸಿದ ದೇವಾಲಯವಾಗಿದೆ

4. ಪ್ರಿಯ ವಿಹಿಯರ ದೇವಾಲಯ: ಈ ದೇವಾಲಯವು ಶಿವನ ವಿವಿಧ ಅವತಾರಗಳಲ್ಲಿ ಮುಖ್ಯವಾದ ಶಿಖರೇಶ್ವರ ಮತ್ತು ಭದ್ರೇಶ್ವರ ದೇವರಿಗೆ ಸಮರ್ಪಿಸಲಾಗಿದೆ. ಈ ದೇವಾಲಯವು ಕೂಡ ಕಾಂಬೋಡಿಯ ದೇಶದಲ್ಲಿದೆ. ಇದನ್ನು ಕೂಡ ಖ್ಮೇರ್ ರಾಜನಾದ ಸೂರ್ಯವರ್ಮನ್-1 ನಿರ್ಮಿಸಿದ್ದಾನೆ. ಇದನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವೆಂದು ಗುರುತಿಸಲಾಗಿದೆ.

5. ಕತಾಸ್ ರಾಜ್ ದೇವಾಲಯ: ಈ ದೇವಾಲಯವು ಶಿವನಿಗೆ ಎಂದು ನಿರ್ಮಿಸಲಾಗಿದೆ. ಪ್ರಸ್ತುತ ಇದು ಪಾಕಿಸ್ತಾನದಲ್ಲಿದ್ದು ಈ ದೇವಾಲಯದ ಕುರಿತು ಚೀನೀ ಯಾತ್ರಿಕ ಹು-ಯೆನ್-ತ್ಸಾಂಗ್ 7ನೇ ಶತಮಾನದಲ್ಲಿ ದಾಖಲಿಸಿದ್ದಾನೆ.

6. ಆದಿತ್ಯ ಸೂರ್ಯ ದೇವಾಲಯ: ಇದು ಸೂರ್ಯದೇವನಿಗೆ ಸಮರ್ಪಿತವಾದ ದೇವಾಲಯವಾಗಿದ್ದು ಪ್ರಸ್ತುತ ಇದು ಪಾಕಿಸ್ತಾನದ ಮುಲ್ತಾನದಲ್ಲಿದೆ ಈ ದೇವಾಲಯದ ಕುರಿತು ಚೀನಿ ಯಾತ್ರಿಕ ಹು-ಯೆನ್-ತ್ಸಾಂಗ್ ಮತ್ತು ಪರ್ಶಿಯನ್ ಭೋಗೋಳ ತಜ್ಞ ಅಲ್-ಇಸ್ತಕಾರಿ ಇದರ ಬಗ್ಗೆ ದಾಖಲಿಸಿದ್ದಾರೆ. ಈ ದೇವಾಲಯ ವು ಅತ್ಯಧಿಕ ಸಂಪತ್ತಿನಿಂದ ಕೂಡಿತ್ತು. ಹೀಗಾಗಿ ಹಲವಾರು ಬಾರಿ ಮಹಮ್ಮದ್ ಘಜ್ನಿ ದಾಳಿಗೆ ತುತ್ತಾಗಿದೆ.

7. ಮುನೇಶ್ವರಂ ದೇವಾಲಯ: ಈ ದೇವಾಲಯವು ಕೂಡ ಶಿವನಿಗೆ ಸಮರ್ಪಿತವಾದ ದೇವಾಲಯವಾಗಿದ್ದು ಇದು ಅತ್ಯಂತ ಪ್ರಾಚೀನ ಕಾಲದ ದೇವಾಲಯವೆಂದು ಗುರುತಿಸಲಾಗಿದೆ. ಪ್ರಸ್ತುತ ಇದು ಶ್ರೀಲಂಕಾದಲ್ಲಿದೆ.

ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.

Recent Posts

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…

56 years ago

Trump Warns Oman Over Hormuz Strait Mediation With Iran

Amid escalating tensions in the Strait of Hormuz, the United States has launched fresh strikes…

56 years ago

ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಿಎಂ ರಾಜೀನಾಮೆ ನೀಡಬಹುದೇ..?

ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…

56 years ago

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…

56 years ago