Categories: information

ಹಳ್ಳಿಯಲ್ಲೇ ಸ್ವಂತ ಬಿಸಿನೆಸ್! ‘ಗ್ರಾಮ ಒನ್’ ಫ್ರಾಂಚೈಸಿ ಕೇಂದ್ರಕ್ಕೆ ಅರ್ಜಿ ಆಹ್ವಾನ; ಜ.15 ಲಾಸ್ಟ್ ಡೇಟ್, ಮಿಸ್ ಮಾಡ್ಕೋಬೇಡಿ!

ಹಳ್ಳಿಯಲ್ಲೇ ಸ್ವಂತ ಬಿಸಿನೆಸ್ ಆರಂಭಿಸಲು ಅವಕಾಶ! ಸರ್ಕಾರದ ಗ್ರಾಮ ಒನ್ ಫ್ರಾಂಚೈಸಿ ಕೇಂದ್ರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜನವರಿ 15 ಕೊನೆಯ ದಿನ, ಅವಕಾಶ ಮಿಸ್ ಮಾಡ್ಕೋಬೇಡಿ.

Spread the love

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ‘ಗ್ರಾಮ ಒನ್’ (Grama One) ಯೋಜನೆಯಡಿ ಫ್ರಾಂಚೈಸಿಗಳನ್ನು ಆರಂಭಿಸಲು ಇ-ಆಡಳಿತ ನಿರ್ದೇಶನಾಲಯವು ಅರ್ಜಿಗಳನ್ನು ಆಹ್ವಾನಿಸಿದೆ. ಇದು ಗ್ರಾಮೀಣ ಭಾಗದ ಜನರಿಗೆ ಕೇವಲ ಸೇವೆಯಲ್ಲ, ವಿದ್ಯಾವಂತ ಯುವಕ-ಯುವತಿಯರಿಗೆ ತಮ್ಮೂರಿನಲ್ಲೇ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಸಿಕ್ಕಿರುವ ಅದ್ಭುತ ಅವಕಾಶವಾಗಿದೆ.

Thank you for reading this post, don't forget to subscribe!

ಏನಿದು ಗ್ರಾಮ ಒನ್ ಯೋಜನೆ?

ಗ್ರಾಮ ಮಟ್ಟದಲ್ಲೇ ನಾಗರಿಕರಿಗೆ ಒಂದೇ ಸೂರಿನಡಿ ವಿವಿಧ ಸರ್ಕಾರಿ ಮತ್ತು ಖಾಸಗಿ ಸೇವೆಗಳನ್ನು ಒದಗಿಸಲು 2020-21ರ ಆಯವ್ಯಯದಲ್ಲಿ ಈ ಯೋಜನೆಯನ್ನು ಘೋಷಿಸಲಾಯಿತು. ಇಲ್ಲಿ ಬ್ಯಾಂಕಿಂಗ್ ಸೇವೆಗಳು, ಆರ್‌ಟಿಐ ಅರ್ಜಿಗಳು ಸೇರಿದಂತೆ ಸುಮಾರು 800ಕ್ಕೂ ಅಧಿಕ ಸೇವೆಗಳು ಲಭ್ಯವಿರುತ್ತವೆ. ಸಾರ್ವಜನಿಕರ ಅನುಕೂಲಕ್ಕಾಗಿ ಈ ಕೇಂದ್ರಗಳು ವಾರದ ಏಳು ದಿನಗಳೂ ಸಹ ಬೆಳಿಗ್ಗೆ 8:00 ರಿಂದ ರಾತ್ರಿ 8:00 ರವರೆಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತವೆ.

ಗ್ರಾಮ ಒನ್ ಕೇಂದ್ರದಿಂದ ಸಾರ್ವಜನಿಕರಿಗೆ ಆಗುವ ಲಾಭಗಳು:

  • 1.ಅಲೆಯುವ ಅಗತ್ಯವಿಲ್ಲ: ಸಣ್ಣಪುಟ್ಟ ದಾಖಲೆಗಳಿಗಾಗಿ ತಾಲೂಕು ಅಥವಾ ಜಿಲ್ಲಾ ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ.
    2.ಸಮಯ ಮತ್ತು ಹಣ ಉಳಿತಾಯ: ಹಳ್ಳಿಯಲ್ಲೇ ಸೇವೆ ಸಿಗುವುದರಿಂದ ಪ್ರಯಾಣದ ಖರ್ಚು ಮತ್ತು ಕಾಯುವ ಸಮಯ ಉಳಿಯುತ್ತದೆ.
    3.ಮಧ್ಯವರ್ತಿಗಳ ಹಾವಳಿ ಮುಕ್ತ: ಪಾರದರ್ಶಕ ವ್ಯವಸ್ಥೆ ಇರುವುದರಿಂದ ಯಾವುದೇ ಲಂಚ ಅಥವಾ ಮಧ್ಯವರ್ತಿಗಳ ಕಾಟವಿರುವುದಿಲ್ಲ.
    4.ಅನುಕೂಲಕರ ಸಮಯ: ರೈತರು ಮತ್ತು ಕಾರ್ಮಿಕರು ತಮ್ಮ ಕೆಲಸ ಮುಗಿಸಿ ಸಂಜೆ ವೇಳೆಯೂ ಇಲ್ಲಿ ಸೇವೆ ಪಡೆಯಬಹುದು.

ಯಾವ ಜಿಲ್ಲೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ

ಪ್ರಸ್ತುತ ಕೇವಲ ಕಲಬುರಗಿ ಮತ್ತು ಮೈಸೂರು ವಿಭಾಗದ ಜಿಲ್ಲೆಗಳ ಅಭ್ಯರ್ಥಿಗಳಿಗೆ ಮಾತ್ರ ಈ ಅವಕಾಶವಿದೆ:

ಮೈಸೂರು ವಿಭಾಗ: ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ ಹಾಗೂ ಕೊಡಗು ಜಿಲ್ಲೆಗಳು.
ಕಲಬುರಗಿ ವಿಭಾಗ: ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳು.

ಅರ್ಜಿ ಸಲ್ಲಿಸಲು ಅರ್ಹತೆಗಳು ಮತ್ತು ಬಂಡವಾಳ:

  • ಶೈಕ್ಷಣಿಕ ಅರ್ಹತೆ: ಕನಿಷ್ಠ ಪಿಯುಸಿ (PUC II), ಡಿಪ್ಲೊಮಾ, ಐಟಿಐ ಅಥವಾ ಯಾವುದೇ ಪದವಿ/ಸ್ನಾತಕೋತ್ತರ ಪದವಿ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯ.
    ಬಂಡವಾಳ: ಕೇಂದ್ರ ಸ್ಥಾಪಿಸಲು ಸುಮಾರು 1 ರಿಂದ 2 ಲಕ್ಷ ರೂಪಾಯಿಗಳ ಬಂಡವಾಳ ಹೂಡುವ ಸಾಮರ್ಥ್ಯವಿರಬೇಕು.
    ಶುಲ್ಕಗಳು: * ಅರ್ಜಿ ಶುಲ್ಕ: ರೂ. 100 (ಮರುಪಾವತಿಸಲಾಗುವುದಿಲ್ಲ).
    ಭದ್ರತಾ ಠೇವಣಿ: ಆಯ್ಕೆಯಾದ ನಂತರ ರೂ. 5000 ಪಾವತಿಸಬೇಕು (ಇದು ಮರುಪಾವತಿಸಲ್ಪಡುತ್ತದೆ).
    ಪೊಲೀಸ್ ಪ್ರಮಾಣ ಪತ್ರ: ಅರ್ಜಿದಾರರು ಕಡ್ಡಾಯವಾಗಿ ಪೊಲೀಸ್ ತಪಾಸಣಾ ಪ್ರಮಾಣ ಪತ್ರವನ್ನು ಒದಗಿಸಬೇಕು.

ಕೇಂದ್ರಕ್ಕೆ ಬೇಕಾದ ಮೂಲಸೌಕರ್ಯ ಮತ್ತು ತಾಂತ್ರಿಕ ಸಾಮಗ್ರಿಗಳು:

ಕೇಂದ್ರವನ್ನು ನಡೆಸಲು ಈ ಕೆಳಗಿನ ಸೌಲಭ್ಯಗಳು ಕಡ್ಡಾಯವಾಗಿ ಇರಬೇಕು:

  • 1.ಜಾಗ: ಕನಿಷ್ಠ 100 ಚದರ ಅಡಿ ವಿಸ್ತೀರ್ಣದ ಪ್ರತ್ಯೇಕ ಕೊಠಡಿ. ಇದು ಗ್ರಾಮದ ಪ್ರಮುಖ ಸ್ಥಳದಲ್ಲಿರಬೇಕು.
    2.ವಿನ್ಯಾಸ: ನೆಲಹಾಸು ಟೈಲ್ಸ್ ಅಥವಾ ಗ್ರಾನೈಟ್‌ನಿಂದ ಇರಬೇಕು. ಉತ್ತಮ ಗಾಳಿ-ಬೆಳಕು ಮತ್ತು ಗ್ರಾಹಕರಿಗಾಗಿ 4 ಕುರ್ಚಿಗಳಿರಬೇಕು.
    3.ಸುರಕ್ಷತೆ: ಸಿ.ಸಿ.ಟಿ.ವಿ ಕ್ಯಾಮೆರಾ ಮತ್ತು ಮಾಹಿತಿ ಪ್ರದರ್ಶನಕ್ಕಾಗಿ ಎಲ್.ಸಿ.ಡಿ ಟಿವಿ ಇರಬೇಕು.
    4.ತಾಂತ್ರಿಕ ಉಪಕರಣಗಳು: * ಕನಿಷ್ಠ i3 ಪ್ರೊಸೆಸರ್ ಇರುವ ಡೆಸ್ಕ್‍ಟಾಪ್ ಅಥವಾ ಲ್ಯಾಪ್‍ಟಾಪ್.
    ಮಲ್ಟಿ ಫಂಕ್ಷನ್ ಪ್ರಿಂಟರ್ ಮತ್ತು ಸ್ಕ್ಯಾನರ್.
    ಬಯೋಮೆಟ್ರಿಕ್ ಸ್ಕ್ಯಾನರ್, ವೆಬ್ ಕ್ಯಾಮರಾ ಮತ್ತು ವೈ-ಫೈ ರಿಸೀವರ್.
    5.ಇಂಟರ್ನೆಟ್: ಕನಿಷ್ಠ ಇಬ್ಬರು ಸೇವೆ ಒದಗಿಸುವವರಿಂದ (ISPs) ಸ್ಥಿರವಾದ ಅಂತರ್ಜಾಲ ಸಂಪರ್ಕ ಇರಬೇಕು.

ಅರ್ಜಿ ಸಲ್ಲಿಸುವ ವಿಧಾನ (Step-by-Step):

1.ಅಧಿಕೃತ ವೆಬ್‌ಸೈಟ್

https://kal-mys.gramaone.karnataka.gov.in/

2.New Registration’ ಮೇಲೆ ಕ್ಲಿಕ್ ಮಾಡಿ ಮೊಬೈಲ್ ಮತ್ತು ಇಮೇಲ್ ಮೂಲಕ ನೋಂದಣಿ ಮಾಡಿ.
3.ನಿಮ್ಮ ವೈಯಕ್ತಿಕ ವಿವರ, ಶಿಕ್ಷಣ ಮತ್ತು ಕೇಂದ್ರ ಸ್ಥಾಪಿಸುವ ಗ್ರಾಮದ ಮಾಹಿತಿ ತುಂಬಿ.
4.ಗುರುತಿನ ಚೀಟಿ, ಶೈಕ್ಷಣಿಕ ದಾಖಲೆ, ಸ್ಥಳದ ಫೋಟೋ ಮತ್ತು ಪೊಲೀಸ್ ಪ್ರಮಾಣ ಪತ್ರ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
5.ರೂ. 100 ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಿ.
ಕೊನೆಯಲ್ಲಿ ‘Submit’ ಬಟನ್ ಒತ್ತಿ, ‘ಅರ್ಜಿ ಉಲ್ಲೇಖ ಸಂಖ್ಯೆ’ಯನ್ನು ಸೇವ್ ಮಾಡಿಕೊಳ್ಳಿ.

ನೆನಪಿರಲಿ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಜನವರಿ 2026, ಸಂಜೆ 6:00 ಗಂಟೆ.

ಪ್ರಮುಖ ಎಚ್ಚರಿಕೆ: ಮೋಸ ಹೋಗಬೇಡಿ!

ಗ್ರಾಮ ಒನ್ ಫ್ರಾಂಚೈಸಿ ಹೆಸರಿನಲ್ಲಿ ಯಾವುದೇ ವ್ಯಕ್ತಿಗೆ ನಗದು ಹಣ (Cash) ನೀಡಬೇಡಿ. ಬಿಎಲ್‌ಎಸ್ ಗ್ರೂಪ್ ತನ್ನ ಪ್ರತಿನಿಧಿಗಳಿಗೆ ನಗದು ಪಡೆಯಲು ಅಧಿಕಾರ ನೀಡಿಲ್ಲ. ಎಲ್ಲಾ ಪಾವತಿಗಳು ಆನ್‌ಲೈನ್ ಮೂಲಕವೇ ನಡೆಯಬೇಕು. ಯಾರಾದರೂ ಹಣ ಕೇಳಿದರೆ ತಕ್ಷಣ ದೂರು ನೀಡಿ:

  • ದೂರವಾಣಿ: 91487 12473 / 080 22221934
    ಇಮೇಲ್: care@blsinternational.net

ಓದುಗರಲ್ಲಿ ವಿನಂತಿ,

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://chat.whatsapp.com/FM1qVgdNtJm5m1M9SL0BHc?mode=ac_t

Recent Posts

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…

56 years ago

Trump Warns Oman Over Hormuz Strait Mediation With Iran

Amid escalating tensions in the Strait of Hormuz, the United States has launched fresh strikes…

56 years ago

ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಿಎಂ ರಾಜೀನಾಮೆ ನೀಡಬಹುದೇ..?

ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…

56 years ago

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…

56 years ago