WhatsApp Group                             Join Now            
   
                    Telegram Group                             Join Now            
Spread the love

ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ಮೀಡಿಯಾ ಚಾಣಕ್ಯ ಆಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ.ಈಗ ಸ್ನೇಹಿತರೆ ನೈರುತ್ಯ ಮಾನ್ಸೂನ್ ತನ್ನ ಕೊನೆ ಹಂತದಲ್ಲಿದ್ದು. ಈಗ ಶೀಘ್ರದಲ್ಲೇ ಚಳಿಗಾಲ ಪ್ರಾರಂಭವಾಗುವ ನೀರಿಕ್ಷೆಯಲ್ಲಿ ಇದೆ. ಈಗ ಈ ಒಂದು ನಡುವೆ ರಾಜ್ಯದ ಹಲವಾರು ಪ್ರದೇಶಗಳಲ್ಲಿ ಮಳೆ ಈಗ ಮುಂದುವರೆಯುವ ಸಾಧ್ಯತೆ ಇದೆ. ಹವಾಮಾನ ಇಲಾಖೆಯು ನೀಡಿರುವ ಮಾಹಿತಿ ಪ್ರಕಾರ ಅಕ್ಟೋಬರ್ 28 ರವರೆಗೆ ಕರ್ನಾಟಕದಲ್ಲಿ ಬಾರಿ ಮಳೆ ಆಗುವ ಸಾಧ್ಯತೆ ಇದೆ.

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಹಾಗೆಯೇ ಈಗ ಈ ಒಂದು ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈಗ ಎಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಲಾಗಿದೆ. ಅದೇ ರೀತಿಯಾಗಿ ಭಾರತೀಯ ಹವಾಮಾನ ಇಲಾಖೆಯು ಈ ಹಿಂದೆ ಅಕ್ಟೋಬರ್ 21ರವರೆಗೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಮುನ್ಸೂಚನೆಯನ್ನು ನೀಡಿತ್ತು. ಅದೇ ರೀತಿಯಾಗಿ ಈ ಒಂದು ಅವಧಿಯನ್ನು ಈಗ ವಿಸ್ತರಣೆ ಮಾಡಲಾಗಿದೆ. ಈಶಾನ್ಯ ಮಾನ್ಸೂನ್ ಪ್ರಾರಂಭಕ್ಕೆ ಮುನ್ನ ನೈರುತ್ಯ ಮಾನ್ಸೂನ್ ನಿರ್ಗಮಿಸುತ್ತಿರುವ ಕಾರಣ ನಮ್ಮ ರಾಜ್ಯದಲ್ಲಿ ಮಳೆಯ ಹೆಚ್ಚಾಗುವ ಸಾಧ್ಯತೆ ಇದೆ.

ಅದೇ ರೀತಿಯಾಗಿ ಅಕ್ಟೋಬರ್ 21ರ ಸಂಜೆ ಬೆಳಿಗ್ಗೆ ನೈರುತ್ಯ ಮಾನ್ಸೂನ್ ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಹಿಂದೆ ಸರಿದಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಈಗ ಮುಂದಿನ ವಾರದೊಳಗೆ ಇದು ಇಡೀ ರಾಜ್ಯದಿಂದ ನಿರ್ಗಮಿಸುವ ನಿರೀಕ್ಷೆ ಇದೆ. ಆದರೆ ಈ ಒಂದು ಸಂದರ್ಭದಲ್ಲಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಆಗುವ ಸಾಧ್ಯತೆ ಇದೆ. ಮುಖ್ಯವಾಗಿ ಈಗ ನಮ್ಮ ಕರ್ನಾಟಕದ ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಅಧಿಕ ಮಳೆ ಆಗುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆಯು ಮಾಹಿತಿಯನ್ನು ನೀಡಿದೆ. ಹಾಗೆ ಆ ಒಂದು ಜಿಲ್ಲೆಗಳಲ್ಲಿ ಈಗ ಎಲ್ಲೋ ಅಲರ್ಟ್  ಘೋಷಣೆ ಮಾಡಿದೆ.

ಪ್ರಸ್ತುತ ವರ್ಷದ ಮಳೆಯ ಸ್ಥಿತಿಗತಿ ಏನು?

ಈಗ ಕರ್ನಾಟಕದ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣ ಕೇಂದ್ರದ ಮಾಹಿತಿ ಪ್ರಕಾರ ಈಗ ಈ ಒಂದು ವರ್ಷ ನೈರುತ್ಯ ಮಾನ್ಸೂನ್ ಮಳೆಯಾಗಿದ್ದರು. ಅಕ್ಟೋಬರ್ ತಿಂಗಳವರೆಗೆ ಮಳೆಯ ಪ್ರಮಾಣದಲ್ಲಿ ಈಗಾಗಲೇ ಇಳಿಕೆಯಾಗುವ ಸಾಧ್ಯತೆ ಇದೆ. ಈಗ ಉತ್ತರ ಒಳನಾಡು ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದೆ. ಆದರೆ ಈಗ ಬೆಂಗಳೂರು ಭಾಗವನ್ನು ಒಳಗೊಂಡಿರುವ ದಕ್ಷಣೆ ಒಳನಾಡು ಜಿಲ್ಲೆಗಳಲ್ಲಿ ಈಗ ಮಳೆಯ ಪ್ರಮಾಣದಲ್ಲಿ ಗಣನೀಯ ಏರಿಕೆ ಆಗುವ ಸಾಧ್ಯತೆ ಇದೆ.

ಮಳೆ ಎಚ್ಚರಿಕೆ ಏನು?

ಈ ಒಂದು ಹವಾಮಾನ ಇಲಾಖೆ ಅಕ್ಟೋಬರ್ 21ಮತ್ತು 22 ರಂದು ರಾಜ್ಯದ 14 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಅನ್ನು ನೀಡಿದೆ. ಈಗ ಈ ಒಂದು ಎಚ್ಚರಿಕೆಯೂ ಮಂಡ್ಯ, ಕೋಲಾರ, ಕೊಡಗು, ಹಾಸನ, ಚಿಕ್ಕಮಂಗಳೂರು, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಶಿವಮೊಗ್ಗ, ಬೆಂಗಳೂರು ನಗರ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಈಗ ಅನ್ವಯವಾಗುತ್ತದೆ. ಹಾಗೆ ಈ ಒಂದು ಪ್ರದೇಶಗಳಲ್ಲಿ ಭಾರಿ ಮಳೆ ಆಗುವ ನಿರೀಕ್ಷೆ ಇದೆ.

ಆದಕಾರಣ ಇನ್ನು ಕೆಲವು ದಿನಗಳ ಕಾಲ ಈ ಒಂದು ಮಳೆಯೂ ಜಾಸ್ತಿಯಾಗುವ ಸಂಭವವಿದೆ ಎಂದು ಈಗ ಹವಾಮಾನ ಇಲಾಖೆಯು ಮಾಹಿತಿಯನ್ನು ನೀಡಿದೆ. ಆದ ಕಾರಣ ಮಳೆ ಬಗ್ಗೆ ಮಾಹಿತಿಯನ್ನು ಪಡೆದುಕೊಂಡ ಈಗ ಹೊರಗಡೆ ಓಡಾಡುವುದು ಉತ್ತಮ.

ಓದುಗರಲ್ಲಿ ವಿನಂತಿ,

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode

By

Leave a Reply

Your email address will not be published. Required fields are marked *