ಇವರಿಗೇ ಯಾಕೆ ಸಿಕ್ಕಿತು ನೊಬೆಲ್ ಪ್ರೈಜ್? ಇವರು ಮಾಡಿದ್ದು ಅದೆಂಥ ಅನ್ವೇಷಣೆ ಗೊತ್ತಾ?

Spread the love

ಸ್ನೇಹಿತರೇ 2023 ನೇ ಸಾಲಿನ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿಯು ಹಂಗೇರಿಯ ಕ್ಯಾಟಲಿನ ಕ್ಯಾರಿಕೋ ಮತ್ತು ಅಮೆರಿಕಾದ ವೈದ್ಯ ಮತ್ತು ವಿಜ್ಞಾನಿಯಾದ ಡ್ರಿವ್ ವಿಸ್ಮನ್ ಅವರಿಗೆ ದೊರೆತಿದೆ.ಈ ಪ್ರಶಸ್ತಿಯನ್ನ ರಾಯಲ್ ಸ್ವಿಡಿಶ್ ಅಕಾಡೆಮಿ ಆಫ್ ಸೈನ್ಸ್ ಅಕಾಡೆಮಿ ಸಂಸ್ಥೆಯು ನೀಡುತ್ತದೆ. ಅಂದಹಾಗೆ ಈ ವರ್ಷದ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಇವರಿಗೇ ಯಾಕೆ ನೀಡಿದರು ಎಂಬ ಪ್ರಶ್ನೆಗೆ ಇವತ್ತಿನ ಈ ಅರ್ಟಿಕಲ್ ನಲ್ಲಿ ಉತ್ತರ ತಿಳಿದುಕೊಳ್ಳೋಣ ಬನ್ನಿ.

Thank you for reading this post, don't forget to subscribe!

ಸ್ನೇಹಿತರೇ ಕ್ಯಾಟಾಲಿನ ಮತ್ತು ವಿಸ್ಮನ್ ಅವರು 1990 ರ ದಶಕದಲ್ಲಿ ಜಂಟಿಯಾಗಿ mRNA ವ್ಯಾಕ್ಸಿನ್ ಮೇಲೆ ಸಂಶೋಧನೆಯನ್ನು ಶುರು ಮಾಡುತ್ತಾರೆ. mRNA ವ್ಯಾಕ್ಸಿನ್ ಅಂದರೆ ಕೊರೋನ ವೈರಸ್ ದೇಹದ ದೇಹಕೋಶದಲ್ಲಿನ ನುಕ್ಲೀಯಸ್ ನಲ್ಲಿರುವ DNA ಯಿಂದ mRNA ಹೊರತೆಗೆದು ಅದನ್ನು ಲ್ಯಾಬಿನಲ್ಲಿ ರೂಪಾಂತರ ಮಾಡಿ ನಮ್ಮ ದೇಹದೊಳಕ್ಕೆ ಇಂಜೆಕ್ಷನ್ ಮೂಲಕ ಸೇರಿಸಲಾಗುತ್ತದೆ. ಹೀಗೆ ದೇಹದೊಳಕ್ಕೆ ಬಂದ ಈ mRNA ಗೆ ಪ್ರತಿಯಾಗಿ ನಮ್ಮ ದೇಹವು ಪ್ರತಿರೋಧವನ್ನು ಬೆಳೆಸಿಕೊಳ್ಳುತ್ತದೆ ಮತ್ತು ಈ ಜೀವಾಣುವನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ. ಮುಂದೆ ಆ ವೈರಸ್ ನಮ್ಮ ದೇಹದಲ್ಲಿ ಬಂದಾಗ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯು ಈ ಮುಂಚೆ ನಾವು ಲ್ಯಾಬಿನಲ್ಲಿ ಕೃತಕವಾಗಿ ತಯಾರಿಸಿದ್ದ ಅದೇ ವೈರಾಣುವಿನ mRNA ಬಗ್ಗೆ ಈ ಮುಂಚೆ ತಾನು ನೆನಪಿಟ್ಟುಕೊಂಡಿದ್ದನ್ನು ಮರು ನೆನಪಿಸಿಕೊಂಡು ಅದನ್ನು ಕೊಂದು ಹಾಕುತ್ತದೆ. ಆ ಮೂಲಕ ನಮ್ಮನ್ನು ಕೋರೋನ ವೈರಸ್ ನಿಂದ ರಕ್ಷಿಸುತ್ತದೆ. ಇಂತಹ ಅದ್ಭುತ ವ್ಯಾಕ್ಸಿನ್ ಅನ್ನು ಕೊರೋನ ಸಂದರ್ಭದಲ್ಲಿ ತಯಾರಿಸಿ ಕ್ಯೋಟ್ಯಂತರ ಜನರ ಜೀವ ಉಳಿಸಿದ ಕೀರ್ತಿ ಕೂಡ ಇವರಿಗೆ ಸಲ್ಲುತ್ತದೆ. ಈ ಕಾರಣದಿಂದ ಅವರ ಈ ಸಾಧನೆಗೆ 2023 ರ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿ ದೊರಕಿದೆ.

ಇದನ್ನೂ ಓದಿ…

ನೊಬೆಲ್ ಪ್ರಶಸ್ತಿ ಇತಿಹಾಸದ ಬಗ್ಗೆ ನಿಮಗೆಷ್ಟು ಗೊತ್ತು?

ನೊಬೆಲ್ ಪ್ರಶಸ್ತಿಯ ಇತಿಹಾಸ :
ಸ್ನೇಹಿತರೆ ನಮಗೆಲ್ಲ ಗೊತ್ತಿರುವಂತೆ ನೊಬೆಲ್ ಪ್ರಶಸ್ತಿಯು ಜಗತ್ತಿನ ಅತ್ಯುನ್ನತ ಪ್ರಶಸ್ತಿಯಾಗಿದ್ದು ಇದರ ಬೆಲೆ ಸರಿ ಸುಮಾರು ಎಂಟು ಕೋಟಿಯವರೆಗೆ ಬೆಲೆಬಾಳುತ್ತದೆ. ಹಾಗಂತ ಇದನ್ನ ಎಲ್ಲರಿಗೂ ಕೊಡಲಾಗುವುದಿಲ್ಲ ಕೇವಲ ಅಂತಹ ಜನರಿಗೆ ಮಾತ್ರ ಕೊಡಲಾಗುತ್ತದೆ ಯಾರು ಜಗತ್ತಿನ ಮನುಕುಲದ ಒಳಿತಿಗಾಗಿ ತಮ್ಮ ಶ್ರಮವನ್ನ ಹಾಕಿರುತ್ತಾರೋ ಮತ್ತು ತಮ್ಮ ಇಡೀ ಜೀವನವನ್ನ ಮುಡಿಪಾಗಿಟ್ಟಿರುತ್ತಾರೋ ಅಂತವರಿಗೆ ಮಾತ್ರ ನೀಡಲಾಗುತ್ತದೆ. ಹಾಗಾದರೆ ಈ ಪ್ರಶಸ್ತಿಯ ಇತಿಹಾಸ ಏನು ಇದನ್ನು ಸ್ಥಾಪಿಸಿದವರು ಯಾರು ಮತ್ತು ಯಾವ ಕಾರಣಕ್ಕಾಗಿ ಇದನ್ನು ಸ್ಥಾಪಿಸಲಾಯಿತು ಎಂಬ ಇದರ ಸಂಪೂರ್ಣ ವಿವರವನ್ನು ಇವತ್ತಿನ ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.

ಸ್ನೇಹಿತರೆ ನೊಬೆಲ್ ಪ್ರಶಸ್ತಿಯನ್ನು 191ರಲ್ಲಿ ಸ್ವೀಡಿಶ್ನ ವಿಜ್ಞಾನಿಯಾದ ಅಲ್ಫ್ರೆಡ್ ನೊಬೆಲ್ ಅವರ ಸ್ಮರಣಾರ್ಥವಾಗಿ ಇದನ್ನ ಸ್ಥಾಪಿಸಲಾಯಿತು. ಜಗತ್ತಿನ ಮಾನವ ಸಂಕುಲದ ಒಳಿತಿಗಾಗಿ ಕೊಡುಗೆ ನೀಡಿದಂತಹ ಮಹಾನ್ ಸಾಧಕರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಇದನ್ನು ಆರು ಕ್ಷೇತ್ರಗಳ ಸಾಧಕರಿಗೆ ಮಾತ್ರ ನೀಡಲಾಗುತ್ತದೆ. ಅವು ಯಾವುವೆಂದರೆ ಸಾಹಿತ್ಯ ಬೌತಶಾಸ್ತ್ರ ರಸಾಯನಶಾಸ್ತ್ರ ಅರ್ಥಶಾಸ್ತ್ರ ವಿಜ್ಞಾನ ಶಾಂತಿ ಮತ್ತು ಔಷಧಿಯ ಶಾಸ್ತ್ರ (ಶರೀರ ಶಾಸ್ತ್ರ).
ಸ್ನೇಹಿತರೆ ವಿಡಿಯೋ ನನ್ನ ಪ್ರಸಿದ್ಧ ವಿಜ್ಞಾನಿಯಾದ ಅಲ್ಫ್ರೆಡ್ ನೊಬಲನು 1896ರಲ್ಲಿ ತಾನು ಸಾಯುವ ಮುಂಚೆ ತನ್ನ ಉಯಿಲಿನಲ್ಲಿ ತನ್ನ ಎಲ್ಲಾ ಆಸ್ತಿಯನ್ನು ವಿಜ್ಞಾನಿಗಳ ಸಾಧನೆಗೆ ಕೊಡುವುದಕ್ಕೆ ಮೀಸಲಿಡಬೇಕೆಂದು ಬರೆದಿಟ್ಟಿದ್ದನು. ಹೀಗಾಗಿ ಈ ಪ್ರಶಸ್ತಿಗೆ ಅವನ ಹೆಸರನ್ನೇ ಇಡಲಾಯಿತು ಅದುವೇ ನೋಬೆಲ್ ಪ್ರೈಸ್. ಈ ಪ್ರಶಸ್ತಿಯನ್ನು ಮೊಟ್ಟಮೊದಲ ಬಾರಿಗೆ 1901 ರಲ್ಲಿ ಕೊಡಲಾಯಿತು. ಮೂಲವಾಗಿ ಇದನ್ನ ಕೇವಲ ಐದು ಕ್ಷೇತ್ರಗಳಿಗೆ ಮಾತ್ರ ನೀಡಲಾಗುತ್ತಿತ್ತು ಆದರೆ 1968 ರಲ್ಲಿ ಸ್ವೇಟನನ್ನ ಕೇಂದ್ರ ಬ್ಯಾಂಕ್ ಆದ ಸ್ವರ್ಗೀಸ್ ರಿಕ್ಸ್ ಬ್ಯಾಂಕ್ ಅರ್ಥಶಾಸ್ತ್ರದಲ್ಲಿಯೂ ಕೂಡ ಸಾಧನೆ ಮಾಡಿದ ವಿಜ್ಞಾನಿಗಳಿಗೆ ಈ ಪ್ರಶಸ್ತಿಯನ್ನು ಕೊಡಬೇಕೆಂದು ಘೋಷಿಸಿತು ಅಂದಿನಿಂದ ನೊಬೆಲ್ ಪ್ರಶಸ್ತಿಯನ್ನು ಒಟ್ಟು ಆರು ಕ್ಷೇತ್ರಗಳಿಗೆ ಕೊಡಲಾಗುತ್ತದೆ.
ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಸಾಧಕರಿಗೆ ಒಂದು ಮೆಡಲ್ ಅದರ ಜೊತೆಗೆ ಒಂದು ಸರ್ಟಿಫಿಕೇಟ್ ಮತ್ತು ಎಂಟು ಕೋಟಿಯ ಮೊತ್ತವನ್ನು ನೀಡಲಾಗುತ್ತದೆ. ಹೀಗೆ ನೀಡಲಾದ ಈ ಪದಕವು 24 ಕ್ಯಾರೆಟ್ ನಷ್ಟು ಬಂಗಾರವನ್ನು ಹೊಂದಿರುತ್ತದೆ. ಈ ಪ್ರಶಸ್ತಿಯನ್ನು ಸ್ವೀಡನ್ ನ ರಾಜಧಾನಿಯಾದ ಸ್ಟಾಕ್ ಹೋಂನಲ್ಲಿ ಪ್ರತಿವರ್ಷ ಡಿಸೆಂಬರ್ ಹತ್ತನೇ ತಾರೀಖಿನಂದು ಅಲ್ಫ್ರೆಡ್ ನೊಬೆಲ್ ಅವರ ಸ್ಮರಣಾರ್ಥವಾಗಿ ನೀಡಲಾಗುತ್ತದೆ.

ಇದನ್ನೂ ಓದಿ..

ಮುಚುವಲ್ ಫಂಡ್ ಎಂದರೇನು? ಇದರಿಂದಾಗುವ ಲಾಭಗಳೇನು ಗೊತ್ತಾ?

ಸ್ನೇಹಿತರೆ ಇತ್ತೀಚೆಗೆ ಶೇರ್ ಮಾರ್ಕೆಟ್ ಬಗ್ಗೆ ಹೆಚ್ಚು ಸುದ್ದಿ ಆಗುತ್ತಿದ್ದು ಜನರು ಇಂಟರ್ನೆಟ್ ನ ಸಹಾಯದಿಂದ ಶೇರ್ ಮಾರ್ಕೆಟ್ ನಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ. ಅಲ್ಲದೆ ಅದರಿಂದ ಸಾಕಷ್ಟು ಲಾಭವನ್ನು ಗಳಿಸಿ ಅವರು ತಮ್ಮ ಆರ್ಥಿಕ ಸಂಕಷ್ಟದಿಂದ ಪಾರಾಗಿ ಮೇಲೆ ಬಂದಿದ್ದಾರೆ. ಶೇರ್ ಮಾರ್ಕೆಟ್ ನಲ್ಲಿ ನೀವು ಹಣ ಹೂಡಿಕೆ ಮಾಡಲು ಬಯಸುವುದಾದರೆ ಅದಕ್ಕೆ ನಿಮಗೆ ಅದರ ಬಗ್ಗೆ ಸಂಪೂರ್ಣ ಜ್ಞಾನ ಮತ್ತು ಮಾಹಿತಿ ಇರಬೇಕು. ಒಂದು ವೇಳೆ ಈ ಮಾಹಿತಿ ಅಥವಾ ಜ್ಞಾನ ನಿಮ್ಮಲ್ಲಿ ಇಲ್ಲವಾದರೆ ನಿಮ್ಮ ಹಣ ನೀರಿನಲ್ಲಿ ಹೋಮವಾದಂತೆ ಕಳೆದು ಹೋಗುತ್ತದೆ. ಹಾಗಾಗಿ ಶೇರ್ ಮಾರ್ಕೆಟ್ ಗಿಂತ ಅತಿ ಕಡಿಮೆ ರಿಸ್ಕ್ ಇರುವ ಮ್ಯೂಚುವಲ್ ಫಂಡ್ಗಳಲ್ಲಿ ಇತ್ತೀಚಿಗೆ ಹೆಚ್ಚಿನ ಜನ ಒಲವು ತೋರಿಸುತ್ತಿದ್ದಾರೆ. ಇದು ಕಡಿಮೆ ರಿಸ್ಕ್ ಅಷ್ಟೇ ಅಲ್ಲದೆ ಹೆಚ್ಚಿನ ಲಾಭವನ್ನು ತಂದು ಕೊಡುವ ಶೇರ್ ಮಾರ್ಕೆಟಿಗಿಂತಲೂ ಒಳ್ಳೆಯ ಲಾಭವನ್ನು ತಂದುಕೊಡಬಲ್ಲ ಶಕ್ತಿ ಇದಕ್ಕಿದೆ .ಹಾಗಾಗಿ ಇತ್ತೀಚಿಗೆ ಹೆಚ್ಚಿನ ಜನ ಶೇರ್ ಮಾರ್ಕೆಟ್ ಆಕರ್ಷಿತವಾಗುತ್ತಿದ್ದಾರೆ. ಹಾಗಾದರೆ ಏನಿದು ಮ್ಯೂಚುವಲ್ ಫಂಡ್ಸ್ , ಇದರಲ್ಲಿ ಹೂಡಿಕೆ ಮಾಡಿ ನಾವು ಹಣ ಗಳಿಸಬಹುದಾ ? ಹಾಗಾದರೆ ಇದು ಎಷ್ಟು ಸೇಫ್ ಮತ್ತು ಇದರಿಂದಾಗುವ ಲಾಭಗಳೇನು ಎಂಬುದನ್ನು ಇವತ್ತಿನ ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.

ಸ್ನೇಹಿತರೆ ಹೆಚ್ಚಿನ ಜನ ತಮ್ಮ ಹಣವನ್ನು ಉಳಿತಾಯ ಮಾಡಬೇಕೆಂದು ಬಯಸುತ್ತಾರೆ ಇಂತಹ ಹಣವನ್ನು ಅವರು ಎಲ್ಲಿ ಉಳಿತಾಯ ಮಾಡಬೇಕು ಹಾಗೂ ಹೇಗೆ ಉಳಿತಾಯ ಮಾಡಬೇಕು ಎಂಬುದರ ಬಗ್ಗೆ ಹೆಚ್ಚಿನ ಚಿಂತೆಗೆ ಒಳಗಾಗಿರುತ್ತಾರೆ. ಕೆಲವರು ಈ ಹಣವನ್ನು ಸೇವಿಂಗ್ಸ್ ಅಕೌಂಟ್ ನಲ್ಲಿ ಇಡುತ್ತಾರೆ ಇನ್ನು ಕೆಲವರು ಈ ಹಣವನ್ನ ಫಿಕ್ಸೆಡ್ ಡೆಪಾಸಿಟ್ ಅಕೌಂಟನಲ್ಲಿ ಇಡುತ್ತಾರೆ. ಎಫ್ ಡಿ ಯಲ್ಲಿ ಇಡುವ ಹಣಕ್ಕೆ ಏಳರಿಂದ 7.5% ನಷ್ಟು ಬಡ್ಡಿ ಸಿಗುತ್ತದೆ. ಸೇವಿಂಗ್ಸ್ ಅಕೌಂಟ್ ನಲ್ಲಿ ಇಟ್ಟರೆ ಅದಕ್ಕೆ ಮೂರರಿಂದ 3.5 ರಷ್ಟು ಬಡ್ಡಿ ಸಿಗುತ್ತದೆ. ಉಳಿತಾಯ ಖಾತೆಗೂ ಮತ್ತು ಫಿಕ್ಸ್ ಹೋಲಿಕೆ ಮಾಡಿ ನೋಡಿದರೆ ಫಿಕ್ಸ್ಡ್ ಡೆಪಾಸಿಟ್ ಅಕೌಂಟ್ ನಲ್ಲಿರುವ ಹಣಕ್ಕೆ ಹೆಚ್ಚಿನ ಬಡ್ಡಿ ಸಿಗುತ್ತದೆ. ಇದರಲ್ಲಿ ಇಡುವ ಹಣವು ಇಂತಿಷ್ಟು ವರ್ಷಗಳಿಗೆ ಲಾಕ್ ಆಗುತ್ತದೆ . ಅಂದರೆ ಅಷ್ಟು ವರ್ಷಗಳ ಅವಧಿಯಲ್ಲಿ ನೀವು ಆ ಹಣವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗೆ ನೀವು ಹಣವನ್ನು ಅವಧಿಯಲ್ಲಿ ತೆಗೆದುಕೊಂಡರೆ ನಿಮ್ಮ ಮೇಲೆ ವಿನಾಕಾರಣ ದಂಡವನ್ನು ಹಾಕಲಾಗುತ್ತದೆ. ಕೆಲವರು ಬಂಗಾರದ ಮೇಲೆ ತಮ್ಮ ಹಣವನ್ನು ಹೂಡಿಕೆ ಮಾಡುತ್ತಾರೆ. 2012ರ ಬಳಿಕ ಬಂಗಾರದ ಮಾರುಕಟ್ಟೆಯು ತನ್ನ ಸಮತೋಲನವನ್ನು ಕಳೆದುಕೊಂಡು ದಿನದಿಂದ ದಿನಕ್ಕೆ ಹೆಚ್ಚುತ್ತಾ ಅಥವಾ ಕುಗ್ಗುತ್ತಾ ಹೋಗುತ್ತಿದೆ. ಬಂಗಾರದ ಬೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ಏರುಪೇರು ಆಗುತ್ತಿದ್ದು ಇದರಿಂದ ಹೆಚ್ಚು ಲಾಭ ಸಿಗುತ್ತದೆ ಎಂದು ಬಯಸಿದವರಿಗೆ ನಿರಾಸೆ ಉಂಟಾಗಿದೆ. ಇನ್ನು ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಬೇಕೆಂದರೆ ಅದಕ್ಕೆ ದೊಡ್ಡ ಪ್ರಮಾಣದಲ್ಲಿ ಹಣ ಬೇಕಾಗುತ್ತದೆ. ಅದು ನಮ್ಮಿಂದ ಸಾಧ್ಯವಾಗುವುದಿಲ್ಲ . ಇನ್ನು ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುತ್ತೇನೆಂದರೆ ಅಲ್ಲಿ ನಿಮಗೆ ಸಾಕಷ್ಟು ಜ್ಞಾನ ಬೇಕು ಮತ್ತು ರಿಸ್ಕ್ ತೆಗೆದುಕೊಳ್ಳುವ ಮನುಶಕ್ತಿ ನಿಮ್ಮಲ್ಲಿರಬೇಕು. ಶೇರ್ ಮಾರ್ಕೆಟ್ ಬಗ್ಗೆ ಜ್ಞಾನವಿಲ್ಲದೆ ಅಲ್ಲಿ ಹಣವನ್ನು ಹೂಡಿಕೆ ಮಾಡಿದರೆ ನೀವು ಹಣವನ್ನು ಕಳೆದುಕೊಳ್ಳುವುದು ಗ್ಯಾರಂಟಿ. ಗಳನ್ನು ಬಿಟ್ಟು ಕೂಡ ಹೂಡಿಕೆ ಮಾಡಲು ಇನ್ನೂ ಅನೇಕ ಆಯ್ಕೆಗಳಿವೆ. ಅದರಲ್ಲಿ ಬಾಂಡ್ ಆಗಿರಬಹುದು ಅಥವಾ ಬಿಟ್ ಕಾಯಿನ್ ಮೇಲೆ ಹೂಡಿಕೆ ಆಗಿರಬಹುದು.

ಸ್ನೇಹಿತರೆ ಇನ್ನೂ ಯಾವುದೇ ಒಂದು ಹೂಡಿಕೆ ಕಂಪನಿಯಲ್ಲಿ ಹೂಡಿಕೆ ಮಾಡುವುದಾದರೆ ಯಾವುದರ ಬಗ್ಗೆ ನಾವು ಕಾಳಜಿ ವಹಿಸಬೇಕು ಎಂಬುದನ್ನ ತಿಳಿದುಕೊಳ್ಳೋಣ ಬನ್ನಿ . ನೀವು ನಿಮ್ಮ ಹಣವನ್ನು ಹೂಡಿಕೆ ಮಾಡಲು ಬಯಸುವುದಾದರೆ ಮೊದಲು ನೀವು ರಿಟರ್ನ್,ರಿಸ್ಕ್, ಟೈಮ್ ಈ ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅಂದರೆ ಕಡಿಮೆ ಅವಧಿಯಲ್ಲಿ, ಕಡಿಮೆ ರಿಸ್ಕ್ ಅಲ್ಲಿ ಹೆಚ್ಚು ಲಾಭವನ್ನು ತಂದು ಕೊಡುವ ಇನ್ವೆಸ್ಟ್ಮೆಂಟ್ ಆಯ್ಕೆಯನ್ನು ನಾವು ಮಾಡಿಕೊಳ್ಳಬೇಕು. ಇದಕ್ಕೆ ಅದ್ಭುತ ಉದಾಹರಣೆ ಎಂದರೆ ಮ್ಯೂಚುವಲ್ ಫಂಡ್ಸ್. ಮ್ಯೂಚುಯಲ್ ಫಂಡ್ಸ್ ಅಂದರೆ ಕನ್ನಡದಲ್ಲಿ ಇದನ್ನು ಪರಸ್ಪರ ನಿಧಿ ಎಂದು ಕರೆಯಲಾಗುತ್ತದೆ. ಇದು ಹೆಸರೇ ಹೇಳುವಾಗ ಒಂದಷ್ಟು ಜನ ಒಂದು ಕಡೆ ಸೇರಿ ದುಡ್ಡನ್ನ ಒಂದು ಕಡೆ ಸೇರಿಸಿ ಅದನ್ನ ವ್ಯವಸ್ಥಿತವಾಗಿ ಹೂಡಿಕೆ ಮಾಡುವುದು. ಅಂದರೆ ಕಂಪನಿಯೊಂದು ಎಲ್ಲ ಹೂಡಿಕೆದಾರರಿಂದ ಹಣ ಪಡೆದು ಈ ಹಣವನ್ನ ಅವರು ಸರ್ಕಾರದ ಬಾಂಡ್ ಗಳಲ್ಲಿ ಮತ್ತು ಶೇರ್ ಮಾರ್ಕೆಟ್ ಗಳಲ್ಲಿ ಹೂಡಿಕೆ ಮಾಡುತ್ತಾರೆ. ಇದರಿಂದ ಬರುವಂತಹ ಲಾಭದಲ್ಲಿ ಅವರು ಹೂಡಿಕೆದಾರರಿಗೆ ಸಮನಾಗಿ ಹಣವನ್ನು ಹಿಂತಿರುಗಿಸುತ್ತಾರೆ.

ಮ್ಯೂಚುವಲ್ ಫಂಡ್ ಹೇಗೆ ಕೆಲಸ ಮಾಡುತ್ತದೆ?

ಸ್ನೇಹಿತರೆ ಮ್ಯೂಚುವಲ್ ಫಂಡ್ಸ್ ಹಣವನ್ನ ಮ್ಯಾನೇಜ್ ಮಾಡಲು ಅಸೆಟ್ ಮ್ಯಾನೇಜ್ಮೆಂಟ್ ಕಮಿಟಿ ಎಂಬ ಒಂದು ಕಮಿಟಿ ಇರುತ್ತದೆ. ಇವು ಭಾರತದ ತುಂಬಾ ಇವೆ. ಈ ಕಂಪನಿಗಳೇ ಮ್ಯೂಚುವಲ್ ಫಂಡ್ಸ್ ಗಳನ್ನು ಕ್ರಿಯೇಟ್ ಮಾಡುತ್ತವೆ. ಈ ಮ್ಯೂಚುವಲ್ ಫಂಡ್ಗಳಲ್ಲಿ ನಾವು ನೀವು ಅಂದ್ರೆ ಸಾಮಾನ್ಯ ಜನರು ತಮ್ಮ ಕೈಲಾದಷ್ಟು ಹಣವನ್ನು ಇನ್ವೆಸ್ಟ್ ಮಾಡುತ್ತಾ ಹೋಗುತ್ತಾರೆ. ಎಲ್ಲಾ ಮ್ಯೂಚುಯಲ್ ಫಂಡ್ ಕಂಪನಿಗಳಲ್ಲಿ ಈ ಫಂಡನ್ನ ಮೇಂಟೈನ್ ಮಾಡಲು ನುರಿತ ಫಂಡ್ ಮ್ಯಾನೇಜರ್ ಒಬ್ಬರು ಇರುತ್ತಾರೆ. ಅವರು ಹೂಡಿಕೆದಾರರು ಹಾಕಿರುವ ಈ ಹಣವನ್ನು ಲಾಭವಾಗಿ ಪರಿವರ್ತಿಸಲು ಶೇರ್ ಮಾರ್ಕೆಟ್ ಮತ್ತು ಸರ್ಕಾರದ ಬಾಂಡುಗಳಲ್ಲಿ ಈ ಹಣವನ್ನ ಇನ್ವೆಸ್ಟ್ ಮಾಡುತ್ತಾರೆ ಅಂದರೆ ನಮ್ಮ ಹಣವನ್ನು ಅವರು ಮ್ಯಾನೇಜ್ ಮಾಡುತ್ತಾರೆ ಲಾಭ ಬರುವಂತೆ ನಮ್ಮ ಹಣವನ್ನು ಬೆಳೆಸಲು ಅವರು ಪ್ರಯತ್ನವನ್ನು ಮಾಡುತ್ತಾರೆ ಬಳಿಕ ಬಂದಮೇಲೆ ಲಾಭದಲ್ಲಿ ನಮ್ಮ ಹೂಡಿಕೆಯ ಮೇಲೆ ನಮಗೂ ಕೂಡ ಲಾಭವನ್ನು ನೀಡುತ್ತಾರೆ. ಮ್ಯೂಚುವಲ್ ಫಂಡ್ಗಳಲ್ಲಿ ಯಾವ ಕಂಪನಿಯ ಮೇಲೆ ನಾವು ಹೂಡಿಕೆ ಮಾಡುತ್ತೇವೆ ಎಂಬುದು ಮುಖ್ಯವಾಗುವುದಿಲ್ಲ. ಬದಲಿಗೆ ಯಾವ ಪ್ರಕಾರದ ಮುಚುವಲ್ ಫಂಡ್ಗಳ ಮೇಲೆ ನಾವು ಇನ್ವೆಸ್ಟ್ ಮಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ. ಇದರಲ್ಲಿ ಮೂರು ಪ್ರಕಾರದ ಮ್ಯೂಚುವಲ್ ಫಂಡ್ ಗಳಿವೆ. ಮೊದಲನೆಯದು ಇಕ್ವಿಟಿ ಮುಚುವೆಲ್ ಫಂಡ್. ಎರಡನೆಯದಾಗಿ ಡೆಟ್ ಮ್ಯೂಚುವಲ್ ಫಂಡ್ ಮೂರನೇದು ಹೈಬ್ರಿಡ್ ಮ್ಯೂಚುವಲ್ ಫಂಡ್. ಇವುಗಳಲ್ಲಿ ಇಕ್ವಿಟಿ ಮ್ಯೂಚುಯಲ್ ಫಂಡ್ ಗಳು ಹೆಚ್ಚಾಗಿ ಜನಪ್ರಿಯವಾಗಿದೆ. ಇದರಲ್ಲಿ ಹೂಡಿಕೆದಾರರು ಕೂಡು ಹಾಕಿರುವ ಎಲ್ಲಾ ಹಣವನ್ನು ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಲಾಗುತ್ತದೆ ಅದರಿಂದ ಬಂದ ಲಾಭವನ್ನ ಹೂಡಿಕೆದಾರರಿಗೆ ಹಂಚಲಾಗುತ್ತದೆ.

Recent Posts

ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆದುಕೊಳ್ಳುವವರಿಗೆ ಶಾಕಿಂಗ್ ನ್ಯೂಸ್! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು  ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…

55 years ago

Gruhalakshmi: ಗೃಹಲಕ್ಷ್ಮಿ ಯೋಜನೆಯ 16 ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…

55 years ago

KSRTC:ಕೆ ಎಸ್ ಆರ್ ಟಿ ಸಿ ಬಸ್ ದರ ಏರಿಕೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…

55 years ago

ತೊಗರಿ ಬೆಳೆಗಾರರಿಗೆ ಭರ್ಜರಿ ಸಿಹಿ ಸುದ್ದಿ! ತೊಗರಿಗೆ ಭರ್ಜರಿ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ ಸರ್ಕಾರ!

ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ…

55 years ago

ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ದಿನಾಂಕ ವಿಸ್ತರಣೆ ! ಈಗಲೇ ಈ ಕೆಲಸ ಮಾಡಿ

ಇದೀಗ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶುಭ ಸುದ್ದಿಯನ್ನು ನೀಡಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರು ಇದೀಗ ತಮ್ಮ ಬಿಪಿಎಲ್…

55 years ago

PM Awas Yojana: ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ 2.5 ಲಕ್ಷ ರೂಪಾಯಿ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅರ್ಹ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಫಲಾನುಭವಿಗಳಿಗೆ 1.30…

55 years ago