Categories: information

5 ಬಾರಿ ಶಿಪಾರಸ್ಸು ಮಾಡಿದರೂ ಗಾಂಧೀಜಿಯವರಿಗೆ ಯಾಕೆ ನೊಬೆಲ್ ಪ್ರಶಸ್ತಿ ಸಿಕ್ಕಿಲ್ಲ ಗೊತ್ತಾ? ಅಷ್ಟಕ್ಕೂ ಆ ಕಮೀಟಿ ಗಾಂಧೀಜಿ ಬಗ್ಗೆ ಹೇಳಿದ್ದೇನು?

Spread the love

ಸ್ನೇಹಿತರೆ ನೊಬೆಲ್ ಪ್ರಶಸ್ತಿ ಜಗತ್ತಿನ ಅತ್ಯುನ್ನತ ಪ್ರಶಸ್ತಿಗಳ ಸಾಲಿನಲ್ಲಿ ಅಗ್ರ ಸ್ಥಾನದಲ್ಲಿರುವ ಪ್ರಶಸ್ತಿಯಾಗಿದೆ. ಸ್ವೀಡೆನ್ ನ ರಾಯಲ್ ಸ್ವಿಡಿಶ್ ಅಕಾಡೆಮಿ ನೀಡುವ ಈ ಪ್ರಶಸ್ತಿಯು ಬರೋಬ್ಬರಿ 8.1 ಕೋಟಿ ರೂಪಾಯಿ ಮೌಲ್ಯವನ್ನು ಹೊಂದಿದ್ದು ಮನುಕುಲದ ಒಳಿತಿಗಾಗಿ ಅದ್ಭುತ ಕೊಡುಗೆ ನೀಡಿದವರಿಗಾಗಿ ಇದನ್ನು ನೀಡಲಾಗುತ್ತದೆ. ಇತ್ತೀಚಿಗೆ 2023 ರ ಔಷದ, ಭೌತಶಾಸ್ತ್ರ, ರಾಸಾಯನಶಾಸ್ತ್ರ ದಂತಹ ವಿವಿಧ ವಿಭಾಗಗಳ ನೊಬೆಲ್ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಇದರಲ್ಲಿ ಶಾಂತಿ ಎಂಬ ವಿಭಾಗ ಒಂದಿದೆ. ಅಹಿಂಸೆ ಮತ್ತು ಶಾಂತಿಯ ಮೂರ್ತಿಯೇ ಆಗಿದ್ದ ಗಾಂಧೀಜಿಯವರನ್ನು ಈ ವಿಭಾಗಕ್ಕೆ ಬರೋಬ್ಬರಿ 5 ಬಾರಿ ಅವರ ಹೆಸರನ್ನು ನಾಮನಿರ್ದೇಶನ ಮಾಡಿದರೂ ಒಮ್ಮೆಯೂ ಗಾಂಧೀಜಿಯವರಿಗೆ ನೊಬೆಲ್ ಪ್ರಶಸ್ತಿ ಘೋಷಿಸಲಿಲ್ಲ.ಇದಕ್ಕೆ ಕಾರಣಗಳೇನು ಮತ್ತು ಅದಕ್ಕೆ ನೊಬೆಲ್ ಕಮಿಟಿ ಏನು ಹೇಳಿದೆ ಎಂಬುದನ್ನು ಈ ಅರ್ಟಿಕಲ್ ನಲ್ಲಿ ನೋಡೋಣ ಬನ್ನಿ…

Thank you for reading this post, don't forget to subscribe!

ಸ್ನೇಹಿತರೆ ನಿಮಗೆಲ್ಲ ತಿಳಿದಿರುವಂತೆ ಮಹಾತ್ಮ ಗಾಂಧೀಜಿಯು ಬ್ರಿಟಿಷರ ಕಪಿಮುಷ್ಟಿಯಿಂದ ಭಾರತಕ್ಕೆ ಸ್ವಂತಂತ್ರ ತಂದುಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದವರು. ಗಾಂಧೀಜಿಯ ಹೆಸರನ್ನು 1937,1938,1939,1947 ಮತ್ತು ಅವರು ಮರಣ ಹೊಂದುವ ಕೆಲವೇ ದಿನಗಳ ಹಿಂದೆ ಅಂದರೆ 1948 ರಲ್ಲಿ ಒಟ್ಟು 5 ಬಾರಿ ಅವರ ಹೆಸರನ್ನು ನೊಬೆಲ್ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿತ್ತು. ಆದರೆ ಕಮಿಟಿಯು ಒಮ್ಮೆಯೂ ಅವರ ಹೆಸರನ್ನು ನೊಬೆಲ್ ಪ್ರಶಸ್ತಿಗೆ ಪರಿಗಣಿಸಲಿಲ್ಲ. ಇದಕ್ಕೆ ಕಮಿಟಿಯು ಕೊಟ್ಟ ಹಲವು ಸಂಕಿರ್ಣ ಕಾರಣಗಳು ಇಲ್ಲಿವೆ ನೋಡಿ –

1.ಗಾಂಧೀಜಿಯು ಒಬ್ಬ ಅಧಿಕೃತ ರಾಜಕೀಯ ನೇತಾರ ಆಗಿರಲಿಲ್ಲ. ಅಲ್ಲದೇ ಅವರು ಅಂತಾರಾಷ್ಟ್ರೀಯ ಕಾನೂನುಗಳನ್ನು ಪ್ರತಿಪಾದಿಸುವ ನೇತಾರ ಆಗಿರಲಿಲ್ಲ. ಮತ್ತು ಅಂತಹ ಕಾನೂನುಗಳನ್ನು ಪ್ರತಿಪಾದಿಸುವ ಸಂಸ್ಥೆಯ ಭಾಗವಾಗಿರಲಿಲ್ಲ.
2. ಗಾಂಧೀಜಿಯವರ ಅಹಿಂಸೆ ಮತ್ತು ಶಾಂತಿಯು ವಿಭಿನ್ನ ರೀತಿಯದ್ದಾಗಿದ್ದರಿಂದ ಅವು ನೊಬೆಲ್ ಕಮಿಟಿಯ ಪ್ರಶಸ್ತಿ ಮಾನದಂಡಗಳೊಂದಿಗೆ ಹೊಂದಾಣಿಕೆಯಾಗಲು ಕಷ್ಟ ಸಾಧ್ಯವಾಗಿದ್ದವು.
3. ನೊಬೆಲ್ ಕಮಿಟಿಯು ಭಾರತ ಮತ್ತು ಪಾಕಿಸ್ತಾನ ವಿಭಜನೆಯಲ್ಲಿ ಗಾಂಧೀಜಿಯವರ ಪಾತ್ರವಿತ್ತು ಮತ್ತು ಇದು ಅಂತಾರಾಷ್ಟ್ರೀಯ ಶಾಂತಿ ಕಾನೂನಿನ ವಿರುದ್ಧ ಎಂದು ವಾದಿಸಿತ್ತು.
4. ಗಾಂಧೀಜಿಯವರ ಅಸಹಕಾರ ಚಳುವಳಿಯಿಂದಾಗಿ ಹಲವು ಹಿಂಸಾತ್ಮಕ ಘಟನೆಗಳು ನಡೆದವು. ಉದಾಹರಣೆಗೆ ಚೌರಿ ಚೌರಾ ದಲ್ಲಿ ರೊಚ್ಚಿಗೆದ್ದ ಜನ ಒಂದು ಪೊಲೀಸ್ ಠಾಣೆಯನ್ನೇ ಸುಟ್ಟು ಹಾಕಿದ್ದರು. ಇದು ಕೂಡ ನೊಬೆಲ್ ಕಮಿಟಿಯ ತಿರಸ್ಕಾರಕ್ಕೆ ಒಂದು ಕಾರಣವಾಗಿತ್ತು.
5. ಕೊನೆಯದಾಗಿ ನೊಬೆಲ್ ಪ್ರಶಸ್ತಿಯನ್ನು ಮರಣೋತ್ತರವಾಗಿ ಇದುವರೆಗೂ ಯಾರಿಗೂ ಕೊಟ್ಟಿಲ್ಲ. ಹಾಗಾಗಿ ಗಾಂಧೀಜಿಯವರ ಸಾವಿನ ನಂತರ ಅವರಿಗೆ ನೊಬೆಲ್ ಪ್ರಶಸ್ತಿ ನೀಡುವ ಚರ್ಚೆಗಳೇ ಕಡಿಮೆಯಾದವು.
ಆದರೆ ನೊಬೆಲ್ ಕಮಿಟಿಯ ಸದಸ್ಯರೊಬ್ಬರು 1989 ರಲ್ಲಿ ಬೌದ್ಧಗುರು ದಲೈ ಲಾಮಾ ಅವರಿಗೆ ಶಾಂತಿ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ನೀಡಿದಾಗ ಇದು ಗಾಂಧೀಜಿಯವರ ಸ್ಮರಣೆಯಲ್ಲಿ ನೀಡಲಾಗಿದೆ ಎಂದು ನೆನಪಿಸಿಕೊಂಡಿದ್ದರು.

ಇದನ್ನೂ ಓದಿ..

ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಭಾರತೀಯರ ಪಟ್ಟಿ ಇಲ್ಲಿದೆ ನೋಡಿ!

ಸ್ನೇಹಿತರೆ ಮೊಬೈಲ್ ಪ್ರಶಸ್ತಿ ಎಂಬುದು ಜಗತ್ತಿನ ಶ್ರೇಷ್ಠವಾದ ಪ್ರಶಸ್ತಿಯಾಗಿದ್ದು ಇದನ್ನು ಸ್ವೀಡನ್ ಅನ್ನ ರಾಯಲ್ ಅಕಾಡೆಮಿ ಆಫ್ ಸೈನ್ಸ್ ನವರು ಕೊಡ ಮಾಡುತ್ತಾರೆ. ಇದನ್ನು ಜಗತ್ತಿನ ಮನುಕುಲದ ಒಳಿತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಸಾಧಕರಿಗೆ ನೀಡಲಾಗುತ್ತದೆ. ಇತ್ತೀಚೆಗೆ ನೊಬೆಲ್ ಪ್ರಶಸ್ತಿಯನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ, ಶಾಂತಿ, ಅರ್ಥಶಾಸ್ತ್ರ ಮತ್ತು ಔಷಧಿಗಳ ವಿಭಾಗದಲ್ಲಿ ನೀಡಲಾಯಿತು. ಹಾಗಾದರೆ ಇಲ್ಲಿಯವರೆಗೆ ನಮ್ಮ ಭಾರತೀಯರಿಗೆ ಸಿಕ್ಕ ನೋಬೆಲ್ ಪ್ರಶಸ್ತಿಗಳು ಎಷ್ಟು ಮತ್ತು ಅದನ್ನು ಯಾವ ವಿಭಾಗದಲ್ಲಿ ಪಡೆದುಕೊಂಡಿದ್ದಾರೆ ಎಂಬುದನ್ನು ಇವತ್ತಿನ ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.

ಸ್ನೇಹಿತರೆ ಭಾರತ ಇಲ್ಲಿಯವರೆಗೆ ಒಟ್ಟು 8 ನೊಬೆಲ್ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಅದು 1913 ರಿಂದ 2023ರ ಅವಧಿಯಲ್ಲಿ ಒಂಬತ್ತು ನೊಬೆಲ್ ಪ್ರಶಸ್ತಿಗಳು ಭಾರತೀಯರಿಗೆ ಸಂದಿವೆ.
1. ರವಿಂದ್ರ ನಾಥ್ ಟ್ಯಾಗೋರ್ : ಭಾರತದ ರಾಷ್ಟ್ರಗೀತೆಯ ಪಿತಾಮಹರಾದ ಇವರಿಗೆ 1913ರಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಇವರಿಗೆ ನೊಬೆಲ್ ಸಿಕ್ಕಿತು. ಅವರ ಗೀತಾಂಜಲಿ ಕೃತಿಗೆ ಈ ಪ್ರಶಸ್ತಿ ಸಿಕ್ಕಿತು
2. ಭೌತಶಾಸ್ತ್ರ : ಭಾರತದ ಶ್ರೇಷ್ಠ ವಿಜ್ಞಾನಿಯಾದ ಸಿ ವಿ ರಾಮನ್ ಅವರಿಗೆ 1930ರಲ್ಲಿ ಈ ಪ್ರಶಸ್ತಿಯು ಒಲಿದು ಬಂತು. ಅವರ ರಾಮನ್ ಎಫೆಕ್ಟ್ ಎಂಬ ಅದ್ಭುತ ಆವಿಷ್ಕಾರಕ್ಕೆ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
3. ಸುಬ್ರಮಣ್ಯ ಚಂದ್ರಶೇಖರ : ಇವರು ಕೂಡ ಮತ್ತೊರ್ವ ಭೌತಶಾಸ್ತ್ರದ ಪ್ರಸಿದ್ಧ ಭಾರತೀಯ ವಿಜ್ಞಾನಿಯಾಗಿದ್ದಾರೆ. ಇವರು ತಮ್ಮ ಅದ್ಭುತ ಆವಿಷ್ಕಾರವಾದ ಚಂದ್ರಶೇಖರಣ್ ಸಂಖ್ಯೆ ಎಂಬ ಆವಿಷ್ಕಾರಕ್ಕೆ ಇವರಿಗೆ ನೊಬೆಲ್ ಪ್ರಶಸ್ತಿಯನ್ನು ಕೊಡಲಾಗಿದೆ. ಇವರಿಗೆ 1983 ರಲ್ಲಿ ಈ ಪ್ರಶಸ್ತಿ ಒಲಿದು ಬಂದಿದೆ
4. ಹರಗೋವಿಂದ ಕೋರಾನಾ : ಔಷಧೀಯ ಕ್ಷೇತ್ರದಲ್ಲಿ ನೀಡಿರುವ ಇವರ ಅದ್ಭುತ ಕೊಡುಗೆಗಾಗಿ 1968ರಲ್ಲಿ ನೊಬೆಲ್ ಪ್ರಶಸ್ತಿಯು ಇವರನ್ನ ಹುಡುಕಿಕೊಂಡು ಬಂದಿತು.
5. ಮದರ್ ತೆರೇಸಾ : ಜಗತ್ತಿನ ಶಾಂತಿಗಾಗಿ ಹೋರಾಡಿದ ಮದರ್ ತೆರೇಸಾ ಅವರ ಅದ್ಭುತ ಸೇವೆಗಾಗಿ 1979 ರಲ್ಲಿ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ಅವರು ಜಗತ್ತಿನ ಮನುಕುಲದ ಒಳಿತಿಗಾಗಿ ನೀಡಿದ ಸಮಾಜ ಸೇವೆಯನ್ನು ಮನಗಂಡು ಈ ಪ್ರಶಸ್ತಿಯನ್ನು ನೀಡಲಾಗಿದೆ.
6. ಕೈಲಾಶ್ ಸತ್ಯಾರ್ಥಿ : ಇವರು ಕೂಡ ಜಗತ್ತಿನ ಶಾಂತಿಗಾಗಿ ಹೆಚ್ಚು ಹೋರಾಟ ನಡೆಸಿದ್ದರಿಂದ ಇವರ ಸಮಾಜ ಸೇವೆಯನ್ನ ಕಂಡು ನೊಬೆಲ್ ಕಮಿಟಿಯು ಇವರಿಗೆ ನೊಬೆಲ್ ಪ್ರಶಸ್ತಿಯನ್ನು 2014ರಲ್ಲಿ ಘೋಷಿಸಿತು.
7. ಅಮರ್ತ್ಯ ಸೇನ್ : ಅರ್ಥಶಾಸ್ತ್ರದಲ್ಲಿ ಇವರು ನೀಡಿರುವ ಅದ್ಭುತ ಕೊಡುಗೆಯನ್ನು ಗಮನಿಸಿ 1998ರಲ್ಲಿ ನೊಬೆಲ್ ಕಮಿಟಿಯು ಇವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಿತು.
8. ಅಭಿಜಿತ್ ಬ್ಯಾನರ್ಜಿ : ಬೌತಶಾಸ್ತ್ರದಲ್ಲಿ ಅತಿ ದೊಡ್ಡ ಸಾಧನೆ ಮಾಡಿರುವ ಇವರು ಕೂಡ ಮೂಲ ಭಾರತೀಯರಾಗಿದ್ದು ಇವರು ಈಗ ಪ್ರಸ್ತುತ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ 2019ರಲ್ಲಿ ನೊಬೆಲ್ ಕಮಿಟಿಯು ನೋಬೆಲ್ ಪ್ರಶಸ್ತಿಯನ್ನು ಘೋಷಿಸಿತು

Recent Posts

ಮೊಬೈಲ್ ನಲ್ಲೇ ನಿಮ್ಮ ಜಮೀನಿನ ಆಕಾರಬಂದ್ ಚೆಕ್ ಮಾಡುವುದು ಹೇಗೆ? ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನೀವು ನಿಮ್ಮ ಜಮೀನಿನ ಆಕಾರಬಂದ್…

56 years ago

ಗೃಹಲಕ್ಷ್ಮೀ: ಅರ್ಹ ಮತ್ತು ಅನರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ! ಇದರಲ್ಲಿ ನಿಮ್ಮ ಮನೆಯವರ ಹೆಸರು ಇದೆಯಾ ಚೆಕ್ ಮಾಡಿ

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ದಸರಾ ಹಬ್ಬದ ನಿಮಿತ್ತವಾಗಿ ಇತ್ತೀಚೆಗಷ್ಟೇ…

56 years ago

ಪಿಎಂ ಕಿಸಾನ್: ಇಲ್ಲಿಯವರೆಗೆ ನಿಮಗೆ ಎಷ್ಟು ಹಣ ಜಮಾ ಆಗಿದೆ ಹೀಗೆ ಚೆಕ್ ಮಾಡಿ

ಹಾಗಾದರೆ ಇಲ್ಲಿಯವರೆಗೆ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ (Pm kisan samman yojana) ಅಡಿಯಲ್ಲಿ  ನಿಮ್ಮ ಖಾತೆಗೆ ಎಷ್ಟು…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

ರಸಗೊಬ್ಬರ ವಿತರಣೆಗೆ ರೈತರಿಗೆ FID ಕಡ್ಡಾಯ – ಹೊಸ ನಿಯಮಗಳು ಮತ್ತು ಪರಿಣಾಮ

ರಸಗೊಬ್ಬರ ವಿತರಣೆಗೆ ರೈತರಿಗೆ FID ಕಡ್ಡಾಯವಾಗಿದೆ. ಈ ಹೊಸ ನಿಯಮದ ಉದ್ದೇಶ, ಹೇಗೆ ಕೆಲಸ ಮಾಡುತ್ತದೆ, ರೈತರಿಗೆ ಲಾಭ-ನಷ್ಟಗಳು ಏನು…

56 years ago

ಯಾವ ಸರ್ವೇ ನಂಬರ್ ಮೇಲೆ ಎಷ್ಟು ಸಾಲವಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನೀವು ಕೃಷಿ ಚಟುವಟಿಕೆಗಾಗಿ ಬ್ಯಾಂಕಿನಿಂದ…

56 years ago