Categories: information

ನಾಡಕಚೇರಿ ಅಲೆದಾಟಕ್ಕೆ ಬಿತ್ತು ಬ್ರೇಕ್! ಈಗ Mobile ನಲ್ಲೇ ಪಡೆಯಿರಿ ಜಾತಿ-ಆದಾಯ ಪ್ರಮಾಣಪತ್ರ

ನಾಡಕಚೇರಿ ಅಲೆದಾಟಕ್ಕೆ ಬಿತ್ತು ಬ್ರೇಕ್! ಈಗ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಮೊಬೈಲ್‌ನಲ್ಲೇ ಸುಲಭವಾಗಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು. ಸಮಯ, ಹಣ ಮತ್ತು ಶ್ರಮ ಉಳಿಸುವ ಕರ್ನಾಟಕ ಸರ್ಕಾರದ ಡಿಜಿಟಲ್ ಸೇವೆಗಳ ಸಂಪೂರ್ಣ ಮಾಹಿತಿ ಇಲ್ಲಿ.

Spread the love

ಹಲವು ಗಂಟೆಗಳ ಕಾಲ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಕೆಲಸ ಬಿಟ್ಟು ನಾಡಕಚೇರಿ ಅಥವಾ ಸೈಬರ್ ಸೆಂಟರ್‌ಗಳ ಮುಂದೆ ಅಲೆಯುತ್ತಿದ್ದೀರಾ? ಇನ್ಮೇಲೆ ಆ ಚಿಂತೆ ಬಿಡಿ! ನಿಮ್ಮ ಜೇಬಿನಲ್ಲಿರುವ ಸ್ಮಾರ್ಟ್‌ಫೋನ್ ಈಗ ಕೇವಲ ಚಾಟಿಂಗ್‌ಗೆ ಮಾತ್ರವಲ್ಲ, ನಿಮ್ಮ ಸರ್ಕಾರಿ ಕೆಲಸಗಳನ್ನು ಕ್ಷಣಾರ್ಧದಲ್ಲಿ ಮುಗಿಸಿಕೊಡವ ಶಕ್ತಿಶಾಲೀ ಸಾಧನವೂ ಹೌದು.

Thank you for reading this post, don't forget to subscribe!

ಕರ್ನಾಟಕ ಸರ್ಕಾರದ ಈ ಡಿಜಿಟಲ್ ಕ್ರಾಂತಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಈ ಲೇಖನವನ್ನು ಕೊನೆಯವರೆಗೂ ಓದಿ, ನಿಮ್ಮ ಹಣ ಮತ್ತು ಸಮಯ ಎರಡನ್ನೂ ಉಳಿಸಿ!

  • 1.ಲಂಚದ ಕಾಟವಿಲ್ಲ: ಮಧ್ಯವರ್ತಿಗಳಿಗೆ ಅಥವಾ ಏಜೆಂಟರಿಗೆ ನೂರಾರು ರೂಪಾಯಿ ಕೊಡುವ ಅಗತ್ಯವೇ ಇಲ್ಲ.
    2.ಅತಿ ಕಡಿಮೆ ಶುಲ್ಕ: ಕೇವಲ ₹40 ಸರ್ಕಾರಿ ಶುಲ್ಕ ಪಾವತಿಸಿದರೆ ಸಾಕು.
    3.ಅಪ್ಪಟ ಅಸಲಿ: ಇದು ಡಿಜಿಟಲ್ ಸಹಿ ಹೊಂದಿರುವ ಅಧಿಕೃತ ದಾಖಲೆ, ಎಲ್ಲೂ ರಿಜೆಕ್ಟ್ ಆಗಲ್ಲ.
    4.ಸಮಯ ಉಳಿತಾಯ: ಬಸ್ ಚಾರ್ಜ್ ಮತ್ತು ಒಂದು ದಿನದ ಕೂಲಿ ಎರಡೂ ಉಳಿಯುತ್ತದೆ.

ಕೆಲಸ ಶುರು ಮಾಡುವ ಮೊದಲು ಇವು ನಿಮ್ಮ ಬಳಿ ಇರಲಿ:

ಅರ್ಜಿ ಸಲ್ಲಿಸಲು ಕುಳಿತುಕೊಳ್ಳುವಾಗ ಈ 3 ವಸ್ತುಗಳು ಕೈಗೆಟುಕುವಂತೆ ಇರಲಿ:

ಆಧಾರ್ ಸಂಖ್ಯೆ: ನಿಮ್ಮ ಅಥವಾ ನಿಮ್ಮ ಮಗುವಿನ ಆಧಾರ್ ಕಾರ್ಡ್.
ಹಳೆಯ ಆರ್.ಡಿ (RD) ಸಂಖ್ಯೆ: (ಅತಿ ಮುಖ್ಯ!) ನಿಮ್ಮ ಬಳಿ ಹಳೆಯ ಜಾತಿ ಅಥವಾ ಆದಾಯ ಪ್ರಮಾಣಪತ್ರವಿದ್ದರೆ, ಅದರಲ್ಲಿರುವ RD ಸಂಖ್ಯೆ ನಿಮ್ಮ ಅರ್ಜಿಯನ್ನು ಅತಿ ವೇಗವಾಗಿ (Instant) ಅಪ್ರೂವ್ ಮಾಡಲು ಸಹಾಯ ಮಾಡುತ್ತದೆ.
ಸ್ಮಾರ್ಟ್‌ಫೋನ್: ಇಂಟರ್ನೆಟ್ ಸಂಪರ್ಕವಿರುವ ಮೊಬೈಲ್.

ಮೊಬೈಲ್‌ನಲ್ಲಿ ಅರ್ಜಿ ಸಲ್ಲಿಸುವ ‘ಸಿಂಪಲ್’ ಹಂತಗಳು:

1.ವೆಬ್‌ಸೈಟ್‌ಗೆ ಎಂಟ್ರಿ ಕೊಡಿ:

https://nadakacheri.karnataka.gov.in/ajsk

2.ಲಾಗಿನ್ ಪ್ರಕ್ರಿಯೆ:

‘Online Applications’ ಕ್ಲಿಕ್ ಮಾಡಿ, ನಿಮ್ಮ ಮೊಬೈಲ್ ಸಂಖ್ಯೆ ನೀಡಿ ಬರುವ OTP ಹಾಕಿ ಲಾಗಿನ್ ಆಗಿ. ಇದು ಸಂಪೂರ್ಣ ಸುರಕ್ಷಿತ.

3. ಯಾವ ಪ್ರಮಾಣಪತ್ರ ಬೇಕು?:

‘New Request’ ಮೆನುವಿನಲ್ಲಿ ನಿಮಗೆ ಬೇಕಾದ ‘Caste/Income’ ಸರ್ಟಿಫಿಕೇಟ್ ಆಯ್ಕೆ ಮಾಡಿ

4. ಮ್ಯಾಜಿಕ್ ಸ್ಟೆಪ್ (ಹಳೆಯ RD ನಂಬರ್):

ನಿಮ್ಮ ಬಳಿ ಹಳೆಯ ಪ್ರಮಾಣಪತ್ರವಿದ್ದರೆ, ಅದರ RD ಸಂಖ್ಯೆಯನ್ನು ನಮೂದಿಸಿ. ಹೀಗೆ ಮಾಡಿದರೆ ಸಾಕು, ನಿಮ್ಮ ಹೆಸರು, ವಿಳಾಸ, ಜಾತಿ ಎಲ್ಲವೂ ಆಟೋಮ್ಯಾಟಿಕ್ ಆಗಿ ಸ್ಕ್ರೀನ್ ಮೇಲೆ ಬರುತ್ತದೆ. ನೀವು ಮತ್ತೆ ಎಲ್ಲವನ್ನೂ ಟೈಪ್ ಮಾಡುವ ಅವಶ್ಯಕತೆ ಇಲ್ಲ!

5. ಹಣ ಪಾವತಿ:

ಎಲ್ಲಾ ಸರಿಯಿದೆಯೇ ಎಂದು ಒಮ್ಮೆ ಪರಿಶೀಲಿಸಿ ‘Save’ ಮಾಡಿ. ನಂತರ ₹40 ಶುಲ್ಕವನ್ನು ನಿಮ್ಮ PhonePe, Google Pay ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿಸಿ.

6. ಡೌನ್‌ಲೋಡ್ ಮಾಡಿಕೊಳ್ಳಿ:

ಹಳೆಯ ದಾಖಲೆಗಳು ಸರಿಯಾಗಿದ್ದರೆ ಕೆಲವೇ ನಿಮಿಷದಲ್ಲಿ ಅಥವಾ 1-2 ದಿನದಲ್ಲಿ ನಿಮ್ಮ ಮೊಬೈಲ್‌ಗೆ ಮೆಸೇಜ್ ಬರುತ್ತದೆ. ಆಗ ಮತ್ತೆ ವೆಬ್‌ಸೈಟ್‌ಗೆ ಹೋಗಿ ‘Download’ ಬಟನ್ ಒತ್ತಿ ಪ್ರಮಾಣಪತ್ರವನ್ನು ಪಡೆದುಕೊಳ್ಳಿ.

ನಮ್ಮ ವಿಶೇಷ ಸಲಹೆ:


ನಾಡಕಚೇರಿ ವೆಬ್‌ಸೈಟ್ ಹಗಲು ಹೊತ್ತಿನಲ್ಲಿ ಹೆಚ್ಚು ಲೋಡ್ ಇರುತ್ತದೆ. ಆದ್ದರಿಂದ ನೀವು ಸುಲಭವಾಗಿ ಕೆಲಸ ಮುಗಿಸಬೇಕೆಂದರೆ ರಾತ್ರಿ 10 ಗಂಟೆಯ ನಂತರ ಅಥವಾ ಮುಂಜಾನೆ 6 ಗಂಟೆಯ ಸುಮಾರಿಗೆ ಪ್ರಯತ್ನಿಸಿ. ಆಗ ವೆಬ್‌ಸೈಟ್ ತುಂಬಾ ಫಾಸ್ಟ್ ಆಗಿ ಕೆಲಸ ಮಾಡುತ್ತದೆ.

ಗಮನಿಸಿ: ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಮತ್ತು ವಿಳಾಸ ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಅದೇ ಮಾಹಿತಿ ನಿಮ್ಮ ಪ್ರಮಾಣಪತ್ರದಲ್ಲೂ ಬರುತ್ತದೆ.

ಓದುಗರಲ್ಲಿ ವಿನಂತಿ

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode

Recent Posts

Copra: ತಿಪಟೂರು ತೆಂಗು ಬೆಳೆಗಾರರಿಗೆ ಬಂಪರ್: ನಾಗಾಲೋಟದಲ್ಲಿ ಉಂಡೆ ಕೊಬ್ಬರಿ ದರ

ಉಂಡೆ ಕೊಬ್ಬರಿ ದರ ನಾಗಾಲೋಟದಲ್ಲಿ ಏರಿಕೆ ಕಂಡಿದ್ದು, ತೆಂಗು ಬೆಳೆಗಾರರಲ್ಲಿ ಸಂತಸ ಮೂಡಿಸಿದೆ. ಮಾರುಕಟ್ಟೆಯಲ್ಲಿ ಕೊಬ್ಬರಿಗೆ ಉತ್ತಮ ಬೇಡಿಕೆ ಇರುವುದರಿಂದ…

56 years ago

ಮೊಬೈಲ್ ನಲ್ಲೇ ನಿಮ್ಮ ಜಮೀನಿನ ಆಕಾರಬಂದ್ ಚೆಕ್ ಮಾಡುವುದು ಹೇಗೆ? ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನೀವು ನಿಮ್ಮ ಜಮೀನಿನ ಆಕಾರಬಂದ್…

56 years ago

ಗೃಹಲಕ್ಷ್ಮೀ: ಅರ್ಹ ಮತ್ತು ಅನರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ! ಇದರಲ್ಲಿ ನಿಮ್ಮ ಮನೆಯವರ ಹೆಸರು ಇದೆಯಾ ಚೆಕ್ ಮಾಡಿ

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ದಸರಾ ಹಬ್ಬದ ನಿಮಿತ್ತವಾಗಿ ಇತ್ತೀಚೆಗಷ್ಟೇ…

56 years ago

ಪಿಎಂ ಕಿಸಾನ್: ಇಲ್ಲಿಯವರೆಗೆ ನಿಮಗೆ ಎಷ್ಟು ಹಣ ಜಮಾ ಆಗಿದೆ ಹೀಗೆ ಚೆಕ್ ಮಾಡಿ

ಹಾಗಾದರೆ ಇಲ್ಲಿಯವರೆಗೆ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ (Pm kisan samman yojana) ಅಡಿಯಲ್ಲಿ  ನಿಮ್ಮ ಖಾತೆಗೆ ಎಷ್ಟು…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

ರಸಗೊಬ್ಬರ ವಿತರಣೆಗೆ ರೈತರಿಗೆ FID ಕಡ್ಡಾಯ – ಹೊಸ ನಿಯಮಗಳು ಮತ್ತು ಪರಿಣಾಮ

ರಸಗೊಬ್ಬರ ವಿತರಣೆಗೆ ರೈತರಿಗೆ FID ಕಡ್ಡಾಯವಾಗಿದೆ. ಈ ಹೊಸ ನಿಯಮದ ಉದ್ದೇಶ, ಹೇಗೆ ಕೆಲಸ ಮಾಡುತ್ತದೆ, ರೈತರಿಗೆ ಲಾಭ-ನಷ್ಟಗಳು ಏನು…

56 years ago