ನಾಡಕಚೇರಿ ಅಲೆದಾಟಕ್ಕೆ ಬಿತ್ತು ಬ್ರೇಕ್! ಈಗ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಮೊಬೈಲ್ನಲ್ಲೇ ಸುಲಭವಾಗಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು. ಸಮಯ, ಹಣ ಮತ್ತು ಶ್ರಮ ಉಳಿಸುವ ಕರ್ನಾಟಕ ಸರ್ಕಾರದ ಡಿಜಿಟಲ್ ಸೇವೆಗಳ ಸಂಪೂರ್ಣ ಮಾಹಿತಿ ಇಲ್ಲಿ.
ಹಲವು ಗಂಟೆಗಳ ಕಾಲ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಕೆಲಸ ಬಿಟ್ಟು ನಾಡಕಚೇರಿ ಅಥವಾ ಸೈಬರ್ ಸೆಂಟರ್ಗಳ ಮುಂದೆ ಅಲೆಯುತ್ತಿದ್ದೀರಾ? ಇನ್ಮೇಲೆ ಆ ಚಿಂತೆ ಬಿಡಿ! ನಿಮ್ಮ ಜೇಬಿನಲ್ಲಿರುವ ಸ್ಮಾರ್ಟ್ಫೋನ್ ಈಗ ಕೇವಲ ಚಾಟಿಂಗ್ಗೆ ಮಾತ್ರವಲ್ಲ, ನಿಮ್ಮ ಸರ್ಕಾರಿ ಕೆಲಸಗಳನ್ನು ಕ್ಷಣಾರ್ಧದಲ್ಲಿ ಮುಗಿಸಿಕೊಡವ ಶಕ್ತಿಶಾಲೀ ಸಾಧನವೂ ಹೌದು.
Thank you for reading this post, don't forget to subscribe!ಕರ್ನಾಟಕ ಸರ್ಕಾರದ ಈ ಡಿಜಿಟಲ್ ಕ್ರಾಂತಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಈ ಲೇಖನವನ್ನು ಕೊನೆಯವರೆಗೂ ಓದಿ, ನಿಮ್ಮ ಹಣ ಮತ್ತು ಸಮಯ ಎರಡನ್ನೂ ಉಳಿಸಿ!
ಅರ್ಜಿ ಸಲ್ಲಿಸಲು ಕುಳಿತುಕೊಳ್ಳುವಾಗ ಈ 3 ವಸ್ತುಗಳು ಕೈಗೆಟುಕುವಂತೆ ಇರಲಿ:
ಆಧಾರ್ ಸಂಖ್ಯೆ: ನಿಮ್ಮ ಅಥವಾ ನಿಮ್ಮ ಮಗುವಿನ ಆಧಾರ್ ಕಾರ್ಡ್.
ಹಳೆಯ ಆರ್.ಡಿ (RD) ಸಂಖ್ಯೆ: (ಅತಿ ಮುಖ್ಯ!) ನಿಮ್ಮ ಬಳಿ ಹಳೆಯ ಜಾತಿ ಅಥವಾ ಆದಾಯ ಪ್ರಮಾಣಪತ್ರವಿದ್ದರೆ, ಅದರಲ್ಲಿರುವ RD ಸಂಖ್ಯೆ ನಿಮ್ಮ ಅರ್ಜಿಯನ್ನು ಅತಿ ವೇಗವಾಗಿ (Instant) ಅಪ್ರೂವ್ ಮಾಡಲು ಸಹಾಯ ಮಾಡುತ್ತದೆ.
ಸ್ಮಾರ್ಟ್ಫೋನ್: ಇಂಟರ್ನೆಟ್ ಸಂಪರ್ಕವಿರುವ ಮೊಬೈಲ್.
1.ವೆಬ್ಸೈಟ್ಗೆ ಎಂಟ್ರಿ ಕೊಡಿ:
2.ಲಾಗಿನ್ ಪ್ರಕ್ರಿಯೆ:
‘Online Applications’ ಕ್ಲಿಕ್ ಮಾಡಿ, ನಿಮ್ಮ ಮೊಬೈಲ್ ಸಂಖ್ಯೆ ನೀಡಿ ಬರುವ OTP ಹಾಕಿ ಲಾಗಿನ್ ಆಗಿ. ಇದು ಸಂಪೂರ್ಣ ಸುರಕ್ಷಿತ.
3. ಯಾವ ಪ್ರಮಾಣಪತ್ರ ಬೇಕು?:
‘New Request’ ಮೆನುವಿನಲ್ಲಿ ನಿಮಗೆ ಬೇಕಾದ ‘Caste/Income’ ಸರ್ಟಿಫಿಕೇಟ್ ಆಯ್ಕೆ ಮಾಡಿ
4. ಮ್ಯಾಜಿಕ್ ಸ್ಟೆಪ್ (ಹಳೆಯ RD ನಂಬರ್):
ನಿಮ್ಮ ಬಳಿ ಹಳೆಯ ಪ್ರಮಾಣಪತ್ರವಿದ್ದರೆ, ಅದರ RD ಸಂಖ್ಯೆಯನ್ನು ನಮೂದಿಸಿ. ಹೀಗೆ ಮಾಡಿದರೆ ಸಾಕು, ನಿಮ್ಮ ಹೆಸರು, ವಿಳಾಸ, ಜಾತಿ ಎಲ್ಲವೂ ಆಟೋಮ್ಯಾಟಿಕ್ ಆಗಿ ಸ್ಕ್ರೀನ್ ಮೇಲೆ ಬರುತ್ತದೆ. ನೀವು ಮತ್ತೆ ಎಲ್ಲವನ್ನೂ ಟೈಪ್ ಮಾಡುವ ಅವಶ್ಯಕತೆ ಇಲ್ಲ!
5. ಹಣ ಪಾವತಿ:
ಎಲ್ಲಾ ಸರಿಯಿದೆಯೇ ಎಂದು ಒಮ್ಮೆ ಪರಿಶೀಲಿಸಿ ‘Save’ ಮಾಡಿ. ನಂತರ ₹40 ಶುಲ್ಕವನ್ನು ನಿಮ್ಮ PhonePe, Google Pay ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿಸಿ.
6. ಡೌನ್ಲೋಡ್ ಮಾಡಿಕೊಳ್ಳಿ:
ಹಳೆಯ ದಾಖಲೆಗಳು ಸರಿಯಾಗಿದ್ದರೆ ಕೆಲವೇ ನಿಮಿಷದಲ್ಲಿ ಅಥವಾ 1-2 ದಿನದಲ್ಲಿ ನಿಮ್ಮ ಮೊಬೈಲ್ಗೆ ಮೆಸೇಜ್ ಬರುತ್ತದೆ. ಆಗ ಮತ್ತೆ ವೆಬ್ಸೈಟ್ಗೆ ಹೋಗಿ ‘Download’ ಬಟನ್ ಒತ್ತಿ ಪ್ರಮಾಣಪತ್ರವನ್ನು ಪಡೆದುಕೊಳ್ಳಿ.
ನಾಡಕಚೇರಿ ವೆಬ್ಸೈಟ್ ಹಗಲು ಹೊತ್ತಿನಲ್ಲಿ ಹೆಚ್ಚು ಲೋಡ್ ಇರುತ್ತದೆ. ಆದ್ದರಿಂದ ನೀವು ಸುಲಭವಾಗಿ ಕೆಲಸ ಮುಗಿಸಬೇಕೆಂದರೆ ರಾತ್ರಿ 10 ಗಂಟೆಯ ನಂತರ ಅಥವಾ ಮುಂಜಾನೆ 6 ಗಂಟೆಯ ಸುಮಾರಿಗೆ ಪ್ರಯತ್ನಿಸಿ. ಆಗ ವೆಬ್ಸೈಟ್ ತುಂಬಾ ಫಾಸ್ಟ್ ಆಗಿ ಕೆಲಸ ಮಾಡುತ್ತದೆ.
ಗಮನಿಸಿ: ನಿಮ್ಮ ಆಧಾರ್ ಕಾರ್ಡ್ನಲ್ಲಿರುವ ಹೆಸರು ಮತ್ತು ವಿಳಾಸ ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಅದೇ ಮಾಹಿತಿ ನಿಮ್ಮ ಪ್ರಮಾಣಪತ್ರದಲ್ಲೂ ಬರುತ್ತದೆ.
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode
ಆತ್ಮೀಯ ಓದುಗರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ನಮ್ಮ ಸಂವಿಧಾನದ 73 ನೇ ತಿದ್ದುಪಡಿಯ ಪ್ರಕಾರ…
ರೈತರಿಗೆ ಸರ್ಕಾರದ ಸಬ್ಸಿಡಿ ಹಣದಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡುವ ಅವಕಾಶ. ಕೃಷಿ ಭಾಗ್ಯ ಯೋಜನೆಯಡಿ ಮಳೆ ನೀರು ಸಂಗ್ರಹಣೆಗಾಗಿ…
ಈ ಯೋಜನೆಯ ಮೂಲಕ, ಹೂಡಿಕೆದಾರರು ತಮ್ಮ ಹಣವನ್ನು ಸುರಕ್ಷಿತವಾಗಿ ಇರಿಸಬಹುದು ಮತ್ತು ಪ್ರತಿ ತಿಂಗಳ ಬಡ್ಡಿ ರೂಪದಲ್ಲಿ ಸ್ಥಿರ ಆದಾಯವನ್ನು…
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಈಗಿನ ಕಾಲದಲ್ಲಿ ರೈತರು ತಮ್ಮ ಹೊಲದ…
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನೀವು ಕೃಷಿ ಚಟುವಟಿಕೆಗಾಗಿ ಬ್ಯಾಂಕಿನಿಂದ…
ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…