Categories: information

ಕಂಬಳದ ಒಂದು ಕೋಣದ ಬೆಲೆ ತಿಳಿದರೆ ನೀವು ಶಾಕ್ ಆಗುತ್ತಿರಿ? ಅಷ್ಟಕ್ಕೂ ಏನಿದು ಕಂಬಳ?

ಕಂಬಳ ಎಂದರೇನು ಕಂಬಳ ಹೇಗೆ ಶುರುವಾಯ್ತು, ಕಂಬಳದ ಕೋಣಗಳನ್ನು ಹೇಗೆ ಸಿದ್ಧತೆ ಮಾಡುತ್ತಾರೆ? ಸಿದ್ಧತೆಗೆ ಎಷ್ಟು ಖರ್ಚಾಗುತ್ತದ? ಇದಕ್ಕೂ ದೈವಕ್ಕೂ ಇರುವ ಸಂಬಂಧವೇನು? ಇವೆಲ್ಲವನ್ನೂ ತಿಳಿಯೋಣ ಬನ್ನಿ!

Spread the love

ಸ್ನೇಹಿತರೇ ತುಳುನಾಡಿನಲ್ಲಿ ಹೆಸರಾದ ಕಂಬಳ ಈಗ ರಾಜಧಾನಿ ಬೆಂಗಳೂರಲ್ಲೂ ಕಾಲಿಟ್ಟಿದೆ. ಹಾಗಾದರೆ ಕಂಬಳ ಎಂದರೇನು ಕಂಬಳ ಹೇಗೆ ಶುರುವಾಯ್ತು, ಕಂಬಳದ ಕೋಣಗಳನ್ನು ಹೇಗೆ ಸಿದ್ಧತೆ ಮಾಡುತ್ತಾರೆ? ಸಿದ್ಧತೆಗೆ ಎಷ್ಟು ಖರ್ಚಾಗುತ್ತದ? ಇದಕ್ಕೂ ದೈವಕ್ಕೂ ಇರುವ ಸಂಬಂಧವೇನು? ಇವೆಲ್ಲವನ್ನೂ ತಿಳಿಯೋಣ ಬನ್ನಿ!

Thank you for reading this post, don't forget to subscribe!

ಕಂಬಳ ಕಂಪ ಮತ್ತು ಕಲಾ ಎಂಬ ಪದಗಳಿಂದ ಬಂದಿದೆ. ಕಂಪ ಎಂದರೆ ಕೆಸರು ಕಲಾ ಎಂದರೆ ಮೈದಾನ ಎಂದರ್ಥ ಇದು ಕೃಷಿ ಬದುಕಲ್ಲಿ ಹುಟ್ಟಿಕೊಂಡ ಕ್ರೀಡೆ. ಇದು ತುಳುನಾಡಿನ ಕ್ರೀಡೆ ಮತ್ತು ದೈವಗಳಿಗೆ ತೋರಿಸುವ ಗೌರವ. ಇತಿಹಾಸ ಹೇಳುವಂತೆ ಕಂಬಳ ಆಚರಣೆಯನ್ನು ಸಾವಿರ ವರ್ಷಗಳ ಹಿಂದೆ ಹೊಯ್ಸಳರು ಶುರು ಮಾಡಿದರು ಅವುಗಳನ್ನು ಯುದ್ಧದಲ್ಲಿ ಬಳಸಿಕೊಳ್ಳುವುದು, ಅವುಗಳ ವೇಗ ಪರೀಕ್ಷಿಸುವುದು ಅವರ ಉದ್ದೇಶವಾಗಿತ್ತು. ನಂತರ ಅದನ್ನು ಜಮೀನ್ದಾರರು ಕ್ರೀಡೆಯಾಗಿ, ಸಂಪ್ರದಾಯವಾಗಿ ಬೆಳೆಸಿಕೊಂಡು ಬಂದರೆಂದು ಹೇಳಲಾಗುತ್ತದೆ.  ಇದು ಸಾಮಾನ್ಯವಾಗಿ  ನವೆಂಬರ್ ನಲ್ಲಿ ಅಂದರೆ ಬೆಳೆ ಕಟಾವಿನ ಸಮಯದಲ್ಲಿ ಶುರುವಾಗಿ ಮಾರ್ಚ್-ಏಪ್ರಿಲ್ ವರೆಗೂ ನಡೆಯುತ್ತದೆ. ಕೋಣಗಳ ಸಿದ್ಧತೆ ಆಗಸ್ಟ್ ತಿಂಗಳಲ್ಲಿ ಪ್ರಾರಂಭವಾಗುತ್ತದೆ. ಉತ್ತಮ ಬೆಳೆಗಾಗಿ ಕದ್ರಿ ಮಂಜುನಾಥನಿಗೆ ಕಂಬಳ ನಡೆಸಲಾಗುತ್ತದೆ ಎಂಬ ನಂಬಿಕೆ ಇದೆ. ರೈತರಿಗೆ ಬೆಳೆ ನಾಟಿಯಿಂದ ಕಟಾವಿನವರೆಗೂ ಬಿಡುವಿಲ್ಲದೆ ಸ್ವಲ್ಪ ರಿಲ್ಯಾಕ್ಸ್ ಆಗಲೆಂದು ಕಂಬಳ ನಡೆಸಲಾಗುವುದು ಮತ್ತು ಕಂಬಳ ಎಂದರೆ ದೈವಗಳಿಗೆ ಪ್ರೀತಿ ನಡೆಸದಿದ್ದರೆ ದೈವಗಳು ಕೋಪಗೊಳ್ಳುತ್ತವೆ ಎಂಬ ನಂಬಿಕೆಯೂ ಇದೆ.

ಸಾಮಾನ್ಯವಾಗಿ ಕೆಸರುಗದ್ದೆ ಅಥವಾ ನದಿಯ ತಟವನ್ನು ಕಂಬಳದ ಟ್ರ್ಯಾಕ್ ಆಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ ಎರಡು ಕೋಣಗಳ ಎರಡು ಜೋಡಿ ಒಂದು ಭಾರಿ ಸವಾರಿಗೆ ಇಳಿಯುತ್ತವೆ. ಸುಮಾರು 150 ಜೋಡಿಗಳು ಭಾಗವಹಿಸುತ್ತವೆ. ಎರಡು ಕೋಣಗಳನ್ನು ನೇಗಿಲ ಮೂಲಕ ಕಟ್ಟಲಾಗುತ್ತದೆ. ಅವುಗಳ ವೆಗದಲ್ಲಿಯೆ ಸ್ಪರ್ಧಿಯು ಕೂಡ ಹಗ್ಗ ಹಿಡಿದು ಓಡಬೇಕಾಗುತ್ತದೆ. ಒಂದು ಕಂಬಳ ಗದ್ದೆಯಲ್ಲಿ ಎರಡು ಟ್ರ್ಯಾಕ್ ಗಳಿರುತ್ತವೆ, 120 ರಿಂದ 160 ಮೀಟರ್ ಉದ್ದ ಮತ್ತು 8 ರಿಂದ 12 ಮೀಟರ್ ಅಗಲ ಅಳತೆ ಹೊಂದಿರುತ್ತದೆ.

ಕಂಬಳ ಕೋಣವನ್ನು ಸಾಕುವುದು ಕಠಿಣವಾಗಿದ್ದು ಒಂದು ವರ್ಷಕ್ಕೆ ಒಂದು ಜೋಡಿ ಕೋಣಕ್ಕೆ ಸುಮಾರು ಹತ್ತು ಲಕ್ಷ ಖರ್ಚಾಗುತ್ತದೆ. ಅದನ್ನು ಮಾಲೀಕರು ಮನೆಮಗನಂತೆ ನೋಡಿಕೊಳ್ಳುತ್ತಾರೆ ಪ್ರತಿದಿನ ಎಣ್ಣೆ ಮಸಾಜ್ ಮಾಡಿ ಬಿಸಿಲಿಗೆ ನಿಲ್ಲಿಸಬೇಕು ನಂತರ ಬಿಸಿನೀರಿನಿಂದ ಸ್ನಾನ ಮಾಡಿಸಬೇಕು. ಮೈ ಹೊಳಪು ಹೋಗದಂತೆ ಪ್ರತಿದಿನ ಕೊಬ್ಬರಿ ಎಣ್ಣೆ ಹಚ್ಚಲಾಗುತ್ತದೆ. ಇವುಗಳಿಗೆ ಆಹಾರ ಪ್ರತಿದಿನ ಬೇಯಿಸಿದ ಹುರುಳಿ ಮತ್ತು ಹುಲ್ಲು. ದೇಹದ ಉಷ್ಣಾಂಶ ಕಡಿಮೆ ಮಾಡಲು ಕಲ್ಲಂಗಡಿ ಮತ್ತು ಕುಂಬಳಕಾಯಿ ತಿನಿಸಲಾಗುತ್ತದೆ. ಕಂಬಳ ಸಮೀಪ ಬಂದಂತೆ ಅವುಗಳಿಗಂತು ರಾಜಮರ್ಯಾದೆ.

ಕಂಬಳದಲ್ಲಿ ಭಾಗಿಯಾಗುವರಿಗೆ ನಿಯಮಗಳು!!!!!

ಕಂಬಳ ಸ್ಪರ್ಧೆಯಲ್ಲಿ ಯಾರೂ ಬೇಕಾದರೂ ಭಾಗವಹಿಸುವಂತಿಲ್ಲ ಹಾಗಾದರೆ ಕೆಲವು ವ್ರತಗಳನ್ನು ಅನುಸರಿಸಬೇಕು. ಭಾಗಿಯಾಗುವವರು ಕಂಬಳ ನಡೆಯುವ ಹಲವು ದಿನಗಳ ಮುನ್ನವೇ ಮಾಂಸಾಹಾರ ಮತ್ತು ಮದ್ಯಸೇವನೆ ಬಿಡಬೇಕು, ಮನೆಯಲ್ಲಿ ಯಾವುದೇ ಸೂತಕ ಇರಬಾರದು, ಕಂಬಳದ ಗದ್ದೆಗೆ ಚಪ್ಪಲಿ ಕೂಡ ಹಾಕಬಾರದು.

ಕಂಬಳ ಮುಗಿದ ನಂತರ ಕಂಬಳದ ಗದ್ದೆಯ ನೀರಿನಲ್ಲಿ ಔಷಧೀಯ ಗುಣವಿದ್ದು ಅದನ್ನು ಹುಷಾರಿಲ್ಲದ ಕೋಣದ ಮೇಲೆ ಸುರಿದರೆ ಹುಷಾರಾಗುತ್ತೆ ಎನ್ನುವ ನಂಬಿಕೆ ಇದೆ. ಕಂಬಳ ಕೊಣ ಸಾಕುವ ವಿವಿಧ ಮನೆತನಗಳು ಅದರಲ್ಲಿ ಗುತ್ತು ಮನೆತನದ ಕೋಣಗಳಿಗೆ ಹೆಚ್ಚಿನ ಡಿಮ್ಯಾಂಡ್  ಇದೆ. ಈ ಕೋಣಗಳಿಗೆ 5 ರಿಂದ 50 ಲಕ್ಷ ಬೆಲೆ ಇದೆ. ಕಂಬಳ ನಡೆಸುವ ಸುಮಾರು ಹದಿನೆಂಟು ಸಮಿತಿಗಳು ಇವೆ ವರ್ಷಕ್ಕೆ ಸುಮಾರು 45 ಕಂಬಳಗಳು ನಡೆಯುತ್ತವೆ.

ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.

Recent Posts

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…

56 years ago

Trump Warns Oman Over Hormuz Strait Mediation With Iran

Amid escalating tensions in the Strait of Hormuz, the United States has launched fresh strikes…

56 years ago

ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಿಎಂ ರಾಜೀನಾಮೆ ನೀಡಬಹುದೇ..?

ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…

56 years ago

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…

56 years ago