ಸ್ನೇಹಿತರೆ ತೆಂಗಿನಕಾಯಿಯನ್ನು ನಮ್ಮ ಕರ್ನಾಟಕ ರಾಜ್ಯದ ಎಲ್ಲಾ ಕಡೆಯಲ್ಲೂ ಬೆಳೆಯುತ್ತಿದ್ದು ಈ ನುಸಿ ಪೀಡೆ ರೋಗವು ಇಳುವರಿಗೆ ತುಂಬಾ ದಕ್ಕೆ ಉಂಟು ಮಾಡುತ್ತಿದ್ದು ರೈತರು ತುಂಬಾ ನಷ್ಟಕ್ಕೆ ಈಡಾಗುತ್ತಿದ್ದಾರೆ. ಈ ರೋಗವು Eriophid mite ಎಂಬ ಸೂಕ್ಷ್ಮಾಣು ಜೀವಿಯಿಂದ ಬರುತ್ತದೆ ಇದನ್ನು ನುಸಿ ರೋಗ ಎಂದು ಕರೆಯುತ್ತಾರೆ.
ಸ್ನೇಹಿತರೆ ತೆಂಗಿನಕಾಯಿಯನ್ನು ನಮ್ಮ ಕರ್ನಾಟಕ ರಾಜ್ಯದ ಎಲ್ಲಾ ಕಡೆಯಲ್ಲೂ ಬೆಳೆಯುತ್ತಿದ್ದು ಈ ನುಸಿ ಪೀಡೆ ರೋಗವು ಇಳುವರಿಗೆ ತುಂಬಾ ದಕ್ಕೆ ಉಂಟು ಮಾಡುತ್ತಿದ್ದು ರೈತರು ತುಂಬಾ ನಷ್ಟಕ್ಕೆ ಈಡಾಗುತ್ತಿದ್ದಾರೆ. ಈ ರೋಗವು Eriophid mite ಎಂಬ ಸೂಕ್ಷ್ಮಾಣು ಜೀವಿಯಿಂದ ಬರುತ್ತದೆ ಇದನ್ನು ನುಸಿ ರೋಗ ಎಂದು ಕರೆಯುತ್ತಾರೆ. ತೆಂಗಿನಕಾಯಿಯಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ರೋಗ ಮತ್ತು ಅತಿ ನಷ್ಟವನ್ನು ಉಂಟು ಮಾಡುತ್ತದೆ. ಹಾಗಾದರೆ ಈ ಆರ್ಟಿಕಲ್ ಮುಖಾಂತರ ಇದಕ್ಕೆ ಪರಿಹಾರವನ್ನು ತಿಳಿದುಕೊಳ್ಳೋಣ ಬನ್ನಿ.
ರೋಗದ ಲಕ್ಷಣಗಳನ್ನು ನೋಡುವುದಾದರೆ ತೆಂಗಿನ ಕಾಯಿಯು ಒಣಗಿದಂತೆ ಮತ್ತು ಕಾಯಿಯ ಸುತ್ತಲೂ ಅಂಟು ಅಂಟಿಕೊಂಡಿರುತ್ತದೆ ಕೆಲವೊಂದು ಸಾರಿ ತೆಂಗಿನ ಒಳಭಾಗದಲ್ಲಿ ಕೊಬ್ಬರಿ ಮತ್ತು ಎಳೆ ನೀರಿನ ಬದಲಾಗಿ ದ್ರವರೂಪದ ಅಂಟು ಬೆಳೆದುಕೊಂಡಿರುತ್ತದೆ.
ಇದನ್ನೂ ಓದಿ: ರೈತರೆ ನಿಮ್ಮ ಮೊಬೈಲಿನಲ್ಲಿ ಸೋಲಾರ್ ಪಂಪ್ ಸೆಟ್ಟಿಗೆ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ ನೋಡಿ
ಪರಿಹಾರಗಳು : ಕೀಟನಾಶಕ ಸಿಂಪಡಣೆ
ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದು ಸಿಂಪಡನೆ ಮಾಡಬೇಕು
ಮೊನೊ ಕ್ರೊಟೋಫಾಸ್
ಟ್ರೈಜೋಫಾಸ್
ಎಥಿಯೊನ್
ಕಾರ್ಬೋಸಲ್ಫಾನ್
ತೆಂಗಿನ ಮರಗಳು ತುಂಬಾ ಎತ್ತರ ಇರುವುದರಿಂದ ಇವುಗಳನ್ನು ಸಿಂಪಡಣೆ ಮಾಡಲು ತುಂಬಾ ತೊಂದರೆ ಆಗುತ್ತೆ ಅದರಿಂದ ಕೆಲವು ರೈತರು ಹಾಗೆ ಬಿಡುತ್ತಾರೆ ಅದಕ್ಕೆ ಇನ್ನೊಂದು ಪರಿಹಾರ ಎಂದರೆ ಕೀಟನಾಶಕವನ್ನು ಕಲ್ಲು ಉಪ್ಪಿನ ಜೊತೆಗೆ ಮಿಶ್ರಣ ಮಾಡಿ ಒಂದು ಹತ್ತಿ ಬಟ್ಟೆಯಲ್ಲಿ ಕಟ್ಟಿ ಹೂ ಬಿಡುವ ಅಥವಾ ಕಾಯಿ ಬಿಡುವ ಸಂದರ್ಭದಲ್ಲಿ ಸುಳಿಯಲ್ಲಿ ಇಡಬೇಕು ಆ ಉಪ್ಪು ಹನಿ ಹನಿಯಾಗಿ ಕರಗಿ ಈ ರೋಗ ಹರಡುವುದನ್ನು ತಡೆಗಟ್ಟುತ್ತದೆ.
ಇನ್ನೊಂದು ಪರಿಹಾರವೆಂದರೆ ಸೀಮೆಎಣ್ಣೆಯನ್ನು ಒಂದು ಬಾಟಲಿನಲ್ಲಿ ಹಾಕಿ ಮೇಲ್ಭಾಗದಲ್ಲಿ ಒಂದು ರಂದ್ರವನ್ನು ಮಾಡಿ ಅದಕ್ಕೆ ದಾರವನ್ನು ಕಟ್ಟಿ ತೆಂಗಿನಕಾಯಿ ಗೊನೆಗೆ ನೇತು ಹಾಕಿದರೆ ಸೀಮೆಎಣ್ಣೆ ಗಾಳಿಯಲ್ಲಿ ಎಲ್ಲ ಕಡೆ ಹರಡಿ ನುಸಿ ಕೀಟವನ್ನು ನಿಯಂತ್ರಣ ಮಾಡುತ್ತದೆ.
ಇದನ್ನೂ ಓದಿ: SUBSIDY FOR AGRICULTURAL EQUIPMENT – ವ್ಯವಸಾಯ ಯಂತ್ರೋಪಕರಣಗಳ ಮೇಲಿನ ಸಬ್ಸಿಡಿ ಪಡೆಯಲು ತಕ್ಷಣ ಅರ್ಜಿ ಸಲ್ಲಿಸಿ
ಮತ್ತೊಂದು ಪರಿಹಾರ ನೋಡುವುದಾದರೆ ಸಾಮಾನ್ಯವಾಗಿ ಹೊಲದಲ್ಲಿ ಬೇವಿನ ಮರಗಳು ಇದ್ದೇ ಇರುತ್ತವೆ. ಆ ಬೇವಿನ ಮರದ ಬೀಜವನ್ನು ಪುಡಿ ಮಾಡಿ ವರ್ಷದಲ್ಲಿ ಎರಡು ಬಾರಿ ತೆಂಗಿನ ಬೇರಿಗೆ ಹಾಕಬೇಕು ಇದನ್ನು ಯಾವುದೇ ಖರ್ಚಿಲ್ಲದೆ ಜೀರೋ ಬಜೆಟ್ ನಿಂದ ಪರಿಹಾರ ಮಾಡಿಕೊಳ್ಳಬಹುದು ಅದರ ಜೊತೆಗೆ ಕಲ್ಲುಪ್ಪು ಮಿಶ್ರಣ ಮಾಡಬೇಕು. ಹೀಗೆ ಮಾಡಿದರೆ ತೆಂಗಿನಕಾಯಿಯ ನುಶಿ ರೋಗವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.
ಮಿಡಿಯಾ ಚಾಣಕ್ಯ ಮಾಹಿತಿ ತಾಣಕ್ಕೆ ಭೇಟಿ ನೀಡಿದ ಎಲ್ಲಾ ರೈತರಿಗೂ ಧನ್ಯವಾದಗಳು. ಇದೇ ರೀತಿಯ ಉಪಯುಕ್ತ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್ ಮೂಲಕ ನೀವು ನಮ್ಮ ವಾಟ್ಸಪ್ ಚಾನೆಲ್ ಗೆ ಸೇರಬಹುದು.
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ 👇👇👇👇👇 https://whatsapp.com/channel/0029VaDOwCTKQuJKSwo7D63M
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನೀವು ನಿಮ್ಮ ಜಮೀನಿನ ಆಕಾರಬಂದ್…
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ದಸರಾ ಹಬ್ಬದ ನಿಮಿತ್ತವಾಗಿ ಇತ್ತೀಚೆಗಷ್ಟೇ…
ಹಾಗಾದರೆ ಇಲ್ಲಿಯವರೆಗೆ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ (Pm kisan samman yojana) ಅಡಿಯಲ್ಲಿ ನಿಮ್ಮ ಖಾತೆಗೆ ಎಷ್ಟು…
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…
ರಸಗೊಬ್ಬರ ವಿತರಣೆಗೆ ರೈತರಿಗೆ FID ಕಡ್ಡಾಯವಾಗಿದೆ. ಈ ಹೊಸ ನಿಯಮದ ಉದ್ದೇಶ, ಹೇಗೆ ಕೆಲಸ ಮಾಡುತ್ತದೆ, ರೈತರಿಗೆ ಲಾಭ-ನಷ್ಟಗಳು ಏನು…
ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನೀವು ಕೃಷಿ ಚಟುವಟಿಕೆಗಾಗಿ ಬ್ಯಾಂಕಿನಿಂದ…