Categories: information

ಚಂಡಮಾರುತ ಅಥವಾ ಸೈಕ್ಲೋನ್ ಹೇಗೆ ಹುಟ್ಟುತ್ತವೆ ಗೊತ್ತಾ? ಇವುಗಳಿಗೆ ಹೇಗೆ ಹೆಸರಿಡಲಾಗುತ್ತದೆ? ಇವುಗಳನ್ನು ತಡೆಯಲು ಸಾಧ್ಯವಿಲ್ಲವೇ?

ಸ್ನೇಹಿತರೆ ಸೈಕ್ಲೋನ್ ಅಥವಾ ಚಂಡಮಾರುತ ಎನ್ನುವುದು ತುಂಬಾ ಸಣ್ಣ ಶಬ್ದವಾದರೂ, ಅದರ ಪರಿಣಾಮ ತುಂಬಾ ದೊಡ್ಡದು ಇದನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ದೊಡ್ಡ ವಿಚಾರ. ಚಂಡಮಾರುತ  ಆಗಾಗ ಪ್ರವೇಶ ಮಾಡಿ ದೊಡ್ಡ ಕೋಲಾಹಲವನ್ನು ಸೃಷ್ಟಿ ಮಾಡುತ್ತದೆ. ಕೆಲವು ಕಡೆ ಮೋಡ ಮಳೆಗೆ ಸೀಮಿತವಾದರೆ, ಕೆಲವೊಂದು ಕಡೆ  ಮಳೆ ಸಹಿತ ಬಿರುಗಾಳಿ ಸೃಷ್ಟಿಯಾಗಿ ದೊಡ್ಡಮಟ್ಟದ ಹಾನಿಯನ್ನು ಉಂಟು ಮಾಡುತ್ತದೆ . ಹಾಗಾದರೆ ಚಂಡಮಾರುತ ಎಂದರೇನು ಅದು ಹೇಗೆ ಹುಟ್ಟುತ್ತದೆ. ಮತ್ತು ಪ್ರತಿ ಸಾರಿ ಅದಕ್ಕೆ ಬೇರೆ ಬೇರೆ ಹೆಸರುಗಳನ್ನು ಹೇಗೆ ಇಡಲಾಗುತ್ತದೆ  ಎಲ್ಲವನ್ನು ತಿಳಿಯೋಣ ಬನ್ನಿ.

Spread the love

ಸ್ನೇಹಿತರೆ ಸೈಕ್ಲೋನ್ ಅಥವಾ ಚಂಡಮಾರುತ ಎನ್ನುವುದು ತುಂಬಾ ಸಣ್ಣ ಶಬ್ದವಾದರೂ, ಅದರ ಪರಿಣಾಮ ತುಂಬಾ ದೊಡ್ಡದು ಇದನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ದೊಡ್ಡ ವಿಚಾರ. ಚಂಡಮಾರುತ ಆಗಾಗ ಪ್ರವೇಶ ಮಾಡಿ ದೊಡ್ಡ ಕೋಲಾಹಲವನ್ನು ಸೃಷ್ಟಿ ಮಾಡುತ್ತದೆ. ಕೆಲವು ಕಡೆ ಮೋಡ ಮಳೆಗೆ ಸೀಮಿತವಾದರೆ, ಕೆಲವೊಂದು ಕಡೆ ಮಳೆ ಸಹಿತ ಬಿರುಗಾಳಿ ಸೃಷ್ಟಿಯಾಗಿ ದೊಡ್ಡಮಟ್ಟದ ಹಾನಿಯನ್ನು ಉಂಟು ಮಾಡುತ್ತದೆ . ಹಾಗಾದರೆ ಚಂಡಮಾರುತ ಎಂದರೇನು ಅದು ಹೇಗೆ ಹುಟ್ಟುತ್ತದೆ. ಮತ್ತು ಪ್ರತಿ ಸಾರಿ ಅದಕ್ಕೆ ಬೇರೆ ಬೇರೆ ಹೆಸರುಗಳನ್ನು ಹೇಗೆ ಇಡಲಾಗುತ್ತದೆ ಎಲ್ಲವನ್ನು ತಿಳಿಯೋಣ ಬನ್ನಿ.

Thank you for reading this post, don't forget to subscribe!
How cyclones are formed

ಸ್ನೇಹಿತರೆ ಸೈಕ್ಲೋನ್ ಹೇಗೆ ಸೃಷ್ಟಿಯಾಗುತ್ತೆ ಎಂದರೆ, ಭೂಮಿಯ ಸುತ್ತಲಿನ ವಾತಾವರಣದ ಒತ್ತಡ ಕಮ್ಮಿಯಾದಾಗ ಮತ್ತು ಸಮುದ್ರದ ನೀರಿನ ತಾಪಮಾನ 26.5 ಡಿಗ್ರಿ ಸೆಲ್ಸಿಯಸ್ ನಷ್ಟು ಇದ್ದಾಗ ಸೈಕ್ಲೋನ್ ಸೃಷ್ಟಿಯಾಗುತ್ತದೆ. ವಾತಾವರಣದ ಒತ್ತಡ ಎಂದರೆ ಭೂಮಿ ಮೇಲೆ ಗಾಳಿಯು ಒಂದೇ ರೀತಿ ಇರುವುದಿಲ್ಲ, ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಗಾಳಿ ಗುರುತ್ವಾಕರ್ಷಣೆಯ ಬಲ ದಿಂದ ಭೂಮಿ ಕಡೆ ಚಲಿಸುತ್ತಿರುತ್ತದೆ, ಇದನ್ನು ವಾತಾವರಣದ ಒತ್ತಡ (atmospheric pressure) ಎಂದು ಕರೆಯುತ್ತಾರೆ. ತಾಪಮಾನ ಹೆಚ್ಚಾದಂತೆ ಗಾಳಿಯು ಭೂಮಿ ಕಡೆ ಚಲಿಸುವ ಬದಲಾಗಿ ಮೇಲ್ಮುಖವಾಗಿ ಚಲಿಸುತ್ತದೆ. ಹಾಗಾಗಿ ಭೂಮಿಯ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಇದನ್ನು ವಾಯು ಭಾರ ಕುಸಿತ ಎನ್ನುತ್ತೇವೆ. ವಾಯುಭಾರ ಕುಸಿತ ಆದಾಗ ಮೇಲ್ಮುಖವಾಗಿ ಚಲಿಸುವ ಬಿಸಿ ಗಾಳಿಯ ತಾಪಮಾನ ಇನ್ನಷ್ಟು ಬಿಸಿಯಾಗಿ ಇನ್ನಷ್ಟು ವೇಗವಾಗಿ ಚಲಿಸುತ್ತದೆ. ಹೀಗೆ ಸಮುದ್ರದ ಮೇಲೆ ಖಾಲಿಯಾದ ಜಾಗವು ಸುತ್ತಮುತ್ತಲಿನ ಗಾಳಿಯಿಂದ
ಭರ್ತಿಯಾಗಲು ಪ್ರಾರಂಭಿಸುತ್ತದೆ. ಹೀಗೆ ದೂರದಿಂದ ಬಂದ ಗಾಳಿಯು ಭರ್ತಿಯಾಗುವ ಬದಲು ಸುತ್ತಿಕೊಳ್ಳಲು ಪ್ರಾರಂಭಿಸುತ್ತದೆ. ಈ ರೀತಿ ಸುತ್ತುತ್ತಿರುವ ಗಾಳಿ ಅಂದರೆ ಚಂಡಮಾರುತ ಮೋಡದೊಳಗೆ ಹೋಗಿ ಮಳೆಯನ್ನು ಸುರಿಸುತ್ತದೆ. ಚಂಡಮಾರುತಕ್ಕೆ ಮೂಲ ಕಾರಣ ತಾಪಮಾನ. ಹೀಗಾಗಿ ಚಂಡಮಾರುತ ಭೂಮಿಯನ್ನು ದಾಟಿ ಹೋಗುವಾಗ ಅಲ್ಲಿ ತಂಪು ವಾತಾವರಣವಿದ್ದಲ್ಲಿ ಚಂಡಮಾರುತ ಸಾಯುತ್ತದೆ ಅಥವಾ ಚಂಡಮಾರುತದ ತೀವ್ರತೆ ಕಡಿಮೆ ಆಗುತ್ತದೆ.

ಸಾಮಾನ್ಯವಾಗಿ ಚಂಡಮಾರುತ ಮೊಟ್ಟೆ ಆಕಾರ ಅಥವಾ V ಆಕಾರದಲ್ಲಿ ಇರುತ್ತದೆ. ಉತ್ತರ ದ್ರುವದಲ್ಲಿ ಇದು ಗಡಿಯಾರಕ್ಕೆ ವಿರುದ್ಧ ದಿಕ್ಕಿನಲ್ಲಿ ಚಲಿಸಿದರೆ ದಕ್ಷಿಣ ಧ್ರುವದಲ್ಲಿ ಗಡಿಯಾರದ ದಿಕ್ಕಿನಲ್ಲಿ ಚಲಿಸುತ್ತದೆ.
ಚಂಡ ಮಾರುತಗಳ ಸ್ವರೂಪ ಒಂದೇ ಆಗಿದ್ದರೂ ಸ್ಥಳಗಳ ಆಧಾರದ ಮೇಲೆ ಬೇರೆ ಬೇರೆ ರೀತಿಯಲ್ಲಿ ಕರೆಯಲಾಗುತ್ತದೆ. ಅಟ್ಲಾಂಟಿಕ್ ಸಾಗರದ ಚಂಡಮಾರುತಕ್ಕೆ ಹರಿಕೇನ್ ಎಂದೂ, ಹಿಂದೂ ಮಹಾಸಾಗರ ಚಂಡಮಾರುತಕ್ಕೆ ಸೈಕ್ಲೋನ್ ಮತ್ತು ಫಿಲಿಪೈನ್ಸ್ ಮತ್ತು ಫೆಸಿಫಿಕ್ ಸಾಗರದ ಚಂಡಮಾರುತಕ್ಕೆ ಟೈಫೋನ್ ಎಂದು ಕರೆಯಲಾಗುತ್ತದೆ.

ಚಂಡ ಮಾರುತಗಳಿಗೆ ಹೇಗೆ ಹೆಸರಿಡಲಾಗುತ್ತದೆ ?

ಕ್ರಿಸ್ತ ಶಕ 1800 ರ ಆಸು ಪಾಸಿಗೆ ಕ್ಯಾಥೋಲಿಕ್ ಸಂತರು, ಚಂಡಮಾರುತಗಳಿಗೆ ಹೆಸರನ್ನು ಇಡುತ್ತಿದ್ದರು. ಹಡಗುಗಳಿಗೆ ಹೆಚ್ಚಾಗಿ ಮಹಿಳೆಯರ ಹೆಸರನ್ನು ಇಡುವುದರಿಂದ 1953ರ ನಂತರ ಚಂಡಮಾರುತಕ್ಕೆ ಮಹಿಳೆಯರ ಹೆಸರನ್ನು ಇಡಲು ಆರಂಭಿಸಿದರು. 1979ರ ನಂತರ ಪುರುಷರ ಹೆಸರನ್ನು ಇಡಲು ಶುರು ಮಾಡಿದರು. ಆದರೆ 2000 ನಂತರ ಚಂಡ ಮಾರುತಕ್ಕೆ ವ್ಯವಸ್ಥಿತವಾಗಿ ಹೆಸರು ನೀಡಲು ಪ್ರಾರಂಭವಾಯಿತು. ಏಷ್ಯಾ ಸ್ಪೆಸಿಫಿಕ್ ನಲ್ಲಿ ವರ್ಲ್ಡ್ ಮೆಟ್ರೋಲಜಿಕಲ್ ಆರ್ಗನೈಜೇಷನ್( ಯುನೈಟೆಡ್ ನೇಶನ್ಸ್ ಎಕನಾಮಿಕ್ ಅಂಡ್ ಸೋಶಿಯಲ್ ಕಮಿಷನ್ ಫಾರ್ ಏಷ್ಯಾ ಅಂಡ್ ಫೆಸಿಫಿಕ್) ಚಂಡಮಾರುತಗಳಿಗೆ ಹೆಸರು ಇಡುತ್ತಾ ಬಂದಿದೆ. ಆದರೆ ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರ ಸೇರಿದಂತೆ Indian Ocean ಅಂದ್ರೆ ಹಿಂದೂ ಮಹಾಸಾಗರದಲ್ಲಿ ಉಂಟಾಗುವ ಚಂಡಮಾರುತಗಳಿಗೆ ಭಾರತದ ಹವಾಮಾನ ಇಲಾಖೆ ಹೆಸರಿಡುತ್ತದೆ ಮತ್ತು 12 ದೇಶಗಳಿಗೆ ಸಲಹೆ ನೀಡುತ್ತದೆ. 2020ರಲ್ಲಿ ಭಾರತ169 ಹೆಸರುಗಳನ್ನು ಕೊಟ್ಟಿದ್ದು ಉಳಿದ ಸದಸ್ಯ ದೇಶಗಳು 13 ಹೆಸರುಗಳನ್ನು ಕೊಟ್ಟಿವೆ. ಹೀಗೆ ರೊಟೇಶನ್ ರೀತಿಯಲ್ಲಿ ಚಂಡ ಮಾರುತಗಳಿಗೆ ಬೇರೆ ಬೇರೆ ಹೆಸರನ್ನು ಇಡಲಾಗುತ್ತದೆ. ಸದ್ಯ ಈಗ ಸದ್ದು ಮಾಡುತ್ತಿರುವ ‘ಮೈಚಾಂಗ್’ ಚಂಡಮಾರುತದ ಹೆಸರನ್ನು ಮಯನ್ಮಾರ್ ದೇಶದ ಸಲಹೆ ಮೇರೆಗೆ ಇಡಲಾಗಿದೆ. ಮೈಚಾಂಗ್ ಪದದ ಅರ್ಥ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವ . ಮೈಚಾಂಗ್ ಚಂಡಮಾರುತ ಡಿಸೆಂಬರ್ 3 ರಂದು ಬಂಗಾಳ ಕೊಲ್ಲಿ ತಲುಪಿದ್ದು, ಇದು ಈ ವರ್ಷದ ಬಂಗಾಳ ಕೊಲ್ಲಿಯ ನ 4ನೇ ಮತ್ತು ಹಿಂದೂ ಮಹಾಸಾಗರದ 6 ನೆ ಚಂಡಮಾರುತವಾಗಿದೆ.

ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.

Recent Posts

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…

56 years ago

Trump Warns Oman Over Hormuz Strait Mediation With Iran

Amid escalating tensions in the Strait of Hormuz, the United States has launched fresh strikes…

56 years ago

ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಿಎಂ ರಾಜೀನಾಮೆ ನೀಡಬಹುದೇ..?

ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…

56 years ago

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…

56 years ago