Categories: information

ಚಂಡಮಾರುತ ಅಥವಾ ಸೈಕ್ಲೋನ್ ಹೇಗೆ ಹುಟ್ಟುತ್ತವೆ ಗೊತ್ತಾ? ಇವುಗಳಿಗೆ ಹೇಗೆ ಹೆಸರಿಡಲಾಗುತ್ತದೆ? ಇವುಗಳನ್ನು ತಡೆಯಲು ಸಾಧ್ಯವಿಲ್ಲವೇ?

ಸ್ನೇಹಿತರೆ ಸೈಕ್ಲೋನ್ ಅಥವಾ ಚಂಡಮಾರುತ ಎನ್ನುವುದು ತುಂಬಾ ಸಣ್ಣ ಶಬ್ದವಾದರೂ, ಅದರ ಪರಿಣಾಮ ತುಂಬಾ ದೊಡ್ಡದು ಇದನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ದೊಡ್ಡ ವಿಚಾರ. ಚಂಡಮಾರುತ  ಆಗಾಗ ಪ್ರವೇಶ ಮಾಡಿ ದೊಡ್ಡ ಕೋಲಾಹಲವನ್ನು ಸೃಷ್ಟಿ ಮಾಡುತ್ತದೆ. ಕೆಲವು ಕಡೆ ಮೋಡ ಮಳೆಗೆ ಸೀಮಿತವಾದರೆ, ಕೆಲವೊಂದು ಕಡೆ  ಮಳೆ ಸಹಿತ ಬಿರುಗಾಳಿ ಸೃಷ್ಟಿಯಾಗಿ ದೊಡ್ಡಮಟ್ಟದ ಹಾನಿಯನ್ನು ಉಂಟು ಮಾಡುತ್ತದೆ . ಹಾಗಾದರೆ ಚಂಡಮಾರುತ ಎಂದರೇನು ಅದು ಹೇಗೆ ಹುಟ್ಟುತ್ತದೆ. ಮತ್ತು ಪ್ರತಿ ಸಾರಿ ಅದಕ್ಕೆ ಬೇರೆ ಬೇರೆ ಹೆಸರುಗಳನ್ನು ಹೇಗೆ ಇಡಲಾಗುತ್ತದೆ  ಎಲ್ಲವನ್ನು ತಿಳಿಯೋಣ ಬನ್ನಿ.

Spread the love

ಸ್ನೇಹಿತರೆ ಸೈಕ್ಲೋನ್ ಅಥವಾ ಚಂಡಮಾರುತ ಎನ್ನುವುದು ತುಂಬಾ ಸಣ್ಣ ಶಬ್ದವಾದರೂ, ಅದರ ಪರಿಣಾಮ ತುಂಬಾ ದೊಡ್ಡದು ಇದನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ದೊಡ್ಡ ವಿಚಾರ. ಚಂಡಮಾರುತ ಆಗಾಗ ಪ್ರವೇಶ ಮಾಡಿ ದೊಡ್ಡ ಕೋಲಾಹಲವನ್ನು ಸೃಷ್ಟಿ ಮಾಡುತ್ತದೆ. ಕೆಲವು ಕಡೆ ಮೋಡ ಮಳೆಗೆ ಸೀಮಿತವಾದರೆ, ಕೆಲವೊಂದು ಕಡೆ ಮಳೆ ಸಹಿತ ಬಿರುಗಾಳಿ ಸೃಷ್ಟಿಯಾಗಿ ದೊಡ್ಡಮಟ್ಟದ ಹಾನಿಯನ್ನು ಉಂಟು ಮಾಡುತ್ತದೆ . ಹಾಗಾದರೆ ಚಂಡಮಾರುತ ಎಂದರೇನು ಅದು ಹೇಗೆ ಹುಟ್ಟುತ್ತದೆ. ಮತ್ತು ಪ್ರತಿ ಸಾರಿ ಅದಕ್ಕೆ ಬೇರೆ ಬೇರೆ ಹೆಸರುಗಳನ್ನು ಹೇಗೆ ಇಡಲಾಗುತ್ತದೆ ಎಲ್ಲವನ್ನು ತಿಳಿಯೋಣ ಬನ್ನಿ.

Thank you for reading this post, don't forget to subscribe!
How cyclones are formed

ಸ್ನೇಹಿತರೆ ಸೈಕ್ಲೋನ್ ಹೇಗೆ ಸೃಷ್ಟಿಯಾಗುತ್ತೆ ಎಂದರೆ, ಭೂಮಿಯ ಸುತ್ತಲಿನ ವಾತಾವರಣದ ಒತ್ತಡ ಕಮ್ಮಿಯಾದಾಗ ಮತ್ತು ಸಮುದ್ರದ ನೀರಿನ ತಾಪಮಾನ 26.5 ಡಿಗ್ರಿ ಸೆಲ್ಸಿಯಸ್ ನಷ್ಟು ಇದ್ದಾಗ ಸೈಕ್ಲೋನ್ ಸೃಷ್ಟಿಯಾಗುತ್ತದೆ. ವಾತಾವರಣದ ಒತ್ತಡ ಎಂದರೆ ಭೂಮಿ ಮೇಲೆ ಗಾಳಿಯು ಒಂದೇ ರೀತಿ ಇರುವುದಿಲ್ಲ, ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಗಾಳಿ ಗುರುತ್ವಾಕರ್ಷಣೆಯ ಬಲ ದಿಂದ ಭೂಮಿ ಕಡೆ ಚಲಿಸುತ್ತಿರುತ್ತದೆ, ಇದನ್ನು ವಾತಾವರಣದ ಒತ್ತಡ (atmospheric pressure) ಎಂದು ಕರೆಯುತ್ತಾರೆ. ತಾಪಮಾನ ಹೆಚ್ಚಾದಂತೆ ಗಾಳಿಯು ಭೂಮಿ ಕಡೆ ಚಲಿಸುವ ಬದಲಾಗಿ ಮೇಲ್ಮುಖವಾಗಿ ಚಲಿಸುತ್ತದೆ. ಹಾಗಾಗಿ ಭೂಮಿಯ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಇದನ್ನು ವಾಯು ಭಾರ ಕುಸಿತ ಎನ್ನುತ್ತೇವೆ. ವಾಯುಭಾರ ಕುಸಿತ ಆದಾಗ ಮೇಲ್ಮುಖವಾಗಿ ಚಲಿಸುವ ಬಿಸಿ ಗಾಳಿಯ ತಾಪಮಾನ ಇನ್ನಷ್ಟು ಬಿಸಿಯಾಗಿ ಇನ್ನಷ್ಟು ವೇಗವಾಗಿ ಚಲಿಸುತ್ತದೆ. ಹೀಗೆ ಸಮುದ್ರದ ಮೇಲೆ ಖಾಲಿಯಾದ ಜಾಗವು ಸುತ್ತಮುತ್ತಲಿನ ಗಾಳಿಯಿಂದ
ಭರ್ತಿಯಾಗಲು ಪ್ರಾರಂಭಿಸುತ್ತದೆ. ಹೀಗೆ ದೂರದಿಂದ ಬಂದ ಗಾಳಿಯು ಭರ್ತಿಯಾಗುವ ಬದಲು ಸುತ್ತಿಕೊಳ್ಳಲು ಪ್ರಾರಂಭಿಸುತ್ತದೆ. ಈ ರೀತಿ ಸುತ್ತುತ್ತಿರುವ ಗಾಳಿ ಅಂದರೆ ಚಂಡಮಾರುತ ಮೋಡದೊಳಗೆ ಹೋಗಿ ಮಳೆಯನ್ನು ಸುರಿಸುತ್ತದೆ. ಚಂಡಮಾರುತಕ್ಕೆ ಮೂಲ ಕಾರಣ ತಾಪಮಾನ. ಹೀಗಾಗಿ ಚಂಡಮಾರುತ ಭೂಮಿಯನ್ನು ದಾಟಿ ಹೋಗುವಾಗ ಅಲ್ಲಿ ತಂಪು ವಾತಾವರಣವಿದ್ದಲ್ಲಿ ಚಂಡಮಾರುತ ಸಾಯುತ್ತದೆ ಅಥವಾ ಚಂಡಮಾರುತದ ತೀವ್ರತೆ ಕಡಿಮೆ ಆಗುತ್ತದೆ.

ಸಾಮಾನ್ಯವಾಗಿ ಚಂಡಮಾರುತ ಮೊಟ್ಟೆ ಆಕಾರ ಅಥವಾ V ಆಕಾರದಲ್ಲಿ ಇರುತ್ತದೆ. ಉತ್ತರ ದ್ರುವದಲ್ಲಿ ಇದು ಗಡಿಯಾರಕ್ಕೆ ವಿರುದ್ಧ ದಿಕ್ಕಿನಲ್ಲಿ ಚಲಿಸಿದರೆ ದಕ್ಷಿಣ ಧ್ರುವದಲ್ಲಿ ಗಡಿಯಾರದ ದಿಕ್ಕಿನಲ್ಲಿ ಚಲಿಸುತ್ತದೆ.
ಚಂಡ ಮಾರುತಗಳ ಸ್ವರೂಪ ಒಂದೇ ಆಗಿದ್ದರೂ ಸ್ಥಳಗಳ ಆಧಾರದ ಮೇಲೆ ಬೇರೆ ಬೇರೆ ರೀತಿಯಲ್ಲಿ ಕರೆಯಲಾಗುತ್ತದೆ. ಅಟ್ಲಾಂಟಿಕ್ ಸಾಗರದ ಚಂಡಮಾರುತಕ್ಕೆ ಹರಿಕೇನ್ ಎಂದೂ, ಹಿಂದೂ ಮಹಾಸಾಗರ ಚಂಡಮಾರುತಕ್ಕೆ ಸೈಕ್ಲೋನ್ ಮತ್ತು ಫಿಲಿಪೈನ್ಸ್ ಮತ್ತು ಫೆಸಿಫಿಕ್ ಸಾಗರದ ಚಂಡಮಾರುತಕ್ಕೆ ಟೈಫೋನ್ ಎಂದು ಕರೆಯಲಾಗುತ್ತದೆ.

ಚಂಡ ಮಾರುತಗಳಿಗೆ ಹೇಗೆ ಹೆಸರಿಡಲಾಗುತ್ತದೆ ?

ಕ್ರಿಸ್ತ ಶಕ 1800 ರ ಆಸು ಪಾಸಿಗೆ ಕ್ಯಾಥೋಲಿಕ್ ಸಂತರು, ಚಂಡಮಾರುತಗಳಿಗೆ ಹೆಸರನ್ನು ಇಡುತ್ತಿದ್ದರು. ಹಡಗುಗಳಿಗೆ ಹೆಚ್ಚಾಗಿ ಮಹಿಳೆಯರ ಹೆಸರನ್ನು ಇಡುವುದರಿಂದ 1953ರ ನಂತರ ಚಂಡಮಾರುತಕ್ಕೆ ಮಹಿಳೆಯರ ಹೆಸರನ್ನು ಇಡಲು ಆರಂಭಿಸಿದರು. 1979ರ ನಂತರ ಪುರುಷರ ಹೆಸರನ್ನು ಇಡಲು ಶುರು ಮಾಡಿದರು. ಆದರೆ 2000 ನಂತರ ಚಂಡ ಮಾರುತಕ್ಕೆ ವ್ಯವಸ್ಥಿತವಾಗಿ ಹೆಸರು ನೀಡಲು ಪ್ರಾರಂಭವಾಯಿತು. ಏಷ್ಯಾ ಸ್ಪೆಸಿಫಿಕ್ ನಲ್ಲಿ ವರ್ಲ್ಡ್ ಮೆಟ್ರೋಲಜಿಕಲ್ ಆರ್ಗನೈಜೇಷನ್( ಯುನೈಟೆಡ್ ನೇಶನ್ಸ್ ಎಕನಾಮಿಕ್ ಅಂಡ್ ಸೋಶಿಯಲ್ ಕಮಿಷನ್ ಫಾರ್ ಏಷ್ಯಾ ಅಂಡ್ ಫೆಸಿಫಿಕ್) ಚಂಡಮಾರುತಗಳಿಗೆ ಹೆಸರು ಇಡುತ್ತಾ ಬಂದಿದೆ. ಆದರೆ ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರ ಸೇರಿದಂತೆ Indian Ocean ಅಂದ್ರೆ ಹಿಂದೂ ಮಹಾಸಾಗರದಲ್ಲಿ ಉಂಟಾಗುವ ಚಂಡಮಾರುತಗಳಿಗೆ ಭಾರತದ ಹವಾಮಾನ ಇಲಾಖೆ ಹೆಸರಿಡುತ್ತದೆ ಮತ್ತು 12 ದೇಶಗಳಿಗೆ ಸಲಹೆ ನೀಡುತ್ತದೆ. 2020ರಲ್ಲಿ ಭಾರತ169 ಹೆಸರುಗಳನ್ನು ಕೊಟ್ಟಿದ್ದು ಉಳಿದ ಸದಸ್ಯ ದೇಶಗಳು 13 ಹೆಸರುಗಳನ್ನು ಕೊಟ್ಟಿವೆ. ಹೀಗೆ ರೊಟೇಶನ್ ರೀತಿಯಲ್ಲಿ ಚಂಡ ಮಾರುತಗಳಿಗೆ ಬೇರೆ ಬೇರೆ ಹೆಸರನ್ನು ಇಡಲಾಗುತ್ತದೆ. ಸದ್ಯ ಈಗ ಸದ್ದು ಮಾಡುತ್ತಿರುವ ‘ಮೈಚಾಂಗ್’ ಚಂಡಮಾರುತದ ಹೆಸರನ್ನು ಮಯನ್ಮಾರ್ ದೇಶದ ಸಲಹೆ ಮೇರೆಗೆ ಇಡಲಾಗಿದೆ. ಮೈಚಾಂಗ್ ಪದದ ಅರ್ಥ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವ . ಮೈಚಾಂಗ್ ಚಂಡಮಾರುತ ಡಿಸೆಂಬರ್ 3 ರಂದು ಬಂಗಾಳ ಕೊಲ್ಲಿ ತಲುಪಿದ್ದು, ಇದು ಈ ವರ್ಷದ ಬಂಗಾಳ ಕೊಲ್ಲಿಯ ನ 4ನೇ ಮತ್ತು ಹಿಂದೂ ಮಹಾಸಾಗರದ 6 ನೆ ಚಂಡಮಾರುತವಾಗಿದೆ.

ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.

Recent Posts

ಮೊಬೈಲ್ ನಲ್ಲೇ ನಿಮ್ಮ ಜಮೀನಿನ ಆಕಾರಬಂದ್ ಚೆಕ್ ಮಾಡುವುದು ಹೇಗೆ? ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನೀವು ನಿಮ್ಮ ಜಮೀನಿನ ಆಕಾರಬಂದ್…

56 years ago

ಗೃಹಲಕ್ಷ್ಮೀ: ಅರ್ಹ ಮತ್ತು ಅನರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ! ಇದರಲ್ಲಿ ನಿಮ್ಮ ಮನೆಯವರ ಹೆಸರು ಇದೆಯಾ ಚೆಕ್ ಮಾಡಿ

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ದಸರಾ ಹಬ್ಬದ ನಿಮಿತ್ತವಾಗಿ ಇತ್ತೀಚೆಗಷ್ಟೇ…

56 years ago

ಪಿಎಂ ಕಿಸಾನ್: ಇಲ್ಲಿಯವರೆಗೆ ನಿಮಗೆ ಎಷ್ಟು ಹಣ ಜಮಾ ಆಗಿದೆ ಹೀಗೆ ಚೆಕ್ ಮಾಡಿ

ಹಾಗಾದರೆ ಇಲ್ಲಿಯವರೆಗೆ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ (Pm kisan samman yojana) ಅಡಿಯಲ್ಲಿ  ನಿಮ್ಮ ಖಾತೆಗೆ ಎಷ್ಟು…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

ರಸಗೊಬ್ಬರ ವಿತರಣೆಗೆ ರೈತರಿಗೆ FID ಕಡ್ಡಾಯ – ಹೊಸ ನಿಯಮಗಳು ಮತ್ತು ಪರಿಣಾಮ

ರಸಗೊಬ್ಬರ ವಿತರಣೆಗೆ ರೈತರಿಗೆ FID ಕಡ್ಡಾಯವಾಗಿದೆ. ಈ ಹೊಸ ನಿಯಮದ ಉದ್ದೇಶ, ಹೇಗೆ ಕೆಲಸ ಮಾಡುತ್ತದೆ, ರೈತರಿಗೆ ಲಾಭ-ನಷ್ಟಗಳು ಏನು…

56 years ago

ಯಾವ ಸರ್ವೇ ನಂಬರ್ ಮೇಲೆ ಎಷ್ಟು ಸಾಲವಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನೀವು ಕೃಷಿ ಚಟುವಟಿಕೆಗಾಗಿ ಬ್ಯಾಂಕಿನಿಂದ…

56 years ago