Categories: information

ನಮ್ಮ ಹೊಲ ನಮ್ಮ ದಾರಿ ಯೋಜನೆ: 1 ಕಿ.ಮೀ ರಸ್ತೆಗೆ 12.5 ಲಕ್ಷ ಸಹಾಯಧನ; ನಿಮ್ಮ ಜಮೀನಿಗೆ ಹೋಗಲು ದಾರಿ ಇಲ್ವಾ? ಹೀಗೆ ಅರ್ಜಿ ಸಲ್ಲಿಸಿ.!

ರೈತರಿಗೆ ಹೊಲಕ್ಕೆ ಹೋಗುವ ದಾರಿ ಇಲ್ವಾ? ಚಿಂತಿಸ್ಬೇಡಿ! ಸರ್ಕಾರದ ‘ನಮ್ಮ ಹೊಲ ನಮ್ಮ ದಾರಿ’ ಯೋಜನೆಯಡಿ ಈಗ 12 .5 ಲಕ್ಷ ರೂ. ಸಹಾಯ ಲಭ್ಯ. ಅರ್ಜಿ ಹಾಕುವ ವಿಧಾನ, ಅರ್ಹತೆ ಮತ್ತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ

Spread the love

ಮಳೆಗಾಲ ಬಂದ್ರೆ ತೋಟಕ್ಕೆ ಟ್ರ್ಯಾಕ್ಟರ್ ಹೋಗಲ್ಲ, ಬಂಡಿ ಹೋಗಲ್ಲ ಅಂತ ಒದ್ದಾಡ್ತಿದ್ದೀರಾ? ಪಕ್ಕದವರ ಜೊತೆ ದಾರಿಗಾಗಿ ಜಗಳ ಆಡ್ತಿದ್ದೀರಾ? ಅದಕ್ಕೆಲ್ಲಾ ಫುಲ್ ಸ್ಟಾಪ್ ಇಡಲು ಸರ್ಕಾರ ‘ನಮ್ಮ ಹೊಲ ನಮ್ಮ ದಾರಿ’ ಯೋಜನೆ ತಂದಿದೆ. ನಿಮ್ಮ ಹೊಲಕ್ಕೆ ರಸ್ತೆ ಮಾಡಿಸಲು ಸರ್ಕಾರವೇ ಬರೋಬ್ಬರಿ ₹12.5 ಲಕ್ಷ ಖರ್ಚು ಮಾಡುತ್ತೆ! ಈ ಲಾಭ ಪಡೆಯುವುದು ಹೇಗೆ? ಇಲ್ಲಿದೆ ಡೀಟೇಲ್ಸ್

Thank you for reading this post, don't forget to subscribe!

ರೈತರು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ಸರಿಯಾದ ರಸ್ತೆ ಇಲ್ಲದೆ ಪರದಾಡುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಕ್ರಾಂತಿಕಾರಿ ಹೆಜ್ಜೆಯಿಟ್ಟಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ (MGNREGA) ಮತ್ತು ರಾಜ್ಯ ಸರ್ಕಾರದ ಅನುದಾನ ಸೇರಿ “ನಮ್ಮ ಹೊಲ ನಮ್ಮ ದಾರಿ” ಯೋಜನೆ ಜಾರಿಗೆ ಬಂದಿದೆ. ಈ ಕುರಿತು ಸಂಪೂರ್ಣವಾಗಿ ಕೆಳಗೆ ನೋಡೋಣ.

₹12.50 ಲಕ್ಷ ಅನುದಾನದ ಲೆಕ್ಕಾಚಾರ:

ಪ್ರತಿ 1 ಕಿಲೋಮೀಟರ್ ರಸ್ತೆ ನಿರ್ಮಾಣಕ್ಕೆ ಸರ್ಕಾರ ಒಟ್ಟು ₹12.50 ಲಕ್ಷ ಖರ್ಚು ಮಾಡುತ್ತದೆ.

ಸರ್ಕಾರ ನಿಮ್ಮ ಹೊಲದ ರಸ್ತೆಗೆ ನೀಡುವ ಹಣವನ್ನು ಎರಡು ಭಾಗವಾಗಿ ಹಂಚಿಕೆ ಮಾಡಿದೆ. ಇದು ಸಿಮೆಂಟ್ ರಸ್ತೆ ಅಲ್ಲದಿದ್ದರೂ, ಜಲ್ಲಿ ಹಾಕಿ ಗಟ್ಟಿಮುಟ್ಟಾದ ರಸ್ತೆ ನಿರ್ಮಿಸಲಾಗುತ್ತದೆ.

₹9.00 ಲಕ್ಷ (ನರೇಗಾ): ಇದನ್ನು ರಸ್ತೆ ನಿರ್ಮಾಣಕ್ಕೆ ಬಳಸುವ ಕೂಲಿ ಕಾರ್ಮಿಕರಿಗೆ ಮತ್ತು ಮೆಟಲಿಂಗ್ (ಜಲ್ಲಿ) ಕೆಲಸಕ್ಕೆ ಬಳಸಲಾಗುತ್ತದೆ.

₹3.50 ಲಕ್ಷ (ರಾಜ್ಯ ಸರ್ಕಾರ): ರಸ್ತೆ ಸಮತಟ್ಟು ಮಾಡಲು ಜೆಸಿಬಿ (JCB) ಅಥವಾ ರೋಲರ್ ಯಂತ್ರಗಳನ್ನು ಬಳಸಲು ಈ ಹಣ ಮೀಸಲು (ಲೆಕ್ಕ ಶೀರ್ಷಿಕೆ 3054 ಅಡಿ).

ರೈತರಿಗೆ ಏನೇನು ಲಾಭ?

1.ಟ್ರ್ಯಾಕ್ಟರ್ ಹೋಗುವಷ್ಟು ರಸ್ತೆ: ಕನಿಷ್ಠ 3.75 ಮೀಟರ್ ಅಗಲದ ರಸ್ತೆ ನಿರ್ಮಾಣವಾಗುವುದರಿಂದ ಲಾರಿ, ಟ್ರ್ಯಾಕ್ಟರ್ ಸುಲಭವಾಗಿ ಹೊಲಕ್ಕೆ ಹೋಗಬಹುದು.
2.ಸಾಗಾಣಿಕೆ ವೆಚ್ಚ ಉಳಿತಾಯ: ರಸ್ತೆ ಚೆನ್ನಾಗಿದ್ದರೆ ಆಟೋ/ಗೂಡ್ಸ್ ವಾಹನಗಳು ಕಡಿಮೆ ಬಾಡಿಗೆಗೆ ಬರುತ್ತವೆ.
3.ಜಗಳಕ್ಕೆ ಮುಕ್ತಿ: ಸರ್ಕಾರಿ ದಾಖಲೆಯಲ್ಲಿ ರಸ್ತೆ ನಿರ್ಮಾಣವಾಗುವುದರಿಂದ ಪಕ್ಕದ ಜಮೀನಿನವರ ಕ್ಯಾತೆ ಇರುವುದಿಲ್ಲ.

ಅರ್ಹತೆ ಮತ್ತು ಷರತ್ತುಗಳೇನು?

ಎಲ್ಲಾ ರಸ್ತೆಗಳನ್ನು ಈ ಯೋಜನೆಯಡಿ ಮಾಡಲು ಬರುವುದಿಲ್ಲ. ಸರ್ಕಾರದ ಮಾರ್ಗಸೂಚಿ ಪ್ರಕಾರ ಈ ಕೆಳಗಿನ ನಿಯಮಗಳಿವೆ:

ಸರ್ಕಾರಿ ದಾಖಲೆ: ಕಂದಾಯ ಇಲಾಖೆಯ ಗ್ರಾಮ ನಕ್ಷೆಯಲ್ಲಿ (Village Map) ಅದು ‘ಸಾರ್ವಜನಿಕ ರಸ್ತೆ’, ‘ಬಂಡಿದಾರಿ’ ಅಥವಾ ‘ಕಾಲುದಾರಿ’ ಎಂದು ಗುರುತಿಸಲ್ಪಟ್ಟಿರಬೇಕು.

ಹೆಚ್ಚು ರೈತರು: ಆ ರಸ್ತೆಯನ್ನು ಕೇವಲ ಒಬ್ಬ ರೈತ ಬಳಸುವಂತಿರಬಾರದು. ಸುತ್ತಮುತ್ತಲಿನ ಅನೇಕ ರೈತರಿಗೆ ಅದು ಅನುಕೂಲವಾಗುವಂತಿರಬೇಕು

ಅನುಮೋದನೆ: ಆಯಾ ಕ್ಷೇತ್ರದ ಶಾಸಕರ (MLA) ಸಲಹೆ ಮೇರೆಗೆ, ಗ್ರಾಮ ಪಂಚಾಯಿತಿ ಅಧಿಕಾರಿಗಳು ರಸ್ತೆಯನ್ನು ಆಯ್ಕೆ ಮಾಡಬೇಕು.

ಖಾಸಗಿ ಜಮೀನು ಮತ್ತು ದಾನ ಪತ್ರ

ಇದು ಅತಿ ಮುಖ್ಯವಾದ ಪಾಯಿಂಟ್. ಒಂದು ವೇಳೆ ರಸ್ತೆ ಮಾಡಲು ಪಕ್ಕದ ಜಮೀನಿನವರ ಜಾಗ ಬೇಕಾಗಿದ್ದರೆ ಏನು ಮಾಡುವುದು?

ಪರಿಹಾರ ಇಲ್ಲ: ರಸ್ತೆಗಾಗಿ ಜಮೀನು ನೀಡುವ ರೈತರಿಗೆ ಸರ್ಕಾರದಿಂದ ಯಾವುದೇ ಹಣ (Compensation) ಸಿಗುವುದಿಲ್ಲ.

ದಾನ ಪತ್ರ: ಜಮೀನು ಮಾಲೀಕರು ಸ್ವ-ಇಚ್ಛೆಯಿಂದ ಉಪನೋಂದಣಾಧಿಕಾರಿ ಕಚೇರಿಯಲ್ಲಿ (Sub-Registrar Office) “ನೋಂದಾಯಿತ ದಾನ ಪತ್ರ” (Registered Gift Deed) ಮೂಲಕ ಜಾಗವನ್ನು ಗ್ರಾಮ ಪಂಚಾಯಿತಿ ಹೆಸರಿಗೆ ಬರೆದುಕೊಡಬೇಕು.

ಒತ್ತಾಯವಿಲ್ಲ: ರೈತರು ಜಾಗ ಕೊಡಲು ಒಪ್ಪದಿದ್ದರೆ, ಆ ರಸ್ತೆಯನ್ನು ಕೈಬಿಟ್ಟು ಬೇರೆ ರಸ್ತೆ ಆಯ್ಕೆ ಮಾಡಲಾಗುತ್ತದೆ.

ಇದು ರೈತರಿಗೆ ಸಿಕ್ಕಿರುವ ಸುವರ್ಣಾವಕಾಶ. ನಿಮ್ಮ ಊರಿನಲ್ಲಿ ಕೆಸರು ರಸ್ತೆಗಳಿದ್ದರೆ, ಇಂದೇ ಪಂಚಾಯಿತಿಗೆ ಹೋಗಿ ವಿಚಾರಿಸಿ. 12.5 ಲಕ್ಷ ಅನುದಾನ ಬಿಡದಂತೆ ನೋಡಿಕೊಳ್ಳಿ!

ಅರ್ಜಿ ಸಲ್ಲಿಸುವುದು ಹೇಗೆ? (ಸರಳ ವಿಧಾನ)

ಹಂತ 1: ಮೊದಲು ನಿಮ್ಮ ಮತ್ತು ಅಕ್ಕಪಕ್ಕದ ರೈತರು ಸೇರಿ ಒಂದು ಮನವಿ ಪತ್ರ ಬರೆಯಿರಿ (“ನಮ್ಮ ಹೊಲಕ್ಕೆ ರಸ್ತೆ ಮಾಡಿಕೊಡಿ” ಎಂದು).
ಹಂತ 2: ಈ ಪತ್ರವನ್ನು ನಿಮ್ಮ ಗ್ರಾಮ ಪಂಚಾಯಿತಿಯ ಪಿಡಿಒ (PDO) ಅವರಿಗೆ ಸಲ್ಲಿಸಿ ಸ್ವೀಕೃತಿ ಪಡೆಯಿರಿ.
ಹಂತ 3: ಗ್ರಾಮ ಸಭೆ (Gram Sabha) ನಡೆದಾಗ ತಪ್ಪದೇ ಹಾಜರಾಗಿ, ನಿಮ್ಮ ಅರ್ಜಿಯ ಬಗ್ಗೆ ಮಾತನಾಡಿ, ಅನುಮೋದನೆ ಪಡೆದುಕೊಳ್ಳಿ. (ಗ್ರಾಮ ಸಭೆಯ ಒಪ್ಪಿಗೆ ಕಡ್ಡಾಯ).

ಹಂತ 4: ನಿಮ್ಮ ಕ್ಷೇತ್ರದ ಶಾಸಕರನ್ನು (MLA) ಭೇಟಿಯಾಗಿ, “ನಮ್ಮ ರಸ್ತೆಯನ್ನು ಪಟ್ಟಿಯಲ್ಲಿ ಸೇರಿಸಿ” ಎಂದು ಒತ್ತಡ ಹಾಕಿ. (ಏಕೆಂದರೆ ಪ್ರತಿ ಕ್ಷೇತ್ರಕ್ಕೆ 30 ಕಿ.ಮೀ ಮಾತ್ರ ಮಿತಿ ಇದೆ

ಬೇಕಾಗುವ ದಾಖಲೆಗಳು:

1.ರೈತರ ಅರ್ಜಿ (ಮನವಿ ಪತ್ರ).
2.ಪಹಣಿ (RTC) ಪ್ರತಿಗಳು.
3.ಗ್ರಾಮ ನಕ್ಷೆ (Village Map) – ರಸ್ತೆ ಗುರುತಿಸಲು.
4.ಆಧಾರ್ ಕಾರ್ಡ್.

ಇದು ರೈತರಿಗೆ ಸಿಕ್ಕಿರುವ ಸುವರ್ಣಾವಕಾಶ. ನಿಮ್ಮ ಊರಿನಲ್ಲಿ ಇಂತಹ ಸಮಸ್ಯೆಯಿದ್ದರೆ, ಸುಮ್ಮನೆ ಕೂರಬೇಡಿ. ಇಂದೇ ಪಂಚಾಯಿತಿಗೆ ಹೋಗಿ ಪಿಡಿಒ ಅವರನ್ನು ವಿಚಾರಿಸಿ. 12.5 ಲಕ್ಷ ಅನುದಾನ ನಿಮ್ಮದಾಗಿಸಿಕೊಳ್ಳಿ!

ರೈತರಿಗೆ ಏನೇನು ಲಾಭ?
ಟ್ರ್ಯಾಕ್ಟರ್, ಲಾರಿಗಳು ನೇರವಾಗಿ ಜಮೀನಿಗೆ ಹೋಗಬಹುದು.
ಗೊಬ್ಬರ, ಬೀಜ ಸಾಗಿಸಲು ತಲೆಹೊರೆ ಬೇಕಿಲ್ಲ.
ಆಟೋ ಬಾಡಿಗೆ, ಹಮಾಲಿ ಖರ್ಚು ಉಳಿತಾಯವಾಗುತ್ತದೆ.
ಜಮೀನಿನ ಬೆಲೆ (Land Value) ಹೆಚ್ಚಾಗುತ್ತದೆ.

ಓದುಗರಲ್ಲಿ ವಿನಂತಿ,

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://chat.whatsapp.com/FM1qVgdNtJm5m1M9SL0BHc?mode=ac_t

Recent Posts

ಇಂದಿನಿಂದ ನಾಲ್ಕು ದಿನ 17 ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಲ್ಲೆಲ್ಲಿ ಮಳೆ ಇಲ್ಲಿದೆ ಮಾಹಿತಿ!

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮತ್ತು ತೇವಾಂಶ ಭರಿತ ಮೋಡದ ಕಾರಣ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಾರ್ಚ್ 22…

56 years ago

Heavy Rain: 4 ದಿನ ಭಾರೀ ಮಳೆ, ರಾಜ್ಯದ ಈ ಜಿಲ್ಲೆಗಳಲ್ಲಿ ಅಬ್ಬರಿಸಲಿದ್ದಾನೆ ವರುಣ!

25 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಭಾರೀ ಮಳೆಯಾಗಲಿದೆ. ಮಹಾರಾಷ್ಟ್ರದಿಂದ ತಮಿಳುನಾಡಿನವರೆಗೆ ಮೇಲ್ಮೈ ಸುಳಿಗಾಳಿ ಪರಿಣಾಮದಿಂದ ಮಲೆನಾಡು, ಕರಾವಳಿ, ಒಳನಾಡು, ಉತ್ತರ…

56 years ago

ನಾಡಕಚೇರಿ ಅಲೆದಾಟಕ್ಕೆ ಬಿತ್ತು ಬ್ರೇಕ್! ಈಗ Mobile ನಲ್ಲೇ ಪಡೆಯಿರಿ ಜಾತಿ-ಆದಾಯ ಪ್ರಮಾಣಪತ್ರ

ನಾಡಕಚೇರಿ ಅಲೆದಾಟಕ್ಕೆ ಬಿತ್ತು ಬ್ರೇಕ್! ಈಗ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಮೊಬೈಲ್‌ನಲ್ಲೇ ಸುಲಭವಾಗಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು. ಸಮಯ,…

56 years ago

ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಹಳೆಯ ಪಹಣಿಯನ್ನು ಸುಲಭವಾಗಿ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!

ಆತ್ಮೀಯ ರೈತ ಬಾಂಧವರೇ, ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಹಿಂದಿನ ಅಂಕಣಗಳಲ್ಲಿ ನಾವು ಮೋಬೈಲ್ ನಲ್ಲಿಯೇ…

56 years ago

ಮಾರ್ಚ್ 15 ರಿಂದ ಯಾವ ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಇಲ್ಲಿದೆ ಮಾಹಿತಿ

ಮಾರ್ಚ್ 15ರಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಯಾವ ಯಾವ…

56 years ago

ನಿಮ್ಮ ಮೊಬೈಲ್ ನಲ್ಲಿ ಜಮೀನಿನ ಖಾತಾ ಬದಲಾವಣೆಗೆ ಅರ್ಜಿ ಹೀಗೆ ಸಲ್ಲಿಸಿ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಮೊಬೈಲ್‌ನಲ್ಲೇ ಜಮೀನಿನ ಖಾತಾ ಬದಲಾವಣೆಗೆ ಈಗ ಅರ್ಜಿ ಸಲ್ಲಿಸಬಹುದು. ಅಗತ್ಯ ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ, ಶುಲ್ಕ ಮತ್ತು ಪ್ರಕ್ರಿಯೆಯ…

56 years ago