Categories: Science & Technology

ಕೃತಕ ಮೋಡ ಬಿತ್ತನೆ ಎಂದರೇನು? ಇದರಿಂದಾಗುವ ಪ್ರಯೋಜನಗಳು ಏನು ಗೊತ್ತಾ?

ಸ್ನೇಹಿತರೆ ಇದೊಂದು ಅತ್ಯಾಧುನಿಕ ತಂತ್ರಜ್ಞಾನ ವಾಗಿದ್ದು, ಈ ತಂತ್ರಜ್ಞಾನದ ಮೂಲಕ ಕೃತಕವಾಗಿ ಮಳೆಯನ್ನ ತರಬಹುದು. ಅಂದರೆ ನಾವು ಪ್ರತಿ ವರ್ಷ ಮಳೆಗಾಲದಲ್ಲಿ ಮಳೆಯನ್ನು ಕಾಣುವುದು ಸಹಜ. ಆದರೆ ಈ ಕೃತಕ ಮೋಡ ಬಿತ್ತನೆಯ ತಂತ್ರಜ್ಞಾನದಿಂದ ನಾವು ಮಳೆಗಾಲದ ಹೊರತಾಗಿ ಬೇರೆ ಸೀಸನ್ ನಲ್ಲಿಯೂ ಮಳೆಯನ್ನು ಪಡೆಯಬಹುದಾಗಿದೆ.

Spread the love

ಸ್ನೇಹಿತರೆ ಇತ್ತೀಚಿಗೆ ವರದಿಯೊಂದರ ಪ್ರಕಾರ ಜಗತ್ತಿನ ಟಾಪ್ 50 ಮಾಲಿನ್ಯ ನಗರಗಳಲ್ಲಿ 39 ನಗರಗಳು ಭಾರತದ ನಗರಗಳಾಗಿವೆ. ಅದರಲ್ಲೂ ದೇಶದ ರಾಜಧಾನಿಯಾದ ದೆಹಲಿಯಲ್ಲಿ ಇದರ ಪ್ರಮಾಣವಂತು ಮಿತಿಮೀರಿದೆ. ಹೀಗಾಗಿ ಈ ಮಾಲಿನ್ಯವನ್ನು ತಡೆಗಟ್ಟಲು ದೆಹಲಿ ಸರ್ಕಾರವು ಇದೀಗ IIT ಕಾನ್ಪುರ ಸಹಾಯದಿಂದ ಕೃತಕ ಮೋಡ ಬಿತ್ತನೆ ಮಾಡಲು ಮುಂದಾಗಿದೆ. ಹಾಗಾದರೆ ಏನಿದು ಮೋಡ ಬಿತ್ತನೆ? ಇದರಿಂದಾಗುವ ಲಾಭಗಳೇನು? ಇದನ್ನು ಹೇಗೆ ಬಿತ್ತಲಾಗುತ್ತದೆ ಎಂಬಂತಹ ಪ್ರಶ್ನೆಗಳಿಗೆ ಈ ಆರ್ಟಿಕಲ್ ನಲ್ಲಿ ಉತ್ತರ ತಿಳಿದುಕೊಳ್ಳೋಣ ಬನ್ನಿ.

Thank you for reading this post, don't forget to subscribe!

ಕೃತಕ ಮೋಡ ಬಿತ್ತನೆ ಎಂದರೇನು?

ಸ್ನೇಹಿತರೆ ಇದೊಂದು ಅತ್ಯಾಧುನಿಕ ತಂತ್ರಜ್ಞಾನ ವಾಗಿದ್ದು, ಈ ತಂತ್ರಜ್ಞಾನದ ಮೂಲಕ ಕೃತಕವಾಗಿ ಮಳೆಯನ್ನ ತರಬಹುದು. ಅಂದರೆ ನಾವು ಪ್ರತಿ ವರ್ಷ ಮಳೆಗಾಲದಲ್ಲಿ ಮಳೆಯನ್ನು ಕಾಣುವುದು ಸಹಜ. ಆದರೆ ಈ ಕೃತಕ ಮೋಡ ಬಿತ್ತನೆಯ ತಂತ್ರಜ್ಞಾನದಿಂದ ನಾವು ಮಳೆಗಾಲದ ಹೊರತಾಗಿ ಬೇರೆ ಸೀಸನ್ ನಲ್ಲಿಯೂ ಮಳೆಯನ್ನು ಪಡೆಯಬಹುದಾಗಿದೆ.
ಹೇಗೆ ಕೃತಕ ಮೋಡ ಬಿತ್ತನೆ ಮಾಡಲಾಗುತ್ತದೆ?
ಈ ತಂತ್ರಜ್ಞಾನದಲ್ಲಿ ವಿಮಾನದ ಮೂಲಕ ವಾತಾವರಣದಲ್ಲಿ ಕಂಡುಬರುವ ಅಧಿಕ ಮೋಡಗಳು ಇರುವಂತಹ ಜಾಗವನ್ನು ಆಯ್ಕೆ ಮಾಡಲಾಗುತ್ತದೆ. ಅಲ್ಲದೆ ಈ ಮೋಡಗಳು ಮಳೆಯನ್ನು ತರುತ್ತವೆಯೋ ಇಲ್ಲವೋ ಎಂಬುದನ್ನು ಮುಂಚಿತವಾಗಿ ಅಧ್ಯಯನ ಮಾಡಲಾಗುತ್ತದೆ. ಹಾಗೆ ಇವು ಮಳೆಯನ್ನು ತರಬಲ್ಲ ಸಾಮರ್ಥ್ಯವನ್ನು ಹೊಂದಿದ್ದರೆ ಮಾತ್ರ ಇಂತಹ ಮೋಡಗಳು ಇರುವಂತಹ ಜಾಗದಲ್ಲಿ ಮೋಡಬಿತ್ತನಿಗೆ ಚಾಲನೆ ನೀಡಲಾಗುತ್ತದೆ. ಹೀಗೆ ಆಯ್ಕೆ ಮಾಡಲಾದ ಮೋಡಗಳಲ್ಲಿ ವಿಮಾನದ ಸಹಾಯದಿಂದ ಕ್ಯಾಲ್ಸಿಯಂ ಕ್ಲೋರೈಡ್ ಎಂಬ ರಾಸಾಯನಿಕವನ್ನು ಬಿಡಲಾಗುತ್ತದೆ. ಈ ರಾಸಾಯನಿಕ ಲವಣವು ಮೋಡಗಳನ್ನು ತಂಪಾಗಿಸಿ ಘನಿಕರಣವಾಗಲು (condensation) ಸಹಾಯ ಮಾಡುತ್ತದೆ. ಹೀಗೆ ಘಣಿಕರಣಗೊಂಡ ಮೋಡವು ಮಳೆಯಾಗಿ ಸುರಿಯುತ್ತದೆ. ಇದನ್ನು 2018ರಲ್ಲಿ ಮಹಾರಾಷ್ಟ್ರದ ಸೋಲಾಪುರದಲ್ಲಿ ಯಶಸ್ವಿಯಾಗಿ ಮಾಡಲಾಗಿದ್ದು, ಸಾಮಾನ್ಯ ಪ್ರಮಾಣಕ್ಕಿಂತ 18% ನಷ್ಟು ಮಳೆ ಹೆಚ್ಚಾಗಿ ಕಂಡುಬಂದಿದೆ.

ಕೃತಕ ಮೋಡ ಬಿತ್ತನೆಯಿಂದ ಆಗುವ ಪ್ರಯೋಜನಗಳೇನು?

ಈ ತಂತ್ರಜ್ಞಾನದ ಸಹಾಯದಿಂದ ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿ ಕೃತಕ ಮಳೆಯನ್ನು ಸುರಿಸಿ ಅಲ್ಲಿನ ನೀರಿನ ಕೊರತೆಯನ್ನು ಹೋಗಲಾಡಿಸಬಹುದು. ಅಲ್ಲದೆ ಈ ಕೃತಕ ಮಳೆಯ ಸಹಾಯದಿಂದ ದೆಹಲಿ ಅಂತಹ ಮಾಲಿನ್ಯ ಭರಿತವಾದ ನಗರಗಳಲ್ಲಿ ವಾಯುಮಾಲಿನ್ಯವನ್ನು ಕಡಿಮೆಗೊಳಿಸಬಹುದಾಗಿದೆ. ಮುಂಗಾರು ಮಳೆಯು ತಡವಾಗಿ ಆಗಮನವಾದಾಗ ರೈತರಿಗೆ ಬೀಜ ಬಿತ್ತನೆಗೆ ಉಂಟಾಗುವ ತೊಂದರೆಗಳನ್ನು ಈ ತಂತ್ರಜ್ಞಾನದ ಮೂಲಕ ಹೋಗಲಾಡಿಸಬಹುದು.

Recent Posts

ಮೊಬೈಲ್ ನಲ್ಲೇ ನಿಮ್ಮ ಜಮೀನಿನ ಆಕಾರಬಂದ್ ಚೆಕ್ ಮಾಡುವುದು ಹೇಗೆ? ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನೀವು ನಿಮ್ಮ ಜಮೀನಿನ ಆಕಾರಬಂದ್…

56 years ago

ಗೃಹಲಕ್ಷ್ಮೀ: ಅರ್ಹ ಮತ್ತು ಅನರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ! ಇದರಲ್ಲಿ ನಿಮ್ಮ ಮನೆಯವರ ಹೆಸರು ಇದೆಯಾ ಚೆಕ್ ಮಾಡಿ

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ದಸರಾ ಹಬ್ಬದ ನಿಮಿತ್ತವಾಗಿ ಇತ್ತೀಚೆಗಷ್ಟೇ…

56 years ago

ಪಿಎಂ ಕಿಸಾನ್: ಇಲ್ಲಿಯವರೆಗೆ ನಿಮಗೆ ಎಷ್ಟು ಹಣ ಜಮಾ ಆಗಿದೆ ಹೀಗೆ ಚೆಕ್ ಮಾಡಿ

ಹಾಗಾದರೆ ಇಲ್ಲಿಯವರೆಗೆ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ (Pm kisan samman yojana) ಅಡಿಯಲ್ಲಿ  ನಿಮ್ಮ ಖಾತೆಗೆ ಎಷ್ಟು…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

ರಸಗೊಬ್ಬರ ವಿತರಣೆಗೆ ರೈತರಿಗೆ FID ಕಡ್ಡಾಯ – ಹೊಸ ನಿಯಮಗಳು ಮತ್ತು ಪರಿಣಾಮ

ರಸಗೊಬ್ಬರ ವಿತರಣೆಗೆ ರೈತರಿಗೆ FID ಕಡ್ಡಾಯವಾಗಿದೆ. ಈ ಹೊಸ ನಿಯಮದ ಉದ್ದೇಶ, ಹೇಗೆ ಕೆಲಸ ಮಾಡುತ್ತದೆ, ರೈತರಿಗೆ ಲಾಭ-ನಷ್ಟಗಳು ಏನು…

56 years ago

ಯಾವ ಸರ್ವೇ ನಂಬರ್ ಮೇಲೆ ಎಷ್ಟು ಸಾಲವಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ನೀವು ಕೃಷಿ ಚಟುವಟಿಕೆಗಾಗಿ ಬ್ಯಾಂಕಿನಿಂದ…

56 years ago