Categories: information

ಬೆಳೆ ವಿಮೆ, ಪರಿಹಾರದ ಹಣ ಬೇಕಾ? ಜ.15 ರೊಳಗೆ ಮೊಬೈಲ್‌ನಲ್ಲಿ ಈ ಕೆಲಸ ಮುಗಿಸಿ! ಇಲ್ಲಿದೆ ಸಂಪೂರ್ಣ ಮಾಹಿತಿ.

ಬೆಳೆ ವಿಮೆ ಅಥವಾ ಪರಿಹಾರದ ಹಣ ಪಡೆಯಲು ಜನವರಿ 15ರೊಳಗೆ ರೈತರು ಮೊಬೈಲ್‌ನಲ್ಲಿ ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಅರ್ಜಿ ಸಲ್ಲಿಸುವ ವಿಧಾನ, ಅಗತ್ಯ ದಾಖಲೆಗಳು ಮತ್ತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

Spread the love

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಸರ್ಕಾರದಿಂದ ಬೆಳೆ ವಿಮೆ ಬರಬೇಕಿದ್ದರೂ, ಬೆಳೆ ಹಾನಿ ಪರಿಹಾರ ಸಿಗಬೇಕಿದ್ದರೂ ಅಥವಾ ನಾಳೆ ನಿಮ್ಮ ಬೆಳೆಯನ್ನು ಬೆಂಬಲ ಬೆಲೆಗೆ (MSP) ಮಾರಬೇಕಿದ್ದರೂ ಅಷ್ಟೇ.. ನಿಮ್ಮ ಪಹಣಿಯಲ್ಲಿ (RTC) ನೀವು ಬೆಳೆದ ಬೆಳೆಯ ಹೆಸರು ಇರಲೇಬೇಕು. ಇಲ್ಲದಿದ್ದರೆ ಒಂದು ರೂಪಾಯಿ ಕೂಡ ಸಿಗಲ್ಲ! ಅದಕ್ಕಾಗಿಯೇ ಕೃಷಿ ಇಲಾಖೆ ಈಗ “ನನ್ನ ಬೆಳೆ ನನ್ನ ಹಕ್ಕು” ಅಭಿಯಾನದಡಿ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ಗಡುವು ನೀಡಿದೆ. ಕೈಯಲ್ಲಿರುವ ಮೊಬೈಲ್ ಬಳಸಿ ಇದನ್ನು ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ.

Thank you for reading this post, don't forget to subscribe!

ಜನೆವರಿ 15ರ ಒಳಗೆ ಮುಗಿಸಿಬಿಡಿ!

2025-26ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಈಗಾಗಲೇ ಶುರುವಾಗಿದೆ. ರೈತರು ಸ್ವತಃ ತಮ್ಮ ಜಮೀನಿಗೆ ಹೋಗಿ ಫೋಟೋ ತೆಗೆದು ಅಪ್‌ಲೋಡ್ ಮಾಡಲು ಜನವರಿ 15, 2026 ಕೊನೆಯ ದಿನಾಂಕವಾಗಿದೆ. ಕೃಷಿ ಇಲಾಖೆಯ ಸೂಚನೆಯಂತೆ ಈ ದಿನಾಂಕದ ನಂತರ ಆಪ್ ಓಪನ್ ಆಗುವುದಿಲ್ಲ. ಆದ್ದರಿಂದ ಇಂದೇ ಪ್ಲೇ ಸ್ಟೋರ್‌ಗೆ ಹೋಗಿ “ಹಿಂಗಾರು ರೈತರ ಬೆಳೆ ಸಮೀಕ್ಷೆ 2025-26” (Hingaru Raithara Bele Sameekshe 2025-26) ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಏನಿದು ಖಾಸಗಿ ನಿವಾಸಿಗಳ ರೋಲ್?

ಒಂದು ವೇಳೆ ನಿಮಗೆ ಮೊಬೈಲ್ ಬಳಸಲು ಬರದಿದ್ದರೆ ಅಥವಾ ಸ್ಮಾರ್ಟ್‌ಫೋನ್ ಇಲ್ಲದಿದ್ದರೆ ಚಿಂತಿಸಬೇಡಿ. ಪ್ರತಿ ಹಳ್ಳಿಯಲ್ಲೂ ಸರ್ಕಾರ “ಖಾಸಗಿ ನಿವಾಸಿಗಳನ್ನು” (Private Residents) ನೇಮಿಸಿದೆ. ಅವರು ನಿಮ್ಮ ಜಮೀನಿಗೆ ಬಂದು ಫೋಟೋ ತೆಗೆದು ಅಪ್‌ಲೋಡ್ ಮಾಡುತ್ತಾರೆ.

  • 1.ಖಾಸಗಿ ನಿವಾಸಿಗಳು ಸಮೀಕ್ಷೆ ಮುಗಿಸಲು ಕೊನೆ ದಿನಾಂಕ: ಜನೆವರಿ 30, 2026.
    2.ಒಂದು ವೇಳೆ ಅವರು ತಪ್ಪು ಬೆಳೆ ನಮೂದಿಸಿದರೆ, ಆಕ್ಷೇಪಣೆ ಸಲ್ಲಿಸಲು ಕೊನೆ ದಿನಾಂಕ: ಫೆಬ್ರವರಿ 15, 2026.

ಯಾಕೆ ಮಾಡಬೇಕು ಬೆಳೆ ಸಮೀಕ್ಷೆ

ಧಾರವಾಡದ ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅಣಗೌಡರ ಅವರು ಹೇಳುವಂತೆ, ಈ ಕೆಳಗಿನ ಕೆಲಸಗಳಿಗೆ ಬೆಳೆ ಸಮೀಕ್ಷೆ ಕಡ್ಡಾಯ:

  • 1.ಬೆಂಬಲ ಬೆಲೆ (MSP) ಯೋಜನೆಯಲ್ಲಿ ಬೆಳೆ ಮಾರಾಟ ಮಾಡಲು.
    2=ಬೆಳೆ ವಿಮೆ (Crop Insurance) ಕ್ಲೇಮ್ ಮಾಡಲು.
    3.ಬೆಳೆ ಹಾನಿ/ಪರಿಹಾರ (Compensation) ಹಣ ಪಡೆಯಲು.
    4.ನಿಮ್ಮ ಪಹಣಿಯಲ್ಲಿ (Pahani/RTC) ಅಧಿಕೃತವಾಗಿ ಬೆಳೆ ದಾಖಲಿಸಲು.

ಸೂಚನೆ: ಜ.15 ರ ನಂತರ ಆಪ್ ಓಪನ್ ಆಗುವುದಿಲ್ಲ, ಬೇಗ ಮಾಡಿ.

ಎಚ್ಚರಿಕೆ: ಅನೇಕ ರೈತರು “ಆಮೇಲೆ ನೋಡೋಣ” ಎಂದು ಸುಮ್ಮನಾಗುತ್ತಾರೆ. ಆದರೆ ನೆನಪಿರಲಿ, ಕೊನೆ ದಿನಾಂಕ ಮೀರಿದರೆ ಸರ್ವರ್ ಬಿಜಿ ಆಗಬಹುದು ಅಥವಾ ಲಾಗಿನ್ ಆಗದೇ ಇರಬಹುದು. ಜ.15 ರೊಳಗೆ ನಿಮ್ಮ ಜಮೀನಿಗೆ ಹೋಗಿ ಫೋಟೋ ಕ್ಲಿಕ್ಕಿಸಿ.

ಸಹಾಯ ಬೇಕೇ?

ತಾಂತ್ರಿಕ ಸಮಸ್ಯೆಗಳಿದ್ದರೆ ಅಥವಾ ಆಪ್ ಓಪನ್ ಆಗದಿದ್ದರೆ ಸಹಾಯವಾಣಿ ಸಂಖ್ಯೆ: 1800-425-3553 ಗೆ ಕರೆ ಮಾಡಿ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ.

ನಮ್ಮ ಸಲಹೆ

ನೀವು ಸಮೀಕ್ಷೆ ಮಾಡಲು ಜಮೀನಿಗೆ ಹೋದಾಗ, ಬದುವಿನ ಮೇಲೆ ಅಥವಾ ಮರದ ಕೆಳಗೆ ನಿಂತು ಫೋಟೋ ತೆಗೆಯಬೇಡಿ. ಜಮೀನಿನ ಮಧ್ಯಭಾಗದಲ್ಲಿ ನಿಲ್ಲಿ. ಮತ್ತು ಆಪ್‌ನಲ್ಲಿ GPS ನಿಖರತೆ (GPS Accuracy) ಹಸಿರು ಬಣ್ಣಕ್ಕೆ ತಿರುಗುವವರೆಗೂ ಕಾಯಿರಿ. ಆಗ ಮಾತ್ರ ನಿಮ್ಮ ಸರ್ವೆ ನಂಬರ್ ಸರಿಯಾಗಿ ಮ್ಯಾಚ್ ಆಗುತ್ತದೆ ಮತ್ತು ನಿಮ್ಮ ಅರ್ಜಿ ರಿಜೆಕ್ಟ್ ಆಗುವುದಿಲ್ಲ.

ಓದುಗರಲ್ಲಿ ವಿನಂತಿ,

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://chat.whatsapp.com/FM1qVgdNtJm5m1M9SL0BHc?mode=ac_t

Recent Posts

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

56 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…

56 years ago

Trump Warns Oman Over Hormuz Strait Mediation With Iran

Amid escalating tensions in the Strait of Hormuz, the United States has launched fresh strikes…

56 years ago

ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಿಎಂ ರಾಜೀನಾಮೆ ನೀಡಬಹುದೇ..?

ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…

56 years ago

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…

56 years ago