WhatsApp Group                             Join Now            
   
                    Telegram Group                             Join Now            
Spread the love

ಸ್ನೇಹಿತರೆ ನಿಮಗೆ ತಿಳಿದಿರುವಂತೆ ಇತ್ತೀಚೆಗೆ ತಮಿಳುನಾಡಿನ ರಾಜ್ಯಪಾಲ ಹಾಗೂ ಮುಖ್ಯಮಂತ್ರಿಗಳ ನಡುವೆ ರಾಜಕೀಯವಾಗಿ ತೀವ್ರ ಜಟಾಪಟಿ ಏರ್ಪಟ್ಟಿದೆ. ಈ ಜಟಪತಿಯನ್ನು ಸಮಾಧಾನಗೊಳಿಸಲು ಸುಪ್ರೀಂ ಕೋರ್ಟ್ ನಡುವೆ ಬರಬೇಕಾಯಿತು. ಹಾಗಾದರೆ ಏನಿದು ಜಟಾಪಟಿ ಸಂವಿಧಾನದಲ್ಲಿರುವ ರಾಜ್ಯಪಾಲರಿಗೆ ಮೀಸಲಾಗಿರುವ ವಿಶೇಷ ವಿಧಿಗಳು ಯಾವವು ಮತ್ತು ಅವರ ಕರ್ತವ್ಯಗಳು ಏನು ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಅಷ್ಟಕ್ಕೂ ನಿಜವಾಗಿ ನಡೆದದ್ದು ಏನು?
ತಮಿಳುನಾಡಿನ ರಾಜ್ಯ ಸರ್ಕಾರವು ಹತ್ತಕ್ಕೂ ಹೆಚ್ಚು ಬಿಲ್ ಗಳನ್ನು ಬಹುಮತದೊಂದಿಗೆ ಪಾಸ್ ಮಾಡಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಿತ್ತು. ಹೀಗೆ ರಾಜ್ಯ ಸರ್ಕಾರದಿಂದ ಅನುಮೋದನೆಗೆ ಬಂದ 10ಕ್ಕೂ ಹೆಚ್ಚು ಬಿಲ್ ಗಳನ್ನ ರಾಜ್ಯಪಾಲರು ಹಲವು ದಿನಗಳ ತನಕ ಅದಕ್ಕೆ ಅನುಮೋದನೆ ನೀಡಿರಲಿಲ್ಲ. ಹೀಗಾಗಿ ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಪ್ರಸ್ತುತ ಸುಪ್ರೀಂ ಕೋರ್ಟ್ ರಾಜ್ಯಪಾಲರಿಗೆ ಶೀಘ್ರವೇ ಬಾಕಿ ಉಳಿದಿರುವ ಹತ್ತಕ್ಕೂ ಹೆಚ್ಚು ಬಿಲ್ ಗಳಿಗೆ ಅನುಮೋದನೆ ನೀಡಲು ನಿರ್ದೇಶಿಸಿದೆ.

ಸಂವಿಧಾನದಲ್ಲಿ ರಾಜ್ಯಪಾಲರಿಗೆ ಇರುವ ಪವರ್ ಗಳೇನು?
ಸಂವಿಧಾನದ 24ನೆಯ ವಿಧಿಯ ಪ್ರಕಾರ ವಿಧಾನಸಭೆಯಿಂದ ರಾಜ್ಯಪಾಲರ ಅನುಮೋದನೆಗೆ ಬರುವ ಬಿಲ್ ಗಳ ಮೇಲೆ ರಾಜ್ಯಪಾಲರು 4 ರೀತಿಯ ಪವರ್ ಹೊಂದಿರುತ್ತಾರೆ.
1.ರಾಜ್ಯಪಾಲರು ಬಿಲ್ ಗಳಿಗೆ ಅನುಮೋದನೆ ಕೊಡಬಹುದು.
2.ರಾಜ್ಯಪಾಲರು ಬಿಲ್ ಗಳನ್ನು ತಿರಸ್ಕರಿಸಬಹುದು.
3.ರಾಜ್ಯಪಾಲರು ಬಿಲ್ ಗಳನ್ನು ತಡೆ ಹಿಡಿಯಬಹುದು. (ಎಷ್ಟು ದಿನಗಳ ಮಟ್ಟಿಗೆ ಎಂಬುದನ್ನ ಸಂವಿಧಾನದಲ್ಲಿ ತಿಳಿಸಿಲ್ಲ)
4. ರಾಷ್ಟ್ರಪತಿಗಳಿಗೆ ಶಿಪಾರಸ್ಸು ಮಾಡಬಹುದು.

ಯಾವುದೇ ವ್ಯಕ್ತಿ ರಾಜ್ಯಪಾಲರಾಗಲು ಯಾವ ಯಾವ ಅರ್ಹತೆಗಳನ್ನು ಹೊಂದಿರಬೇಕು?
ಭಾರತದ ಸಂವಿಧಾನದ ಪ್ರಕಾರ ಯಾವುದೇ ವ್ಯಕ್ತಿ ರಾಜ್ಯಪಾಲನಾಗಬೇಕಾದರೆ ಈ 2 ಅರ್ಹತೆಗಳನ್ನು ಪೂರೈಸಬೇಕು –
1.ಅವನು ಭಾರತದ ನಾಗರಿಕನಾಗಿರಬೇಕು.
2.ಅವನು 35 ವಯಸ್ಸು ಮೀರಿದ ವ್ಯಕ್ತಿಯಾಗಿರಬೇಕು.

ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.

By

Leave a Reply

Your email address will not be published. Required fields are marked *