WhatsApp Group                             Join Now            
   
                    Telegram Group                             Join Now            
Spread the love

ಕೆಲವು ವರ್ಷಗಳ ಹಿಂದೆ ಅರ್ಜೆಂಟಿನ ಸರ್ಕಾರಕ್ಕೆ ಒಂದು ಹೊಸ ಕಾನೂನನ್ನ ರಚಿಸಬೇಕಾಗಿ ಬಂತು. ಅದೇನೆಂದರೆ ಯಾವುದೇ ಪಾಲಕರು ತಮ್ಮ ಮಕ್ಕಳಿಗೆ ಮೆಸ್ಸಿ ಎಂದು ಹೆಸರಿಡುವಂತಿಲ್ಲ. ಇದಕ್ಕೆ ಕಾರಣ ಈ ವ್ಯಕ್ತಿ. ಲಿಯೋನೆಲ್ ಮೆಸ್ಸಿ.
ಅರ್ಜೆಂಟಿನಾದಲ್ಲಿ ಮೆಸ್ಸಿ ಹೆಸರಿನ ಎಷ್ಟು ವ್ಯಕ್ತಿಗಳಿದ್ದಾರೆ ಎಂದರೆ ಅವರನ್ನು ಗುರುತಿಸಲು ಸರ್ಕಾರವೇ ಹೆಣಗಾಡಬೇಕಾಯಿತು. ಹಾಗಾಗಿ ಭವಿಷ್ಯದಲ್ಲಿ ಇದು ಇನ್ನೂ ಗೊಂದಲಾಗುತ್ತದೆ ಎನ್ನಿಸಿ ಅಲ್ಲಿಯ ಸರ್ಕಾರ ಅಂತದೊಂದು ಕಾನೂನನ್ನ ಜಾರಿಗೆ ತಂದಿತು.
ಲಿಯೋನಲ್ ಮೆಸ್ಸಿ ಜಗತ್ತಿನ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರು. ಫುಟ್ಬಾಲ್ ನಲ್ಲಿ ನೀಡಲಾಗುವ ಶ್ರೇಷ್ಠ ಪ್ರಶಸ್ತಿಯಾದ ಬ್ಯಾಲೆನ್ ಡಿವೋರ್ ಪ್ರಶಸ್ತಿಯನ್ನು ಆರು ಬಾರಿ ಗೆದ್ದ ಚಾಂಪಿಯನ್ ಆಟಗಾರ ಇವರು. ಎಲ್ಲರಿಗೂ ಇಂದಿನ ಚಾಂಪಿಯನ್ ಮೆಸ್ಸಿ ಬಗ್ಗೆ ಗೊತ್ತು ಆದರೆ ಲಿಯೋನೆಲ್ ಮೆಸ್ಸಿ, ಗೋಟ್ (GOAT) ಮೆಸ್ಸಿ ಆಗಲು ಪಟ್ಟ ಕಷ್ಟದ ಬಗ್ಗೆ ತುಂಬಾ ಕಡಿಮೆ ಜನರಿಗೆ ತಿಳಿದಿರುತ್ತೆ.ಅವರ ಈ ಯಶಸ್ಸಿನ ಪಯಣ ತುಂಬಾ ಪ್ರೇರಣದಾಯಕ ಆಗಿದೆ.

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಮೆಸ್ಸಿಯು 10 ವರ್ಷದ ಬಾಲಕನಾಗಿದ್ದಾಗ Growth Harmone Defficiency ಎಂಬ ಭಯಾನಕ ಕಾಯಿಲೆಗೆ ತುತ್ತಾಗಿದ್ದನು. ಈ ರೋಗದ ಪ್ರಮುಖ ಗುಣಲಕ್ಷಣ ಏನೆಂದರೆ ದೇಹದ ಬೆಳವಣಿಗೆ ಕುಂಠಿತಗೊಳ್ಳುವುದು. ಆದರೆ ಫುಟ್ಬಾಲ್ ಆಟಕ್ಕೆ ಬೇಕಾದದ್ದು ಕಟ್ಟು ಮಸ್ತಾದ ದೇಹ. 10 ವರ್ಷದ ಬಾಲಕನಲ್ಲಿ ಇಂತದ್ದೊಂದು ರೋಗ ಕಂಡು ಬಂದರೆ ಹೆಚ್ಚಿನ ಜನ ಸೋಲಪ್ಪಿಕೊಳ್ಳುತ್ತಾರೆ, ಡಿಪ್ರೆಶನ್ ಗೆ ಒಳಗಾಗುತ್ತಾರೆ. ಸೋಲೊಪ್ಪಿಕೊಂಡರೆ ಆತ ಲೆಜೆಂಡ್ ಆಗಲು ಹೇಗೆ ಸಾಧ್ಯ?
ಈ ರೋಗದ ಚಿಕಿತ್ಸೆಗೆ ಎಂದು ಮೆಸ್ಸಿಗೆ ಪ್ರತಿದಿನ ಕಾಲಿಗೆ ಇಂಜೆಕ್ಷನ್ ತೆಗೆದುಕೊಳ್ಳಬೇಕಾಗಿತ್ತು. ಅದು ಕೇವಲ ಆತನ 10ನೇ ವಯಸ್ಸಿನಲ್ಲಿ. ಅಲ್ಲದೆ ಈ ರೋಗದ ಚಿಕಿತ್ಸೆಯು ತುಂಬಾ ದುಬಾರಿಯಾಗಿದ್ದ ಕಾರಣ ಅವರ ತಂದೆ ತಾಯಿ ಕೂಡಿಟ್ಟ ಒಟ್ಟು ಹಣ ಮೆಸ್ಸಿಯ ಚಿಕಿತ್ಸೆಗೆ ಸಾಲದಾಯಿತು. ಇಂತಹ ಸಂದರ್ಭದಲ್ಲಿ ಸಾಲ ಕೇಳಲು ಹೋದರೆ ಎಲ್ಲಿಯೂ ಒಂದು ರೂಪಾಯಿ ಸಾಲ ಹುಟ್ಟಲಿಲ್ಲ. ಏಕೆಂದರೆ ಅವರ ತಂದೆ ಓರ್ವ ಸಾಮಾನ್ಯ ಕೆಲಸಗಾರರು ಆಗಿದ್ದರು ಮತ್ತು ಅವರ ತಾಯಿ ಇನ್ನೊಬ್ಬರ ಮನೆಯಲ್ಲಿ ಕೂಲಿ ಕೆಲಸಗಾರರಾಗಿದ್ದರು.

ಸ್ನೇಹಿತರೆ ಸಾಧಕರಲ್ಲಿ ಒಂದು ಸಂಗತಿ ಏನು ಸಾಮಾನ್ಯವಾಗಿ ಕಾಣುತ್ತದೆ ಎಂದರೆ ಅವರಿಗೆ ಎಷ್ಟೇ ಕಷ್ಟಗಳು ಬರಲಿ, ಎಷ್ಟೇ ಸಂಕಟಗಳು ಎದುರಾಗಲಿ, ಎಷ್ಟೇ ಸೋಲೊಪ್ಪಿಕೊಳ್ಳುವ ಸಂದರ್ಭಗಳು ಬರಲಿ ಅವೆಲ್ಲವೂಗಳನ್ನ ಮೆಟ್ಟಿ ತಾವು ಅಂದುಕೊಂಡದ್ದನ್ನ ಸಾಧಿಸಿಯೇ ತೀರುತ್ತಾರೆ. ಅಂತಹ ಕಷ್ಟಕಾಲದಲ್ಲಿಯೂ ಮೆಸ್ಸಿ ಎಂದಿಗೂ ಸೋಲೊಪ್ಪಿಕೊಳ್ಳಲಿಲ್ಲ ಬದಲಿಗೆ ಆತ ತನ್ನ ಪ್ರಯತ್ನವನ್ನ ಎರಡು ಪಟ್ಟು ಹೆಚ್ಚಿಸಿದನು . ಯಾಕೆಂದ್ರೆ ಬೆಳೆಯುತ್ತಾ ಬೆಳೆಯುತ್ತಾ ಆತ ದೊಡ್ಡವನಾಗುತ್ತಿದ್ದಂತೆ ಫುಟ್ಬಾಲ್ ಕೇವಲ ಆತನ ಪಾಲಿಗೆ ಆಟವಷ್ಟೇ ಆಗಿ ಉಳಿಯಲಿಲ್ಲ , ಬದಲಿಗೆ ಅದೇ ಅವನ ಜೀವನವಾಗಿತ್ತು .ಅಂತಹ ರೋಗಗ್ರಸ್ತ ಸಂದರ್ಭದಲ್ಲಿ ಆತ ಫುಟ್ಬಾಲ್ ಪಂದ್ಯವನ್ನ ಆಡಲು ತೆರಳಿದನು ಮತ್ತು ಇದರ ಬಹುಮಾನ ಅವನಿಗೆ ಶೀಘ್ರದಲ್ಲೇ ದೊರಕಿತು. ಆಪಂದವನ್ನ ನೋಡಲು ಬಾರ್ಸಿಲೋನ ಯುತ್ ಕ್ಲಬ್ ನ ನಿರ್ದೇಶಕರು ಅಲ್ಲಿಗೆ ಬಂದಿದ್ದರು .ಮೆಸ್ಸಿಯ ಆಟವನ್ನು ನೋಡಿ ಅದರಿಂದ ಬಹಳ ಇಂಪ್ರೆಸ್ ಆಗಿ ಅವರ ತಂದೆ ತಾಯಿಯವರೊಂದಿಗೆ ಮಾತನಾಡಲು ಅವರ ಮನೆಗೆ ತೆರಳಿದರು.
ಅಲ್ಲಿಗೆ ಹೋದಾಗ ಅವರಿಗೆ ತಿಳಿದಿದ್ದು ಏನೆಂದರೆ ಮೆಸ್ಸಿಗೆ Growth Harmone Defficiency ಎಂಬ ಕಾಯಿಲೆ ಇದೆ ಎಂಬುದು. ಇದು ತಿಳಿಯುತ್ತಿದ್ದಂತೆ ಅವರು ಮೆಸ್ಸಿಯ ತಂದೆ ತಾಯಿ ಅವರಿಗೆ ಒಂದು offer ನೀಡಿದರು. ಅದೇನೆಂದರೆ ಬಾರ್ಸಿಲೋನ ಫುಟ್ಬಾಲ್ ಕ್ಲಬ್ ತಂಡವು ಮೆಸ್ಸಿಯ ಚಿಕಿತ್ಸೆಯ ಎಲ್ಲಾ ಖರ್ಚನ್ನ ನೋಡಿಕೊಳ್ಳುತ್ತದೆ ಆದರೆ ಅದಕ್ಕಾಗಿ ಆತ ಸ್ಪೇನ್ ಗೆ ಬಂದು ಬಾರ್ಸಿಲೋನ ಪರವಾಗಿ ಆಟವನ್ನು ಆಡಬೇಕು ಎಂಬುದಾಗಿತ್ತು. ಮೆಸ್ಸಿಯ ಚಿಕಿತ್ಸೆಯು ಅವರ ತಂದೆ ತಾಯಿಗೆ ನುಂಗಲಾರದ ತುತ್ತಾಗಿತ್ತು ಹಾಗಾಗಿ ತಕ್ಷಣವೇ ಅವರು ಈ ಆಫರ್ ಗೆ ಒಪ್ಪಿದರು. ಮುಂದೆ ಮೆಸ್ಸಿ ಸ್ಪೆನಗೆ ತೆರಳಿ ಅಲ್ಲಿ ಚಿಕಿತ್ಸೆ ಪಡೆದುಕೊಂಡರು.
ಮೆಸ್ಸಿಯ ಹೈಟ್ ಸ್ವಲ್ಪ ಕಡಿಮೆ ಇದ್ದುದರಿಂದ ಎಷ್ಟು ಸಾರಿ ಆತನಿಗೆ ಆಡುವ ಅವಕಾಶ ಸಿಗುತ್ತಿರಲಿಲ್ಲ. ಸಿಕ್ಕರು ಅವನ ತಂಡದ ಆಟಗಾರರು ಆತನಿಗೆ ಬಾಲ್ ಪಾಸ್ ಮಾಡುತ್ತಿರಲಿಲ್ಲ. ಆದರೆ ಮೆಸ್ಸಿ ಎಂದರೆ ಮೆಸ್ಸಿನೆ ಅಲ್ವೆ. ಯಾಕೆಂದರೆ ಆತ ಹೇಗಾದರೂ ಮಾಡಿ ಬಾಲನ್ನು ಕಸಿದುಕೊಳ್ಳುತ್ತಿದ್ದನು ಮತ್ತು ಬರೋಬ್ಬರಿ 15 ನಿಮಿಷಗಳ ತನಕ ಯಾರಿಂದಲೂ ಅವನಿಂದ ಬಾಲ್ ಅನ್ನು ಕಸಿದುಕೊಳ್ಳಲು ಆಗುತ್ತಿರಲಿಲ್ಲ. ಇಂದು ಜಗತ್ತಿನಲ್ಲಿ ಮೆಸ್ಸಿ ಹೆಸರನ್ನು ಕೇಳದ ಯಾವೊಬ್ಬ ಫುಟ್ಬಾಲ್ ಅಭಿಮಾನಿ ಇಲ್ಲ. ಎಷ್ಟೋ ಜನ ಕೇವಲ ಮೆಸ್ಸಿಗಾಗಿಯ ಫುಟ್ಬಾಲ್ ನೋಡಲು ಮೈದಾನಕ್ಕೆ ಬರುವವರಿದ್ದಾರೆ. 2012ರಲ್ಲಿ 91 ಗೋಲ್ ಬಾರಿಸಿದ ಏಕೈಕ ಆಟಗಾರನಾಗಿ ಮೆಸ್ಸಿ ಹೊರಹೊಮ್ಮಿದರು. ಈ ಕಾರಣಕ್ಕಾಗಿ ಅವರ ಹೆಸರನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಸೇರ್ಪಡೆ ಆಯಿತು. ಅಷ್ಟೇ ಅಲ್ಲದೆ 6 ಗೋಲ್ಡನ್ ಬೂಟ್ ಅವಾರ್ಡ್ ಹೊಂದಿರುವ ಜಗತ್ತಿನ ಏಕೈಕ ಫುಟ್ಬಾಲ್ ಆಟಗಾರ ಮೆಸ್ಸಿ ಆಗಿದ್ದಾರೆ. ಇದರ ಜೊತೆಗೆ ಅವರು ಅನೇಕ ಸಮಾಜ ಸೇವೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 2012ರಲ್ಲಿ ತನ್ನಂತೆಯೇ ಬೆಳವಣಿಗೆ ಕಾಯಿಲೆಯಿಂದ ಬಳಲುತ್ತಿದ್ದ ಓರ್ವ ಬಾಲಕನ 6 ವರ್ಷದ ಆಸ್ಪತ್ರೆ ಮತ್ತು ಚಿಕಿತ್ಸೆ ಖರ್ಚಿಗೆ ಅವರು ಸ್ಪಾನ್ಸರ್ ಮಾಡಿದ್ದರು.
ಕತಾರ್ನಲ್ಲಿ ನಡೆದ 2022ರ ಫಿಫಾ ವರ್ಲ್ಡ್ ಕಪ್ ನಲ್ಲಿ ವೈಯಕ್ತಿಕ ಸಾಧನೆಗೆ ಗೋಲ್ಡನ್ ಬಾಲ್ ಪ್ರಶಸ್ತಿ ಯೊಂದಿಗೆ ಅರ್ಜೆಂಟಿನಾದ ಬಹುದಿನಗಳ ಕನಸಾಗಿದ್ದ ಫೀಫಾ ವರ್ಲ್ಡ್ ಚಾಂಪಿಯನ್ ಪಟ್ಟವನ್ನ ತಂದುಕೊಟ್ಟ ಹೀರೋ ಆಗಿ ಅವರು ಹೊರಹೊಮ್ಮಿದರು.
ಸ್ನೇಹಿತರೆ ಹೇಳ್ತಾರಲ್ಲ ಪ್ರತಿ ಕನಸು ನನಸಾಗುತ್ತದೆ. ಪ್ರತಿ ಆಸೆಯು ಈಡೇರುತ್ತದೆ ಮತ್ತು ಈ ಜಗತ್ತು ಶರಣಾಗುತ್ತದೆ. ಆದರೆ ಕೇವಲ ಈ ಜಗತ್ತನ್ನು ಆಳುವವರು ಬೇಕಾಗಿದ್ದಾರೆ, ಅಷ್ಟೇ..

Motivation: ನಿಮ್ಮಲ್ಲಿ ಸ್ಫೂರ್ತಿ ಕಿಡಿಯನ್ನು ಹೊತ್ತಿಸುವ ಈ ಆರ್ಟಿಕಲ್ ಅನ್ನು ಒಮ್ಮೆ ಓದಿ.. ಆಮೇಲೆ ನಿಮ್ಮನ್ನು ಯಾರು ತಡೆಯಲು ಆಗುವುದಿಲ್ಲ !

ಪ್ರತಿ ಬಾರಿ ಗೆಲ್ಲುವವನೇ ಗೆದ್ದರೆ ಅದು ಮಾರನೆಯ ದಿನದ ನ್ಯೂಸ್ ಪೇಪರ್ ಗೆ ಹೆಡ್ ಲೈನ್ ಆಗುತ್ತದೆ ಅಷ್ಟೇ. ಆದರೆ ಪ್ರತಿ ಬಾರಿ ಸೋಲುವವನು ಗೆದ್ದರೆ ಆಗ ಹೊಸ ಇತಿಹಾಸ ಸೃಷ್ಟಿ ಆಗುತ್ತದೆ. ಯಾರು ಇಂದು ನಿಮ್ಮ ಕಷ್ಟಗಳನ್ನು ಕಂಡು ಚಪ್ಪಾಳೆ ಹೊಡೆದು ನಗುತ್ತಾರೋ ಅವರನ್ನು ನಿಮ್ಮ ಯಶಸ್ಸಿನ ಮೂಲಕ ನಿಮ್ಮ ಮುಂದೆ ಮಂಡಿ ಊರಿ ಬೇಡುವಂತೆ ಬೆಳೆದು ತೋರಿಸಿ. ಪರಿಶ್ರಮ ಅಂತು ಜಾರಿಯಲ್ಲಿದೆ ಅದಕ್ಕೆ ಸುಮ್ಮನೆ ಆಗಿದ್ದೇನೆ ಬರಲಿರುವ ದಿನಗಳಲ್ಲಿ ಕಾಲವೇ ಎಲ್ಲರಿಗೂ ಉತ್ತರಿಸಲಿದೆ ನಾನು ಯಾರು ಎಂದು.
ಜಗತ್ತು ಶ್ರೀಮಂತ ವ್ಯಕ್ತಿಗಳಿಗೆ ಮಾತ್ರ ಗುಲಾಮ ಆಗಿರುತ್ತದೆ ಎಂಬುದನ್ನು ನೋಡಿದ್ದೇನೆ. ಅದಕ್ಕಾಗಿ ನಾನು ಕೂಡ ಹಠಕ್ಕೆ ಬಿದ್ದಿದ್ದೇನೆ ಜಗತ್ತು ನನಗೆ ಗುಲಾಮ ಆಗಲಿ ಎಂದು. ಎಲ್ಲಾ ನನ್ನ ಹಣೆಬರಹ ಅಂತಾರಲ್ಲ ಅದರಲ್ಲಿ ನನಗೆ ಎಳ್ಳಷ್ಟು ನಂಬಿಕೆ ಇಲ್ಲ. ಹಸ್ತ ರೇಖೆ ನೋಡಿ ಭವಿಷ್ಯ ನಿರ್ಧರಿಸುವ ಮೂರ್ಖರ ಸಾಲಿಗೆ ಸೇರಿದವನು ನಾನಲ್ಲ. ಏಕೆಂದರೆ ಕೈ ಗಳೇ ಇಲ್ಲದವರೆಗೂ ಭವಿಷ್ಯ ಇದೆ ಎಂಬುದನ್ನು ಕಂಡುಕೊಂಡವನು ನಾನು. ಎಲ್ಲಾ ಯಶಸ್ವಿ ಸಾಧಕರಲ್ಲಿ ಒಂದು ಸಾಮಾನ್ಯ ಸಂಗತಿ ಏನೆಂದರೆ ಜಗತ್ತೇ ನನಗೆ ಎದುರಾಳಿ ಆದರು ನಾನು ಗೆದ್ದೇ ಗೆಲ್ಲುವೆ ಎಂಬ ಛಲ. ಯಾರಾದರೂ ನಿಮ್ಮ ಬಗ್ಗೆ ಟೀಕೆ ಮಾಡುತ್ತಿದ್ದರೆ ಖುಷಿ ಪಡಿ. ಏಕೆಂದರೆ ಅವರು ತಮ್ಮ ಅಮೂಲ್ಯ ಸಮಯವನ್ನು ನಿಮಗಾಗಿ ಮೀಸಲಿಡುತ್ತಿದ್ದಾರೆ ಎಂದು ಮತ್ತು ನಿಮಗೆ ಬೆಳೆಯಲು ಅವಕಾಶ ಒದಗಿಸಿ ಕೊಡುತ್ತಿದ್ದಾರೆ ಎಂದು.
ಜೀವನದಲ್ಲಿ ಎಂದಿಗೂ ಕಲಿಯುವುದನ್ನು ನಿಲ್ಲಿಸಬೇಡಿ ಏಕೆಂದರೆ ಜೀವನ ಎಂದಿಗೂ ಕಲಿಸುವುದನ್ನ ನಿಲ್ಲಿಸುವುದಿಲ್ಲ. ನಿಮಗೆ ನಿಮ್ಮ ಗುರಿಯನ್ನು ಭೇದಿಸಬೇಕೆಂಬ ಹಠವಿದ್ದರೆ ನಿಮ್ಮದೇ ದಾರಿ ಒಂದನ್ನ ಹುಡುಕಿಕೊಳ್ಳಿ ಅನೇಕ ಜನ ತಮಗೆ ಯಾರಾದರೂ ಬಂದು ದಾರಿ ತೋರಿಸಲಿ ಎಂದು ಕಾಯುತ್ತಾ ಇರುತ್ತಾರೆ. ಯಶಸ್ಸಿನ ಹೋರಾಟದಲ್ಲಿ ಸೋತು ಕೆಳಗೆ ಬೀಳುವುದು ಅವಮಾನವಲ್ಲ ಬಿದ್ದರೂ ಮೇಲೆ ಹೇಳದೇ ಇರುವುದೇ ನಿಜವಾದ ಅವಮಾನ. ನೀವು ಸರಿಯಾಗಿದ್ದರೆ ಮತ್ತೊಬ್ಬರಿಗೆ ಅದನ್ನು ಸಾಬೀತು ಮಾಡಿ ತೋರಿಸುವ ಅಗತ್ಯವಿಲ್ಲ ನೀವು ಒಳ್ಳೆಯವರಾಗಿ ಅಷ್ಟೇ. ಕಾಲವೇ ಎಲ್ಲದಕ್ಕೂ ಉತ್ತರ ನೀಡುತ್ತದೆ.
ದುಕ್ಕಿತನಾಗಿ ಗಾಬರಿ ಪಡಬೇಡ ಯಾಕೆಂದರೆ ಜೀವನ ಅಳುವಿನಿಂದಲೇ ಶುರುವಾಗಿದೆ ಎಂಬುದನ್ನ ಮರೆಯಬೇಡ. ಯಶಸ್ಸಿನ ಬಗ್ಗೆ ಒಂದು ಮಾತಂತೂ ಖಚಿತ ಅದು ಪರಿಶ್ರಮ ಪಡುವವರನ್ನು ಕಂಡರೆ ಫಿದಾ ಆಗುತ್ತದೆ. ಜನ ನಿಮ್ಮ ಗುರಿಯ ಬಗ್ಗೆ ಆಡಿಕೊಳ್ಳದಿದ್ದರೆ ನಿಮ್ಮ ಗುರಿ ಚಿಕ್ಕದಾಗಿದೆ ಎಂಬುದನ್ನ ನೆನಪಿಟ್ಟುಕೊಳ್ಳಿ. ನನ್ನ ಗುರಿಯನ್ನು ಭೇದಿಸಬೇಕೆಂಬ ಛಲ ನನ್ನಲ್ಲಿ ನಿನ್ನೆಯು ಇತ್ತು, ಇವತ್ತು ಇದೆ ಮತ್ತು ಅದು ನಾಳೆಗೂ ಇರಲಿದೆ. ಯಾವಾಗ ನಿನ್ನಲ್ಲಿ ಈ ಉತ್ಸಾಹ ಬರುತ್ತದೆ ಅಲ್ಲಿಯವರೆಗೆ ನಿನಗೆ ಬೆಟ್ಟದಂತಿದ್ದ ನಿನ್ನ ಗುರಿ ನಿನ್ನ ಕಾಲಡಿಯಲ್ಲಿ ಇರುತ್ತದೆ. ಸಮಯ ನಿಂತಿಲ್ಲ ಹಾಗಾಗಿ ನಾನು ಶರಣಾಗಿಲ್ಲ ಕಷ್ಟಗಳ ಸರಮಾಲೆ ನನ್ನನ್ನು ಕೆಡವಲು ಯತ್ನಿಸಿದರು ನಾನು ನಿಂತಿಲ್ಲ ಒಬ್ಬಂಟಿಯ ಈ ಯಶಸ್ಸಿನ ಪಯಣದಲ್ಲಿ ನನ್ನ ಉತ್ಸಾಹವೇ ನನಗೆ ಆಸರೆ. ಗುರಿ ಭೇದಿಸಿ ಶತ್ರುಗಳನ್ನ ಮೆಟ್ಟಿ ನಿಲ್ಲುವವರೆಗೂ ನನಗೆ ದಣಿವು ಎಂಬುದು ಇಲ್ಲ. ಇಷ್ಟಪಟ್ಟ ಕನಸು ನುಚ್ಚು ನೂರಾದರೂ ಮತ್ತೊಂದು ಕನಸು ಕಾಣುವುದೇ ಜೀವನ. ಜೀವನದಲ್ಲಿ ನಾವು ಅಂದುಕೊಂಡಂತೆ ನಡೆದರೆ ಆ ಜೀವನಕ್ಕೆ ಬೆಲೆ ಇರುವುದಿಲ್ಲ. ಜೀವನದಲ್ಲಿ ರಿಸ್ಕ್ ತೆಗೆದುಕೊಂಡಾಗಲೇ ಜೀವನ ರಸವತ್ತಾಗುವುದು. ಇಲ್ಲದಿದ್ದರೆ ಸಪ್ಪೆಯಾಗಿ ಬಿಡುತ್ತದೆ. ಮತ್ತೊಬ್ಬರ ಜೀವನಕ್ಕೆ ನಮ್ಮ ಜೀವನವನ್ನು ಹೋಲಿಸಿಕೊಳ್ಳಬಾರದು. ಯಾಕೆಂದರೆ ಜೀವನ ಎಂಬ ಈ ಪರೀಕ್ಷೆಯಲ್ಲಿ ಪ್ರತಿಯೊಬ್ಬರಿಗೂ ಬೇರೆ ಬೇರೆ ಪ್ರಶ್ನೆ ಪತ್ರಿಕೆ ಇರುತ್ತದೆ. ಹಾಗಾಗಿ ಇಲ್ಲಿ ನಾವು ನಕಲು ಮಾಡಲು ಹೋದರೆ ನಾವು ಫೇಲ್ ಆಗಬೇಕಾಗುತ್ತದೆ. ಆದ್ದರಿಂದ ನಮಗೆ ಸಿಕ್ಕಿರುವ ಪ್ರಶ್ನೆ ಪತ್ರಿಕೆಯನ್ನು ನಾವು ಪ್ರಾಮಾಣಿಕವಾಗಿ ಬರೆಯಲು ಯತ್ನಿಸಬೇಕು. ಇನ್ನೊಬ್ಬರ ಪ್ರಶ್ನೆ ಪತ್ರಿಕೆಯತ್ತ ಕಣ್ಣು ಕೂಡ ಹಾಯಿಸದಂತೆ ಈ ಜೀವನ ಎಂಬ ಅಗ್ನಿ ಪರೀಕ್ಷೆಯನ್ನು ಪಾಸು ಮಾಡಬೇಕು.
ಜೀವನದ ಪ್ರತಿ ಹಂತದಲ್ಲೂ ಕಷ್ಟಗಳು ಸೋಲುಗಳು ಎದುರಾಗುತ್ತವೆ, ಕಹಿ ಸತ್ಯ ಏನೆಂದರೆ ಇದುವೇ ಜೀವನ. ಏಕೆಂದರೆ ಶಾಂತವಾದ ಸಮುದ್ರ ಎಂದಿಗೂ ಒಬ್ಬ ಶ್ರೇಷ್ಠ ನಾವಿಕನನ್ನು ಸೃಷ್ಟಿಸುವುದಿಲ್ಲ. ನೀವು ಜೀವನದಲ್ಲಿ ಏನಾದರೂ ಒಂದನ್ನು ಸಾಧಿಸಲೇಬೇಕೆಂದು ಹಠ ಹೊಂದಿದ್ದರೆ ಎಂದಿಗೂ ಸಮಯ ಮತ್ತು ಪರಿಸ್ಥಿತಿಗಳನ್ನ ದೂಷಿಸಬೇಡಿ. ಯಾಕೆಂದರೆ ನಾಗಾಲೋಟದಿಂದ ಧಮ್ಮಿಕ್ಕುವ ನದಿ ಎಂದಿಗೂ ಸಮುದ್ರ ಇನ್ನು ಎಷ್ಟು ದೂರ ಇದೆ ಎಂದು ಕೇಳುವುದಿಲ್ಲ. ನಿಮ್ಮ ಪರಿಶ್ರಮ ಎಷ್ಟು ದೊಡ್ಡದಾಗಿರಬೇಕು ಎಂದರೆ ನಿಮ್ಮ ಯಶೋಗಾಥೆಯನ್ನು ಕೇಳಿದವರ ಮೈಯಲ್ಲಿ ರೋಮಾಂಚನ ಆಗುವಂತಿರಬೇಕು. ನಿಜವಾಗಿಯೂ ದೊಡ್ಡ ವ್ಯಕ್ತಿ ಯಾರಂದ್ರೆ ತನ್ನ ಎದುರಿಗೆ ಕುಳಿತ ವ್ಯಕ್ತಿಗೆ ತಾನು ಸಣ್ಣವನು ಎಂಬ ಭಾವನೆ ಬರದಂತೆ ನಡೆದುಕೊಳ್ಳುವವನು. ನಾನೇಕೆ ಅವರಿವರಂತೆ ಆಗಬೇಕು, ಇಡೀ ಜಗತ್ತಿನಲ್ಲಿಯೇ ನನ್ನಂತ ವ್ಯಕ್ತಿ ಇಲ್ಲದಿರುವಾಗ. ಕಠಿಣ ಪರಿಶ್ರಮ ನಿಮ್ಮನ್ನು ಅದೃಷ್ಟ ಕರೆದುಕೊಂಡು ಹೋಗಲಾರದಷ್ಟು ಉನ್ನತ ಮಟ್ಟಕ್ಕೆ ತಂದು ನಿಲ್ಲಿಸುತ್ತದೆ. ಕೊನೆಯದಾಗಿ ಒಂದು ಮಾತು,” ಗುರಿ ಎಷ್ಟೇ ಕಠಿಣವಾಗಿರಲಿ ಅದನ್ನು ಭೇದಿಸಿಯೇ ತೀರುತ್ತೇನೆ ಎಂಬ ಹಠ ನಿಮ್ಮದಾಗಿರಲಿ ” ನಮಸ್ಕಾರ.

ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ನಮಸ್ಕಾರ.

By

Leave a Reply

Your email address will not be published. Required fields are marked *