Categories: information

ಜಗತ್ತಿಗೆ ಕನ್ನಡ ಪರಿಚಯಿಸಿದವನು ಕನ್ನಡಿಗನಲ್ಲ ! ಇವರ ಬಗ್ಗೆ ನಿಮಗೆಷ್ಟು ಗೊತ್ತು?

ಸ್ನೇಹಿತರೇ.. ಕನ್ನಡ ನಮ್ಮ ಮಾತೃಭಾಷೆ ಆಗಿದ್ದರೂ ಮಾತನಾಡುವಾಗ ಅಲ್ಲಲ್ಲಿ ಇಂಗ್ಲಿಷ್ ಹಿಂದಿ.. ವಿದೇಶಿ ಭಾಷೆಗಳನ್ನು ಬಳಸುವುದುಂಟು ಆದರೆ ಅಲ್ಲೊಬ್ಬ ವಿದೇಶಿಗನಾಗಿದ್ದರು ಕನ್ನಡವನ್ನು ಅಷ್ಟೊಂದು ಅಚ್ಚುಕಟ್ಟಾಗಿ ಮಾತನಾಡುವಾಗ ಯಾವುದೇ ವಿದೇಶಿ ಪದ ನುಸುಳುತ್ತಿರಲಿಲ್ಲ, ಕೇವಲ ಮಾತನಾಡುವುದಲ್ಲದೆ, ಕನ್ನಡವನ್ನ ಓದಿದರು ಕನ್ನಡವನ್ನೇ ಬರೆದರು.

Spread the love

ಸ್ನೇಹಿತರೇ.. ಕನ್ನಡ ನಮ್ಮ ಮಾತೃಭಾಷೆ ಆಗಿದ್ದರೂ ಮಾತನಾಡುವಾಗ ಅಲ್ಲಲ್ಲಿ ಇಂಗ್ಲಿಷ್ ಹಿಂದಿ.. ವಿದೇಶಿ ಭಾಷೆಗಳನ್ನು ಬಳಸುವುದುಂಟು ಆದರೆ ಅಲ್ಲೊಬ್ಬ ವಿದೇಶಿಗನಾಗಿದ್ದರು ಕನ್ನಡವನ್ನು ಅಷ್ಟೊಂದು ಅಚ್ಚುಕಟ್ಟಾಗಿ ಮಾತನಾಡುವಾಗ ಯಾವುದೇ ವಿದೇಶಿ ಪದ ನುಸುಳುತ್ತಿರಲಿಲ್ಲ, ಕೇವಲ ಮಾತನಾಡುವುದಲ್ಲದೆ, ಕನ್ನಡವನ್ನ ಓದಿದರು ಕನ್ನಡವನ್ನೇ ಬರೆದರು. ಇದೇ ಅಲ್ಲವೇ ಕನ್ನಡದ ನಿಜವಾದ ಪ್ರೇಮ ಇದಕ್ಕಾಗಿಯೇ ನಮ್ಮ ವರಕವಿ ಇವರನ್ನ “ಕನ್ನಡಕ್ಕೆ ಕನ್ನಡಿಯ ಹಿಡಿದು ದುಡಿದವ ನೀನು” ಎಂದು ಹಾಡಿ ಹೊಗಳಿದ್ದಾರೆ.

Thank you for reading this post, don't forget to subscribe!

ಆ ಧೀಮಂತ ವ್ಯಕ್ತಿಯೇ ರೆವರೆಂಡ್ ಜಾರ್ಜ್ ಫರ್ಡಿನೆಂಡ್ ಕಿಟ್ಟೆಲ್.1832 ರಲ್ಲಿ ಜರ್ಮನಿಯ ರಾಸ್ಟರ್ ಹಾಫ್ ಎಂಬಲ್ಲಿ ಜನಿಸಿದ ಇವರ ತಂದೆ ಪ್ರೊಟೆಸ್ಟಂಟ್ ಚರ್ಚ್ ಪಾದ್ರಿ ಇವರು ಕ್ರೈಸ್ತ ಧರ್ಮ ಪ್ರಚಾರಕ್ಕೆಂದು 1853 ಮಂಗಳೂರಿಗೆ ಬಾಸೆಲ್ ಮಿಷನ್ ವತಿಯಿಂದ ಬಂದಿರುತ್ತಾರೆ. ಆಗ ಇವ್ರಿಗೆ 21 ವಯಸ್ಸು. ಇವರಿಗೆ ಬಹುಭಾಷಾ ಆಸಕ್ತಿ ಇರುವುದರಿಂದ ಮಂಗಳೂರಿಗೆ ಬರುವಷ್ಟರಲ್ಲಿ ಫ್ರೆಂಚ್,ಗ್ರೀಕ್,ಲ್ಯಾಟಿನ್, ಹೀಬ್ರೂ ಭಾಷೆಯಲ್ಲಿ ಹಿಡಿತ ಸಾಧಿಸಿದ್ದರು. ಮಂಗಳೂರಿನ ಬಾಸೆಲ್ ಮಿಷನ್ ನಲ್ಲಿ ಕೆಲಸ ಮಾಡುತ್ತಾ ಕನ್ನಡ
ಕಲಿಯಲಾರಂಭಿಸಿದರು. ನಂತರದ ದಿನಗಳಲ್ಲಿ ಧಾರವಾಡ ಬಾಸೆಲ್ ಮಿಷನ್ ಹೈಸ್ಕೂಲ್ನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಆಗಿನ ಬ್ರಿಟಿಷ್ ಮುಖ್ಯಸ್ಥ ನಿಘಂಟನ್ನು ರಚಿಸಲು ಹೇಳಿದಾಗ. ಅವರು ಹೇಳುವ ಮುಂಚೆಯೇ “ಮಂಗರಾಜು” ಎಂಬ ನಿಘಂಟನ್ನು ರಚಿಸಿದ್ದರು. ನಂತರ ಕನ್ನಡವನ್ನು ಇನ್ನಷ್ಟು ಅಚ್ಚುಕಟ್ಟಾಗಿ ಕಲಿಯಲೆಂದು ಮತ್ತೆ ಮಂಗಳೂರಿನ ಬಾಸೆಲ್ ಮಿಷನ್ ಗೆ
ತೆರಳಿದರು.

ಇವರು ಕನ್ನಡಕ್ಕೆ ನೀಡಿರುವ ಕೊಡುಗೆ ಶ್ಲಾಘನೀಯ “ಸಂಸಾರ ಕ್ರಮ” “ಉಭಯ ಮಾರ್ಗ” “ನಂಬಿ ಜೀವಿಸಿರಿ”
“ಡೆನಿಯಲನೂ ಅವನ ಜೊತೆಗಾರರು” ಎಂಬ ಪ್ರಬಂಧಗಳನ್ನು ಹಾಗೂ ವಿಚಿತ್ರ ವರ್ತಮಾನ ಸಂಗ್ರಹ, ಸಚಿತ್ರ ಕನ್ನಡ ಮಾಸ ಪತ್ರಿಕೆ, ಅರುಗೋದಯ ಪತ್ರಿಕೆಗಳ ಲೇಖಕರು ಸಹಸಂಪಾದಕರಾಗಿದ್ದರು.
ಎಲ್ಲಕಿಂತ ಮುಖ್ಯ ಸಂಗತಿ ಎಂದರೆ ಕಿಟ್ಟೆಲ್ ಅವ್ರು ಕರ್ನಾಟಕ ಗ್ರಾಮೀಣ ಜನತೆಯಿಂದ ಸಣ್ಣ ಸಣ್ಣ ಪದಗಳ ಕಲೆಹಾಕಿ ಮೊಟ್ಟ ಮೊದಲ ಕನ್ನಡ-ಇಂಗ್ಲಿಷ್ ಡಿಕ್ಷನರಿ ಸಿದ್ಧಪಡಿಸಿದರು. ಶಬ್ದಕೋಶವು ಗಾದೆಮಾತು, ಹಳೆಗನ್ನಡ, ಹೊಸಗನ್ನಡ ಅರ್ಥ ಸಂಗ್ರಹಿಸಿ ಪ್ರತಿಶಬ್ಧದ ಉಚ್ಚಾರಣೆಯನ್ನು ಬರೆಯುತ್ತಾರೆ. 25 ವರ್ಷಗಳ ಕಾಲ ಶ್ರಮವಹಿಸಿ 70 ಸಾವಿರ ಕನ್ನಡ ಪದಗಳನ್ನು ಸಂಗ್ರಹಿಸಿದರು. ಕೊನೆಗೆ 1894 ರಲ್ಲಿ ಮೊಟ್ಟಮೊದಲ ಕನ್ನಡ ಇಂಗ್ಲಿಷ್- ಡಿಕ್ಷನರಿ ಸಿದ್ಧಪಡಿಸಿದರು.
ಆ ಕಿಟ್ಟೆಲ್ ಡಿಕ್ಷನರಿ ಇವತ್ತಿಗೂ ಕನ್ನಡ ಇಂಗ್ಲಿಷ್ ಡಿಕ್ಷನರಿ ಆಗಿ ಕನ್ನಡಿಗರ ಮನೆಮನಗಳಲ್ಲಿ ರಾರಾಜಿಸುತ್ತಿದೆ. ಇವರ ಚಿರಸ್ಮರಣೀಯ ಕೃತಿಯಾದ ಕನ್ನಡ ಇಂಗ್ಲಿಷ್ ನಿಘಂಟನ್ನು ಗುರುತಿಸಿ ಜರ್ಮನಿಯ ಟ್ಯುಬಿಂಗನ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ವಿಶೇಷವೆಂದರೆ ಇದು ಕನ್ನಡಕ್ಕೆ ಸ್ಕಂದ ಎರಡನೇ ಡಾಕ್ಟರೇಟ್
ಪದವಿಯಾಗಿದೆ…

ಕನ್ನಡಿಗರೇ.. ನಮ್ಮ ಮಾತೃ ಭಾಷೆಯನ್ನು ಪ್ರೀತಿಸೋಣ ಉಳಿಸೋಣ ಬೆಳೆಸೋಣ ಕನ್ನಡಿಗರಾಗಿ ಮಾತೃಭಾಷೆಯ ರಕ್ಷಣೆಯಾಗದಿದ್ದರೆ ಬೇಲಿಯೇ ಎದ್ದು ಹೊಲ ಮೇಯ್ದಂತಾಗುತ್ತದೆ. ಹಾಗೆಯೇ ಬೇರೆ ಭಾಷೆಯನ್ನು ಗೌರವಿಸೋಣ.

~ ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ~

Recent Posts

Rain Update: ಇಂದಿನಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆ! ನಿಮ್ಮ ಜಿಲ್ಲೆಯಲ್ಲಿಯೂ ಆಗಲಿದೆಯಾ ಚೆಕ್ ಮಾಡಿ!

. ರೈತರೇ ಪ್ರಸಕ್ತ 2025ನೇ ಸಾಲಿನಲ್ಲಿ ಹಿಂದಿನ ವರ್ಷದ ವಾದಿಕೆಗಿಂತಲೂ ಈ ವರ್ಷ ಅತಿ ಹೆಚ್ಚು ಮಳೆ ಆಗುತ್ತಿದೆ ಹಾಗೂ…

56 years ago

P.M kisan 20th installment: ಪಿಎಂ ಕಿಸಾನ್ 20ನೇ ಕಂತಿನ ಹಣ ಜಮಾ ದಿನಾಂಕ ಪ್ರಕಟ

Yojana) ಯೋಜನೆ ಅಡಿಯಲ್ಲಿ ಒಟ್ಟು 19ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ನೇರವಾಗಿ 38000 ರೂಪಾಯಿ ಹಣ ಜಮಾ ಆಗಿವೆ. ಇದೀಗ…

56 years ago

PM Kisan: ಅನರ್ಹ ಫಲಾನುಭವಿಗಳ ಪಟ್ಟಿ ಪ್ರಕಟ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ!

ಈ ಯೋಜನೆಯ ಅಡಿಯಲ್ಲಿ ಇದೀಗ ಅರ್ಹ ರೈತರಿಗೆ 18 ಕಂತುಗಳಲ್ಲಿ ತಲಾ 2000 ರೂಪಾಯಿಯಂತೆ ಒಟ್ಟು 36,000 ರೂಪಾಯಿ ಹಣ…

56 years ago

ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆದುಕೊಳ್ಳುವವರಿಗೆ ಶಾಕಿಂಗ್ ನ್ಯೂಸ್! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು  ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…

56 years ago

Gruhalakshmi: ಗೃಹಲಕ್ಷ್ಮಿ ಯೋಜನೆಯ 16 ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…

56 years ago

KSRTC:ಕೆ ಎಸ್ ಆರ್ ಟಿ ಸಿ ಬಸ್ ದರ ಏರಿಕೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…

56 years ago