Categories: information

ಹುಟ್ಟಿದ ಮನೆಯಲ್ಲಿಯೇ ಕೊನೆದಿನಗಳನ್ನು ಕಳೆಯಲು ಬಂದ ತಾಯಿಗೆ ಬಾಗಿಲು ತೆಗೆಯದ ಮಗಳು, ಅಮ್ಮ ಸಾ*ವು

ಹುಟ್ಟಿದ ಮನೆಯಲ್ಲಿಯೇ ಕೊನೆಯ ದಿನಗಳನ್ನು ಕಳೆಯಲು ಬಂದ ತಾಯಿಗೆ ಸ್ವಂತ ಮಗಳೇ ಬಾಗಿಲು ತೆರೆಯದ ಮನಕಲಕುವ ಘಟನೆ ನಡೆದಿದೆ. ತಾಯಿಯ ನೋವು, ಕುಟುಂಬದ ಕಲಹ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಚರ್ಚೆಗೆ ಕಾರಣವಾದ ಈ ಘಟನೆ ಎಲ್ಲರ ಮನವನ್ನು ತಟ್ಟಿದೆ.

Spread the love

96 ವಯಸ್ಸಿನ ಅಜ್ಜಿಯೊಬ್ಬರಿಗೆ ತನ್ನ ಕೊನೆಯ ದಿನಗಳನ್ನು ತಾನು ಹುಟ್ಟಿದ ಮನೆಯಲ್ಲಿ ಕಳೆಯುವ ಆಸೆಯಾಗಿದೆ. ಆದರೆ ಮಗಳು ಅವಕಾಶ ನೀಡದ ಕಾರಣ ಬೇಸರದಲ್ಲಿಯೇ ಅಜ್ಜಿ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.

Thank you for reading this post, don't forget to subscribe!

ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿರುವ ಸಣ್ಣ ಮನೆಯಲ್ಲಿ, ಹಳೆಯ ನೆನಪುಗಳನ್ನೊಮ್ಮೆ ನೋಡಬೇಕು ಎಂದು ಅಜ್ಜಿ ಪಾರ್ವತಮ್ಮ ಆಸೆಪಟ್ಟಿದ್ದರು.

ಆದರೆ ಆಸೆ ಫಲಿಸದ ಕಾರಣ ಸುಸ್ತಾಗಿ ಮನೆಯ ಮುಂದೆಯೇ ಮಲಗಿ ಅಜ್ಜಿ ಪ್ರಾಣಬಿಟ್ಟಿದ್ದಾರೆ.

ಗಂಡ ಸತ್ತ ಜಾಗದಲ್ಲೇ ನಾನು ಸಾಯಬೇಕು

ಪಾರ್ವತಮ್ಮಗೆ ನಾಲ್ಕು ಹೆಣ್ಣು, ನಾಲ್ಕು ಗಂಡುಮಕ್ಕಳು. ಈವರೆಗೂ ಮಗ ಮುತ್ತುರಾಜ್‌ ಮನೆಯಲ್ಲಿಯೇ ಇದ್ದ ಪಾರ್ವತಮ್ಮ ಇನ್ನೇನು ನನ್ನ ಕಡೆಗಾಲ ಬಂದಂತೆ ಅನಿಸುತ್ತಿದೆ. ನಾನು ಹುಟ್ಟಿ, ಬದುಕಿ, ಬೆಳೆದ ಮನೆಯಲ್ಲಿ ಕೆಲ ದಿನಗಳನ್ನು ಕಳೆಯಬೇಕು ಎಂದು ಕೇಳಿಕೊಂಡಿದ್ದರು. ಅದೇ ಮನೆಯಲ್ಲಿ ನನ್ನ ಗಂಡ ಪ್ರಾಣ ಬಿಟ್ಟಿದ್ದಾರೆ, ಅಲ್ಲಿಯೇ ನನ್ನ ಪ್ರಾಣವೂ ಹೋದರೆ ಗಂಡನನ್ನು ಸೇರುತ್ತೇನೆ ಎಂದು ಹೇಳುತ್ತಿದ್ದರು

ಬಾಗಿಲ ಮುಂದೆಯೇ ಪ್ರಾಣ ಬಿಟ್ಟ ಪಾರ್ವತಮ್ಮ

ಮಗಳು ಉಮಾ ಮನೆಗೆ ಆಗಮಿಸಿದ ತಾಯಿಗೆ ಮನೆಯ ಒಳಕ್ಕೆ ನೋಡಲೂ ಸಿಗಲಿಲ್ಲ. ಬಾಗಿಲಿನಿಂದ ಹೊರಬಂದು ಮಾತನಾಡಿಸಿದ ಉಮಾ ಮನೆಯೊಳಗೆ ಬರಲು ಪರ್ಮಿಷನ್‌ ನೀಡಿಲ್ಲ. ಹೊರಗಿನಿಂದ ಮನೆಯ ಬೀಗ ಹಾಕಿಕೊಂಡು ಹೋಗಿದ್ದಾರೆ. ಆದರೂ ಜಗ್ಗದ ಅಜ್ಜಿ ಮನೆಯ ಬಾಗಿಲ ಬಳಿಯೇ ಎರಡು ದಿನಗಳು ಕಾಲ ಕಳೆದಿದೆ. ಉಳಿದ ಮಕ್ಕಳು ಅಮ್ಮನ ಜೊತೆ ಕಾಲ ಕಳೆದಿದ್ದಾರೆ. ಆದರೆ ಎರಡು ದಿನದ ನಂತರ ನಿತ್ರಾಣದಿಂದ ಪಾರ್ವತಮ್ಮ ಕೊನೆಯ ಉಸಿರನ್ನು ಎಳೆದಿದ್ದಾರೆ. ತಾಯಿಯ ಮನೆಯಲ್ಲೇ ಜೀವನ ಕಳೆಯುತ್ತಿರುವ ಉಮಾ, ಸಹಿ ಮಾಡಿಸಿಕೊಂಡು ಮೋಸ ಮಾಡಿದ್ದರು ಎಂದು ಉಳಿದ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವ ಹೆತ್ತ ತಾಯಿಗೂ ಇಂಥ ಮಕ್ಕಳು ಸಿಗೋದು ಬೇಡ ಎಂದು ನೊಂದುಕೊಂಡಿದ್ದಾರೆ.

ಪಿಂಚಣಿ ಎಂದು ಹೇಳಿ ಆಸ್ತಿ ಪತ್ರಕ್ಕೆ ಸಹಿ

ಈ ಘಟನೆಗೆ ಇಡೀ ಗ್ರಾಮವೇ ಸಾಕ್ಷಿಯಾಗಿದೆ. ಉಮಾ ವೃದ್ಧೆಗೆ ಪಿಂಚಣಿ ಬರುತ್ತದೆ ಎಂದು ಹೇಳಿ ಆಸ್ತಿಗೆ ಸಹಿ ಹಾಕಿಸಿಕೊಂಡಿದ್ದಾರೆ ಎನ್ನಲಾಗಿದೆ. ಆಸ್ತಿಯಿಂದಾಗಿ ಇಡೀ ಕುಟುಂಬ ದೂರಾಗಿದ್ದು, ತಾಯಿಯ ಸಾವಿನಲ್ಲೂ ಒಂದಾಗಲಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಓದುಗರಲ್ಲಿ ವಿನಂತಿ

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode

Recent Posts

BREAKING : ನಾಳೆ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ UG-CET ಪರೀಕ್ಷೆಯ ಫಲಿತಾಂಶ ಪ್ರಕಟ |UG-CET Result 2026

ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ UG-CET 2026 ಫಲಿತಾಂಶ ನಾಳೆ (ಜೂನ್ 6) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.…

57 years ago

ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪ್ಯಾನ್ ಕಾರ್ಡ್,…

57 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ ಈ ವರ್ಷ ಮುಂಗಾರು ಅಗತ್ಯಕ್ಕಿಂತ…

57 years ago

Trump Warns Oman Over Hormuz Strait Mediation With Iran

Amid escalating tensions in the Strait of Hormuz, the United States has launched fresh strikes…

57 years ago

ರಾಜ್ಯಪಾಲರ ಗೈರು ಹಾಜರಿಯಲ್ಲಿ ಸಿಎಂ ರಾಜೀನಾಮೆ ನೀಡಬಹುದೇ..?

ರಾಜ್ಯಪಾಲರು ರಾಜ್ಯದಲ್ಲಿಲ್ಲದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬಹುದೇ ಎಂಬ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಎಂ ರಾಜೀನಾಮೆ ಕುರಿತ…

57 years ago

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿದೆ. ಮುಖ್ಯಮಂತ್ರಿ Siddaramaiah ರಾಜೀನಾಮೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿರುವ ಬೆನ್ನಲ್ಲೇ ರಾಜ್ಯಪಾಲ Kalraj…

57 years ago