ರಾಜ್ಯದಲ್ಲಿ ತೀವ್ರ ಚಳಿ ಹೆಚ್ಚುತ್ತಿರುವ ಹಿನ್ನೆಲೆ 7 ಜಿಲ್ಲೆಗಳಿಗೆ ‘ಶೀತ ಗಾಳಿ’ ಎಚ್ಚರಿಕೆ ಜಾರಿಯಾಗಿದೆ. ಡಿಸೆಂಬರ್ 13 ರವರೆಗೆ ತಾಪಮಾನ ಇನ್ನಷ್ಟು ಕುಸಿಯುವ ಸಾಧ್ಯತೆ ಇದ್ದು, ನಾಗರಿಕರು ಜಾಗ್ರತೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.
ಉತ್ತರ ಕರ್ನಾಟಕ ಫುಲ್ ಕೂಲ್ ಕೂಲ್: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚಳಿಯ ತೀವ್ರತೆ ಹೆಚ್ಚಾಗುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಜನರು ಬೆಳಿಗ್ಗೆ ಎದ್ದು ಬರಲು ಹೆದರುತ್ತಾರೆ. ಹವಾಮಾನ ಇಲಾಖೆಯ ಪ್ರಕಾರ, ಜನವರಿ 21 ಮತ್ತು 22 ರಂದು ಈ ಭಾಗದಲ್ಲಿ ಒಣ ಹವೆ ಜೊತೆಗೆ ಮೈ ಕೊರೆಯುವ ಶೀತ ಗಾಳಿ ಬೀಸಲಿದೆ. ಈ ಕುರಿತು ಸಂಪೂರ್ಣವಾಗಿ ಕೆಳಗೆ ನೋಡಿ.
Thank you for reading this post, don't forget to subscribe!ಈ ಕೆಳಗಿನ 7 ಜಿಲ್ಲೆಗಳಲ್ಲಿ ತಾಪಮಾನ ಭಾರೀ ಇಳಿಕೆಯಾಗಲಿದ್ದು, ‘ಅಲರ್ಟ್’ ಘೋಷಿಸಲಾಗಿದೆ:
ಬೆಳಗಾವಿ
ಬಾಗಲಕೋಟೆ
ಬೀದರ್ (ಅತಿ ಕನಿಷ್ಠ 9°C ದಾಖಲು)
ವಿಜಯಪುರ
ಕಲಬುರಗಿ
ರಾಯಚೂರು
ಯಾದಗಿರಿ
ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇಲ್ಲದಿದ್ದರೂ, ಬೆಳಗಿನ ಜಾವ ವಿಪರೀತ ಇಬ್ಬನಿ (Fog) ಇರಲಿದೆ.
ಗರಿಷ್ಠ ತಾಪಮಾನ: 28°C
ಕನಿಷ್ಠ ತಾಪಮಾನ: 15°C ಬೆಳಿಗ್ಗೆ ವಾಹನ ಚಲಾಯಿಸುವಾಗ ಮಂಜು ಮುಸುಕಿದ ವಾತಾವರಣ ಇರುವುದರಿಂದ “ಫಾಗ್ ಲೈಟ್” (Fog Light) ಬಳಸಲು ಸಲಹೆ ನೀಡಲಾಗಿದೆ.
ಶೀತ ಗಾಳಿಯನ್ನು ಹಗುರವಾಗಿ ತೆಗೆದುಕೊಳ್ಳಬೇಡಿ ಎಂದು ಇಲಾಖೆ ಎಚ್ಚರಿಸಿದೆ.
ಚರ್ಮದ ಸಮಸ್ಯೆ: ವಿಪರೀತ ಚಳಿಯಿಂದ ಕೈ-ಕಾಲು ಮರಗಟ್ಟುವಿಕೆ ಉಂಟಾಗಬಹುದು. ಚರ್ಮದ ಬಣ್ಣ ಬಿಳಿ ಅಥವಾ ಹಳದಿಗೆ ತಿರುಗಿದರೆ ತಕ್ಷಣ ವೈದ್ಯರನ್ನು ಕಾಣಿ. ಇದು ಗಂಭೀರವಾಗಬಹುದು.
ರೋಗ ಲಕ್ಷಣ: ಚಳಿಯಿಂದಾಗಿ ದೇಹದ ಉಷ್ಣಾಂಶ ಕಡಿಮೆಯಾಗಿ ನಡುಕ, ಮಾತನಾಡಲು ತೊಂದರೆ ಅಥವಾ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡಬೇಡಿ.
ಸಾಧ್ಯವಾದಷ್ಟು ಕಿವಿ ಮತ್ತು ತಲೆಯನ್ನು ಮಫ್ಲರ್ ಅಥವಾ ಟೋಪಿಯಿಂದ ಮುಚ್ಚಿಕೊಳ್ಳಿ, ಹೊರಗೆ ಹೋಗುವಾಗ ಕೈಗವಸು (Gloves) ಮತ್ತು ಬೆಚ್ಚಗಿನ ಬಟ್ಟೆ ಧರಿಸಿ. ದೇಹವನ್ನು ಬೆಚ್ಚಗಿಡಲು ಬಿಸಿ ನೀರು ಮತ್ತು ವಿಟಮಿನ್-ಸಿ ಇರುವ ಹಣ್ಣುಗಳನ್ನು ಸೇವಿಸಿ. ವಾಹನ ಚಲಾಯಿಸುವಾಗ ಮಂಜಿನಿಂದ ರಸ್ತೆ ಕಾಣದಿದ್ದರೆ ನಿಧಾನವಾಗಿ ಚಲಿಸಿ.
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://chat.whatsapp.com/FM1qVgdNtJm5m1M9SL0BHc?mode=ac_t
"SSLC ವಿದ್ಯಾರ್ಥಿಗಳೇ ಗಮನಿಸಿ! ಪೂರ್ವಸಿದ್ಧತಾ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಬದಲಾವಣೆಗಳು ನಡೆದಿವೆ. ಪರೀಕ್ಷೆಗೆ ಸಜ್ಜಾಗಲು ಹಾಗೂ ಯಾವುದೇ ತಡಸ್ಥಿತಿಯಿಂದ ತಪ್ಪಿಸಿಕೊಳ್ಳಲು…
BBK 12 ಫಿನಾಲೆಗೆ ಮುನ್ನವೇ ಬಿಗ್ಬಾಸ್ ಕನ್ನಡ 12ರ ವಿನ್ನರ್ ಹೆಸರು ವಿಕಿಪೀಡಿಯಾದಲ್ಲಿ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ…
ಜಮೀನು ಅಥವಾ ನಿವೇಶನ ಖರೀದಿ ಮಾಡುವಾಗ ಆ ಜಮೀನು ಯಾರಿಗೆ ಸಂಬಂಧಿಸಿದ್ದು, ಅಥವಾ ನೀವು ನಿಂತಿರುವ ಜಮೀನು ಅಥವಾ ನಿವೇಶನ…
ಪ್ರತ್ಯೇಕ ಕುಟುಂಬಕ್ಕೆ ₹4000 ಪ್ರತ್ಯೇಕವಾಗಿ ನೀಡಲಾಗುವ ಗೃಹಲಕ್ಷ್ಮಿ ಯೋಜನೆ, ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ಕುರಿತು ಕರ್ನಾಟಕ ಸರ್ಕಾರದಿಂದ…
ರೈತರಿಗೆ ಸರ್ಕಾರದಿಂದ ಶೇ. 90 ರಷ್ಟು ಸಬ್ಸಿಡಿಯಲ್ಲಿ ಲಭ್ಯವಾಗುತ್ತಿರುವ ವಿವಿಧ ಕೃಷಿ ಯಂತ್ರೋಪಕರಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಯಾವ ಯಂತ್ರಗಳಿಗೆ…
“Azim Premji Foundation ನೀಡುವ ₹30,000 ವಾರ್ಷಿಕ ಸ್ಕಾಲರ್ಶಿಪ್ ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ಮುಂದುವರಿಸಲು ಆರ್ಥಿಕ…