Categories: Agripedia

ಕೇವಲ ಒಂದೇ ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲಿ ಹೊಲದ ಉತಾರ ಪಡೆಯುವುದು ಹೇಗೆ?

Spread the love

ಎಲ್ಲ ರೈತ ಬಾಂಧವರಿಗೂ ಅಧಿಕೃತ ವೆಬ್ಸೈಟ್ ಮೀಡಿಯಾ ಚಾಣಕ್ಯ  ಮಾಡುವ ನಮಸ್ಕಾರಗಳು , ಎಲ್ಲರಿಗೂ ತಿಳಿದಿರುವ ಹಾಗೆ , ಹೊಲದ ಯಾವುದೇ ರೀತಿಯಾದ ಮಾಹಿತಿಯನ್ನು ತಿಳಿಯಲು,    ಸರ್ಕಾರದ ಪ್ರತಿಯೊಂದು ಯೋಜನೆ,  ಆನ್ಲೈನ್ ಅಪ್ಲಿಕೇಶನ್ ಹಾಕಲು,  ಮತ್ತು ಇತರೆ  ನಿಮ್ಮ ಹೊಲಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಿಳಿಯಲು ಹೊಲದ ಉತಾರ  ಅಥವಾ ಪಹಣಿ ಬೇಕೇ ಬೇಕು.

ರೈತರಿಗೆ ಸರಕಾರದ ಎಲ್ಲಾ  ಆ ಯೋಜನೆಗಳನ್ನು  ಪಡೆದುಕೊಳ್ಳಬೇಕೆಂದರೆ  ಈ ಭೂ ಪತ್ರಿಕೆಯು  ಮಹತ್ವದ ಪಾತ್ರವನ್ನು ಹೊಂದಿರುತ್ತದೆ. ಇದು ಆ ಹೊಲದ  ಅಸಲಿ ಮಾಲಿಕನ ವಿವರವನ್ನು ತೋರಿಸುತ್ತದೆ, ಈ ಭೂ ಪತ್ರಿಕೆಯು  ಪ್ರತಿಯೊಂದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಪ್ರತಿಯೊಂದು ಯೋಜನೆಗೆ ಕಡ್ಡಾಯವಾಗಿ ಬೇಕಾದ ಪತ್ರಿಕೆ.

ಈ ಹಿಂದೆ ಈ ಹೊಲದ ಉತಾರ ಅಥವಾ ಪಹಣಿಯನ್ನು   ತೆಗೆಯಲು ರೈತ ನಾಡಕಚೇರಿಗೆ , ಅಥವಾ ಇತರೆ ಕಂಪ್ಯೂಟರ್ ಸೆಂಟರ್ ಗಳಿಗೆ ಹೋಗಿ ಸರದಿ ಹಚ್ಚಿ  ಉತಾರವನ್ನು ಪ್ರಿಂಟ್ ಹಾಕಿಸಬೇಕಾಗಿತ್ತು, ಆದರೆ ಈಗ ಸರಕಾರವು  ತನ್ನದೇ ಆದಂತಹ ಅಧಿಕೃತ ವೆಬ್ಸೈಟ್ನಲ್ಲಿ , ರೈತ ಕೇವಲ ತನ್ನ ಊರು ತನ್ನ ಹೊಲದ ಸರ್ವೆ ನಂಬರ್  ಆಯ್ಕೆ ಮಾಡಿಕೊಂಡು ತನ್ನ ಮೊಬೈಲ್ ನಲ್ಲಿಯೇ ತನ್ನ ಪಹಣಿಯನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದು.

ಹಾಗಾದರೆ ಈ ಪಹಣಿ ಎಂದರೇನು — ಪಹಣಿಯು  ಸರಕಾರ ಆದೇಶ ಪಡಿಸಿದ ಹಾಗೆ , ಒಂದು ಬಹು ಮುಖ್ಯವಾದ  ದಾಖಲಾತಿಯಾಗಿದೆ . ಈ ಪಹಣಿಯಲ್ಲಿ  ಹೊಲದ ಮಾಲೀಕನ  ಸಂಪೂರ್ಣ ಮಾಹಿತಿ , ಅವನ ಆಸ್ತಿಯ ಸಂಪೂರ್ಣ ಮಾಹಿತಿ ,  ಹೊಲದ ಸುತ್ತಮುತ್ತಲಿನ  ಆಸ್ತಿಯ ವಿವರವನ್ನು  ಇದು ಹೊಂದಿರುತ್ತದೆ.

ಹಾಗಾದರೆ ಈ ಪಹಣಿ ಏಕೆ ಬೇಕು ?? ಪಹಣಿ ಎಲ್ಲಿ ಉಪಯೋಗವಾಗುತ್ತದೆ?? ಸಂಪೂರ್ಣ ಮಾಹಿತಿ ತಿಳಿಯಿರಿ .
ಯಾವುದೇ ರೈತ ಹೊಲವನ್ನು ಖರೀದಿಸುವಾಗ ಅಥವಾ  ಮಾರಾಟ ಮಾಡುವಾಗ ಈ ಭೂ ದಾಖಲೆಯೂ  ಕಡ್ಡಾಯವಾಗಿ ಬೇಕೇ ಬೇಕು.
ರೈತನು ತನ್ನ ಹೊಲದ ಮೇಲೆ ಯಾವುದೇ ರೀತಿಯಾದಂತಹ ಸಾಲವನ್ನು ಪಡೆಯಲು ಈ ದಾಖಲಾತಿಯು ಮುಖ್ಯ ಪಾತ್ರವನ್ನು ನೆರವೇರಿಸುತ್ತದೆ.
ಇದು ನಿಮ್ಮ ಹೊಲದ ಮಾಲೀಕತ್ವವನ್ನು ಸ್ಪಷ್ಟಪಡಿಸುವ   ಭೂ ದಾಖಲೆಯಾಗಿದೆ.

ಪಹಣಿಯಲ್ಲಿ ಏನೆಲ್ಲ ಮಾಹಿತಿ ಇರುತ್ತದೆ ??
ಈ ಕಂದಾಯ ಭೂಮಿ ಪತ್ರದಲ್ಲಿ  ರೈತನ ಹೊಲದ ಸರ್ವೇ ನಂಬರ್ , ಹಿಸ್ಸಾ ನಂಬರ್ ಮತ್ತು ರೈತನಿಗೆ ಸಂಬಂಧಪಟ್ಟಂತ  ಎಲ್ಲಾ ಭೂಕಂದಾಯದ  ವಿವರವನ್ನು ಹೊಂದಿರುತ್ತದೆ.
ನಿಮ್ಮ ಹೊಲದ ಸಂಪೂರ್ಣ ಉದ್ದಗಲವನ್ನು, ವಿಸ್ತೀರ್ಣವನ್ನು  ಈ ದಾಖಲಾತಿ ಹೊಂದಿರುತ್ತದೆ.
ಇದಲ್ಲದೆ  ನಿಮ್ಮ ಹೊಲದಲ್ಲಿರುವ ಮರಗಳ ಸಂಖ್ಯೆ, ಮಣ್ಣಿನ ವರ್ಗಿಕರಣ  ಮತ್ತು ಮಿಶ್ರ ಬೆಳೆಗಳ ವಿವರಗಳನ್ನು ಕೂಡ  ಹೊಂದಿರುತ್ತದೆ.
ಭೂಮಿಯ ಮೇಲಿನ ಸರಕಾರ ಹಾಗೂ ಮಾಲೀಕನ ಹಕ್ಕುಗಳೇನು ಎಂದು ತಿಳಿಸುತ್ತದೆ.

ಪಹಣಿ  ಹೇಗೆ ಪಡೆಯುವುದು ??
ರೈತನು  ತನಗೆ ಬೇಕಾದಾಗ  ತನ್ನ ಹತ್ತಿರ ಇರುವ ಯಾವುದೇ ಕಂಪ್ಯೂಟರ್ ಸೆಂಟರ್ನಿಂದ, ಕೇವಲ 15 ರೂಪಾಯಿ ಕೊಟ್ಟು ತನ್ನ ಹೊಲದ ಉದ್ಧಾರವನ್ನು ಪ್ರಿಂಟ್ ತೆಗೆದುಕೊಳ್ಳಬಹುದು. ಕೇವಲ ತನ್ನ ಊರು ತನ್ನ ಗ್ರಾಮ ಹಾಗೂ ಸರ್ವೇ ನಂಬರ್ ಮೂಲಕ  ಯಾವುದೇ ಕಂಪ್ಯೂಟರ್ ಸೆಂಟರ್ ನಿಂದ  ಈ ಭೂ ದಾಖಲಾತಿಯನ್ನು ಪಡೆದುಕೊಳ್ಳಬಹುದು.

ಇದಲ್ಲದೆ  ಎಲ್ಲ ರೈತರು ಈಗ  ತಮ್ಮ ಮೊಬೈಲ್ ನಲ್ಲಿ  ಕ್ಷಣ  ಮಾತ್ರದಲ್ಲಿ ತಮ್ಮ ಹೊಲದ   ಉತಾರವನ್ನು ತೆಗೆದುಕೊಳ್ಳಬಹುದು. ಇದಕ್ಕೆ ರೈತರು ನಾವು ಹೇಳುವ ಪ್ರತಿ ಹಂತವನ್ನು ಅನುಸರಿಸುತ್ತಾ ಹೋಗಬೇಕು, ಇದರಿಂದ ನೀವು ಯಾವುದೇ ಕಂಪ್ಯೂಟರ್ ಸೆಂಟರ್ ಗೆ ಹೋಗುವ ಅವಶ್ಯಕತೆ ಇರುವುದಿಲ್ಲ. 

ಹಾಗಾದರೆ ಬನ್ನಿ ಈ ಲೇಖನದಲ್ಲಿ ನಿಮ್ಮೆಲ್ಲರಿಗೂ  ಕೇವಲ ಒಂದೇ ನಿಮಿಷದಲ್ಲಿ ನಿಮ್ಮ ಹೊಲದ ಉತಾರವನ್ನು , ನಿಮ್ಮ ಮೊಬೈಲಿನಲ್ಲಿ  ಹೇಗೆ ಡೌನ್ಲೋಡ್ ಮಾಡಬೇಕೆಂಬುದನ್ನು  ತಿಳಿಸಿಕೊಡುತ್ತೇವೆ. ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ನಿಮ್ಮ ಹೊಲದ ಉತಾರವನ್ನು ನಿಮ್ಮ ಮೊಬೈಲ್ ನಲ್ಲಿ ತೆಗೆಯಲು ನೀವು ಮೊದಲು ಭಾರತ ಸರ್ಕಾರ ನಿರ್ಮಿಸಿದ ಅಧಿಕೃತ ವೆಬ್ಸೈಟ್  ಗೆ ಭೇಟಿ ನೀಡಬೇಕು.
https://rtc.karnataka.gov.in/Service78/

ಈ ಮೇಲ್ಕಂಡ  ಅಧಿಕೃತ ವೆಬ್ಸೈಟ್ ಅನ್ನು  ಕೇಂದ್ರ ಸರಕಾರ ಹಾಗೂ ರಾಜ್ಯ ಸರ್ಕಾರವು ಜಂಟಿಯಾಗಿ ನಿರ್ಮಾಣ ಮಾಡಿದ್ದು , ರೈತನಿಗೆ ಯಾವುದೇ ತರಹದ  ಪಹಣಿಯನ್ನು ತೆಗೆಯಲು ತೊಂದರೆ  ಆಗುವುದಿಲ್ಲ.

ನಂತರ ರೈತ ಈ ಮೇಲ್ಕಂಡ ವೆಬ್ಸೈಟ್ನಲ್ಲಿ ಲಾಗಿನ್ ಆಗಿ, ತನ್ನ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಬೇಕು , ನಂತರ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು , ನಂತರ ತಾಲೂಕು ಹಾಗೂ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಬೇಕು.  ನಂತರ ರೈತ ತನ್ನ ಸರ್ವೇ ನಂಬರ್  ಹಾಗೂ ಹಿಸ್ಸಾ ನಂಬರ್ ಮುಖಾಂತರ  ತನ್ನ ಪಹಣಿಯನ್ನು ತನ್ನ ಮೊಬೈಲ್ ನಲ್ಲಿ  ಸುಲಭವಾಗಿ  ಡೌನ್ಲೋಡ್ ಮಾಡಕೊಳ್ಳಬಹುದು.

ಮಾಹಿತಿ ಉಪಯೋಗ ಅನಿಸಿದ್ದಲ್ಲಿ  ಈ ಲೇಖನವನ್ನು ತಪ್ಪದೇ ಶೇರ್ ಮಾಡಿ , ಹಾಗೂ ದಿನನಿತ್ಯ ಇದೇ ರೀತಿ ಕೃಷಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ.

ಎಲ್ಲ ರೈತ ಬಾಂಧವರಿಗೂ  ಅಧಿಕೃತ ವೆಬ್ಸೈಟ್ ಭೂಮಿ ಮಾಹಿತಿಯಿಂದ ನಮಸ್ಕಾರಗಳು, ಭಾರತ ಒಂದು ಕೃಷಿ ಆಧರಿತ  ದೇಶವಾಗಿದ್ದು , ರೈತನ ಬೆಳವಣಿಗೆಯೇ ದೇಶದ ಬೆಳವಣಿಗೆ ಎಂದರೆ ತಪ್ಪಾಗಲಾರದು. ಆದರೆ ರೈತ  ಸಮಾಜದಲ್ಲಿ ಅನೇಕವಾಗಿ  ಶೋಷಣೆಗೆ ಒಳಗಾಗುತ್ತಿದ್ದಾನೆ , ಅತಿವೃಷ್ಟಿ ಅನಾವೃಷ್ಟಿ , ಮಾರುಕಟ್ಟೆಯಲ್ಲಿ ಉತ್ತಮವಾದ ಬೆಳೆ ಸಿಗಲಾರದ್ದು ಹೀಗೆ ನಾನ ಕಾರಣಗಳಿಂದ ರೈತ  ಸಂಕಷ್ಟಕ್ಕೆ ಅನುಭವಿಸುತ್ತಿದ್ದಾನೆ .

Thank you for reading this post, don't forget to subscribe!

Recent Posts

ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆದುಕೊಳ್ಳುವವರಿಗೆ ಶಾಕಿಂಗ್ ನ್ಯೂಸ್! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು  ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…

55 years ago

Gruhalakshmi: ಗೃಹಲಕ್ಷ್ಮಿ ಯೋಜನೆಯ 16 ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…

55 years ago

KSRTC:ಕೆ ಎಸ್ ಆರ್ ಟಿ ಸಿ ಬಸ್ ದರ ಏರಿಕೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…

55 years ago

ತೊಗರಿ ಬೆಳೆಗಾರರಿಗೆ ಭರ್ಜರಿ ಸಿಹಿ ಸುದ್ದಿ! ತೊಗರಿಗೆ ಭರ್ಜರಿ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ ಸರ್ಕಾರ!

ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ…

55 years ago

ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ದಿನಾಂಕ ವಿಸ್ತರಣೆ ! ಈಗಲೇ ಈ ಕೆಲಸ ಮಾಡಿ

ಇದೀಗ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶುಭ ಸುದ್ದಿಯನ್ನು ನೀಡಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರು ಇದೀಗ ತಮ್ಮ ಬಿಪಿಎಲ್…

55 years ago

PM Awas Yojana: ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ 2.5 ಲಕ್ಷ ರೂಪಾಯಿ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅರ್ಹ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಫಲಾನುಭವಿಗಳಿಗೆ 1.30…

55 years ago