ಸ್ನೇಹಿತರೆ ತೆಂಗಿನಕಾಯಿಯನ್ನು ನಮ್ಮ ಕರ್ನಾಟಕ ರಾಜ್ಯದ ಎಲ್ಲಾ ಕಡೆಯಲ್ಲೂ ಬೆಳೆಯುತ್ತಿದ್ದು ಈ ನುಸಿ ಪೀಡೆ ರೋಗವು ಇಳುವರಿಗೆ ತುಂಬಾ ದಕ್ಕೆ ಉಂಟು ಮಾಡುತ್ತಿದ್ದು ರೈತರು ತುಂಬಾ ನಷ್ಟಕ್ಕೆ ಈಡಾಗುತ್ತಿದ್ದಾರೆ. ಈ ರೋಗವು Eriophid mite ಎಂಬ ಸೂಕ್ಷ್ಮಾಣು ಜೀವಿಯಿಂದ ಬರುತ್ತದೆ ಇದನ್ನು ನುಸಿ ರೋಗ ಎಂದು ಕರೆಯುತ್ತಾರೆ.
ಸ್ನೇಹಿತರೆ ತೆಂಗಿನಕಾಯಿಯನ್ನು ನಮ್ಮ ಕರ್ನಾಟಕ ರಾಜ್ಯದ ಎಲ್ಲಾ ಕಡೆಯಲ್ಲೂ ಬೆಳೆಯುತ್ತಿದ್ದು ಈ ನುಸಿ ಪೀಡೆ ರೋಗವು ಇಳುವರಿಗೆ ತುಂಬಾ ದಕ್ಕೆ ಉಂಟು ಮಾಡುತ್ತಿದ್ದು ರೈತರು ತುಂಬಾ ನಷ್ಟಕ್ಕೆ ಈಡಾಗುತ್ತಿದ್ದಾರೆ. ಈ ರೋಗವು Eriophid mite ಎಂಬ ಸೂಕ್ಷ್ಮಾಣು ಜೀವಿಯಿಂದ ಬರುತ್ತದೆ ಇದನ್ನು ನುಸಿ ರೋಗ ಎಂದು ಕರೆಯುತ್ತಾರೆ. ತೆಂಗಿನಕಾಯಿಯಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ರೋಗ ಮತ್ತು ಅತಿ ನಷ್ಟವನ್ನು ಉಂಟು ಮಾಡುತ್ತದೆ. ಹಾಗಾದರೆ ಈ ಆರ್ಟಿಕಲ್ ಮುಖಾಂತರ ಇದಕ್ಕೆ ಪರಿಹಾರವನ್ನು ತಿಳಿದುಕೊಳ್ಳೋಣ ಬನ್ನಿ.
ರೋಗದ ಲಕ್ಷಣಗಳನ್ನು ನೋಡುವುದಾದರೆ ತೆಂಗಿನ ಕಾಯಿಯು ಒಣಗಿದಂತೆ ಮತ್ತು ಕಾಯಿಯ ಸುತ್ತಲೂ ಅಂಟು ಅಂಟಿಕೊಂಡಿರುತ್ತದೆ ಕೆಲವೊಂದು ಸಾರಿ ತೆಂಗಿನ ಒಳಭಾಗದಲ್ಲಿ ಕೊಬ್ಬರಿ ಮತ್ತು ಎಳೆ ನೀರಿನ ಬದಲಾಗಿ ದ್ರವರೂಪದ ಅಂಟು ಬೆಳೆದುಕೊಂಡಿರುತ್ತದೆ.
ಇದನ್ನೂ ಓದಿ: ರೈತರೆ ನಿಮ್ಮ ಮೊಬೈಲಿನಲ್ಲಿ ಸೋಲಾರ್ ಪಂಪ್ ಸೆಟ್ಟಿಗೆ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ ನೋಡಿ
ಪರಿಹಾರಗಳು : ಕೀಟನಾಶಕ ಸಿಂಪಡಣೆ
ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದು ಸಿಂಪಡನೆ ಮಾಡಬೇಕು
ಮೊನೊ ಕ್ರೊಟೋಫಾಸ್
ಟ್ರೈಜೋಫಾಸ್
ಎಥಿಯೊನ್
ಕಾರ್ಬೋಸಲ್ಫಾನ್
ತೆಂಗಿನ ಮರಗಳು ತುಂಬಾ ಎತ್ತರ ಇರುವುದರಿಂದ ಇವುಗಳನ್ನು ಸಿಂಪಡಣೆ ಮಾಡಲು ತುಂಬಾ ತೊಂದರೆ ಆಗುತ್ತೆ ಅದರಿಂದ ಕೆಲವು ರೈತರು ಹಾಗೆ ಬಿಡುತ್ತಾರೆ ಅದಕ್ಕೆ ಇನ್ನೊಂದು ಪರಿಹಾರ ಎಂದರೆ ಕೀಟನಾಶಕವನ್ನು ಕಲ್ಲು ಉಪ್ಪಿನ ಜೊತೆಗೆ ಮಿಶ್ರಣ ಮಾಡಿ ಒಂದು ಹತ್ತಿ ಬಟ್ಟೆಯಲ್ಲಿ ಕಟ್ಟಿ ಹೂ ಬಿಡುವ ಅಥವಾ ಕಾಯಿ ಬಿಡುವ ಸಂದರ್ಭದಲ್ಲಿ ಸುಳಿಯಲ್ಲಿ ಇಡಬೇಕು ಆ ಉಪ್ಪು ಹನಿ ಹನಿಯಾಗಿ ಕರಗಿ ಈ ರೋಗ ಹರಡುವುದನ್ನು ತಡೆಗಟ್ಟುತ್ತದೆ.
ಇನ್ನೊಂದು ಪರಿಹಾರವೆಂದರೆ ಸೀಮೆಎಣ್ಣೆಯನ್ನು ಒಂದು ಬಾಟಲಿನಲ್ಲಿ ಹಾಕಿ ಮೇಲ್ಭಾಗದಲ್ಲಿ ಒಂದು ರಂದ್ರವನ್ನು ಮಾಡಿ ಅದಕ್ಕೆ ದಾರವನ್ನು ಕಟ್ಟಿ ತೆಂಗಿನಕಾಯಿ ಗೊನೆಗೆ ನೇತು ಹಾಕಿದರೆ ಸೀಮೆಎಣ್ಣೆ ಗಾಳಿಯಲ್ಲಿ ಎಲ್ಲ ಕಡೆ ಹರಡಿ ನುಸಿ ಕೀಟವನ್ನು ನಿಯಂತ್ರಣ ಮಾಡುತ್ತದೆ.
ಇದನ್ನೂ ಓದಿ: SUBSIDY FOR AGRICULTURAL EQUIPMENT – ವ್ಯವಸಾಯ ಯಂತ್ರೋಪಕರಣಗಳ ಮೇಲಿನ ಸಬ್ಸಿಡಿ ಪಡೆಯಲು ತಕ್ಷಣ ಅರ್ಜಿ ಸಲ್ಲಿಸಿ
ಮತ್ತೊಂದು ಪರಿಹಾರ ನೋಡುವುದಾದರೆ ಸಾಮಾನ್ಯವಾಗಿ ಹೊಲದಲ್ಲಿ ಬೇವಿನ ಮರಗಳು ಇದ್ದೇ ಇರುತ್ತವೆ. ಆ ಬೇವಿನ ಮರದ ಬೀಜವನ್ನು ಪುಡಿ ಮಾಡಿ ವರ್ಷದಲ್ಲಿ ಎರಡು ಬಾರಿ ತೆಂಗಿನ ಬೇರಿಗೆ ಹಾಕಬೇಕು ಇದನ್ನು ಯಾವುದೇ ಖರ್ಚಿಲ್ಲದೆ ಜೀರೋ ಬಜೆಟ್ ನಿಂದ ಪರಿಹಾರ ಮಾಡಿಕೊಳ್ಳಬಹುದು ಅದರ ಜೊತೆಗೆ ಕಲ್ಲುಪ್ಪು ಮಿಶ್ರಣ ಮಾಡಬೇಕು. ಹೀಗೆ ಮಾಡಿದರೆ ತೆಂಗಿನಕಾಯಿಯ ನುಶಿ ರೋಗವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.
ಮಿಡಿಯಾ ಚಾಣಕ್ಯ ಮಾಹಿತಿ ತಾಣಕ್ಕೆ ಭೇಟಿ ನೀಡಿದ ಎಲ್ಲಾ ರೈತರಿಗೂ ಧನ್ಯವಾದಗಳು. ಇದೇ ರೀತಿಯ ಉಪಯುಕ್ತ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್ ಮೂಲಕ ನೀವು ನಮ್ಮ ವಾಟ್ಸಪ್ ಚಾನೆಲ್ ಗೆ ಸೇರಬಹುದು.
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ 👇👇👇👇👇 https://whatsapp.com/channel/0029VaDOwCTKQuJKSwo7D63M
ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…
ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…
ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…
ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ…
ಇದೀಗ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶುಭ ಸುದ್ದಿಯನ್ನು ನೀಡಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರು ಇದೀಗ ತಮ್ಮ ಬಿಪಿಎಲ್…
ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅರ್ಹ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಫಲಾನುಭವಿಗಳಿಗೆ 1.30…