ಎಲ್ಲ ರೈತರಿಗೂ ಅಧಿಕೃತ ವೆಬ್ಸೈಟ್ ಆದ ಮೀಡಿಯಾಚಾಣಕ್ಯ ವತಿಯಿಂದ ನಮಸ್ಕಾರಗಳು. ಗೃಹ ಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ಬಿಡುಗಡೆಯಾಗಿದೆ ಅದರ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಲಿಂಕ್ ಇಲ್ಲಿದೆ ಮತ್ತು ನಿಮ್ಮ ಖಾತೆಗೆ ಹಣ ಬರದಿದ್ದರೆ ಈ ಕೆಲಸ ತಪ್ಪದೇ ಮಾಡಿ.
Thank you for reading this post, don't forget to subscribe!
ಕರ್ನಾಟಕ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯ ಮೂಲಕ ಈಗಾಗಲೇ ₹ 12,000 ಪ್ರತಿ ಮಹಿಳೆಗೆ ತಲುಪಿಸಿದೆ. ಅವರಿಗೆ ಮತ್ತೊಂದು ಸಿಹಿ ಸುದ್ದಿ ಅದೇನೆಂದರೆ ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯಾಗಿದ್ದು ಎಲ್ಲಾ ಮಹಿಳೆಯರ ಖಾತೆಗೆ ಡಿಬಿಟಿ ಮೂಲಕ ತಲುಪಿಸಲಾಗಿದೆ.
Thank you for reading this post and do not forget to subscribe
ಈ ಒಂದು ಯೋಜನೆ ಅಡಿಯಲ್ಲಿ 1.2 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಅಡಿ ಹಣವನ್ನು ನೀಡಲಾಗುತ್ತಿದ್ದು ಅದರಲ್ಲಿ ಶೇಕಡಾ ಹತ್ತರಷ್ಟು ಮಹಿಳೆಯರಿಗೆ ಹಣ ಜಮಾ ಆಗುತ್ತಿಲ್ಲ. ಈ ಕುರಿತು ಮಹಿಳೆಯರಿಗೆ ಬೇಕಾದ ಎಲ್ಲ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಮಾರ್ಚ್ 23ರ ರಂದು ಮಾರ್ಚ್ ತಿಂಗಳ ಹಣ ಈಗಾಗಲೇ ಬಿಡುಗಡೆಯಾಗಿದ್ದು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ. 5 ಲಕ್ಷ ಮಹಿಳೆಯರ ಖಾತೆಗೆ ಹಣ ಬಂದು ಸೇರುವ ನಿಟ್ಟಿನಲ್ಲಿದೆ.
D B T app ಲಿಂಕ್ –https://play.google.com/store/apps/details?id=com.dbtkarnataka
ಇದನ್ನೂ ಓದಿ – ರೈತರಿಗೆ ಗುಡ್ ನ್ಯೂಸ್: ಬೆಳೆಹಾನಿ ಪರಿಹಾರ ಸ್ಟೇಟಸ್ ಚೆಕ್ ಮಾಡುವ ಹೊಸ ಲಿಂಕ್ ಇಲ್ಲಿದೆ ನೋಡಿ…!

ಹಂತ ಹಂತವಾಗಿ ಎಲ್ಲಾ ಜಿಲ್ಲೆಯ ಮಹಿಳೆಯರ ಖಾತೆಗೆ ಹಣ ಬಂದು ಸೇರುವುದು ನಿಶ್ಚಯವಾಗಿದ್ದು 6ನೇ ಕಂತಿನ ಹಣ ಪಡೆದಿರುವ ಮಹಿಳೆಯರಿಗೆ 7ನೇ ಕಂತಿನ ಹಣ ಬಂದಿಲ್ಲ ಎಂದು ಚಿಂತೆ ಮಾಡುವ ಅಗತ್ಯವಿಲ್ಲ. ಈ ಒಂದು ಮೊತ್ತ ದೊಡ್ಡದಾಗಿರುವುದರಿಂದ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಮತ್ತು ಮಾರ್ಚ್ 31ರ ಒಳಗೆ ಎಲ್ಲಾ ಖಾತೆಗೆ ಬಂದು ತಲುಪುತ್ತದೆ.

ಪೆಂಡಿಂಗ್ ಹಣ ಜಮಾ ಆಗದೆ ಇರಲು ಕಾರಣ.
- ಆಧಾರ್ ಕಾರ್ಡ್ ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯಲ್ಲಿ ಬೇರೆ ಬೇರೆ ಹೆಸರು ಮತ್ತು ವಿಳಾಸ ಇರುವುದು.
- ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಿಂಕ್ ಮಾಡದೆ ಇರುವುದು.
- ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಮಾಡಿಸದೆ ಇರುವುದು.
- ಬ್ಯಾಂಕ್ ಖಾತೆಗೆ ಈ ಕೆವೈಸಿ ಮಾಡಿಸದೆ ಇರುವುದು.
- ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದೆ ಇರುವುದು.
- ಅರ್ಜಿ ಸಲ್ಲಿಸುವಾಗ ತಾಂತ್ರಿಕವಾಗಿ ಸಲ್ಲಿಕೆ ಆಗದೆ ಇರುವುದು.
ಪೆಂಡಿಂಗ್ ಹಣ ಪಡೆಯುವುದು ಹೇಗೆ?
ಇದುವರೆಗೂ ಒಂದು ಕಂತಿನ ಹಣ ಮಹಿಳೆಯರ ಖಾತೆಗೆ ಬರದಿದ್ದರೆ ಅದಕ್ಕೆ ಮುಖ್ಯ ಕಾರಣ ಬ್ಯಾಂಕ್ ಖಾತೆ ಆಧಾರ್ ಕಾರ್ಡಿಗೆ ಅಥವಾ ಎನ್ಪಿಸಿಐಡಿ ಗೆ ಮ್ಯಾಪಿಂಗ್ ಆಗದಿರುವುದು ಆಗಿರಬಹುದು. ಆದ್ದರಿಂದ ಕಡ್ಡಾಯವಾಗಿ ನಿಮ್ಮ ಖಾತೆಗೆ ಆಧಾರ್ ಲಿಂಕ್ ಮಾಡಿ ಮತ್ತು NPCI ಮ್ಯಾಪಿಂಗ್ ಅನ್ನು ಮಾಡಿಸಿ.

ನಿಮ್ಮ ಒಂದು ಆಧಾರ್ ಕಾರ್ಡ್ 10 ವರ್ಷಕ್ಕಿಂತ ಹಳೆಯದಾಗಿದ್ದರೆ ತಕ್ಷಣ ಅದರಲ್ಲಿ ನಿಮ್ಮ ಹೆಸರು ಮತ್ತು ಲಿಂಗ, ವಿಳಾಸ ,ಜನ್ಮ ದಿನಾಂಕ ಇತ್ಯಾದಿ ವಿವರಗಳನ್ನು ನಿಮ್ಮ ಹತ್ತಿರದ ತಿದ್ದುಪಡಿ ಕೇಂದ್ರದಲ್ಲಿ ಅಪ್ಡೇಟ್ ಮಾಡಿಸಿ. ನೀವು ಮೊಬೈಲ್ ಮೂಲಕ ಆನ್ಲೈನ್ನಲ್ಲಿ ಕೂಡ ನೀವು ಆಧಾರ್ ಕಾರ್ಡ್ ನವೀಕರಣಕ್ಕೆ ಜೂನ್ 14ರ ವರೆಗೆ ಆಧಾರ್ ಕಾರ್ಡ್ ಅಪ್ಡೇಟಿಗೆ ಸರ್ಕಾರ ಅವಕಾಶ ಕೊಟ್ಟಿದೆ ಮತ್ತು ಆಧಾರ ಕಾರ್ಡ್ ಅಪ್ಡೇಟ್ ಸಂಪೂರ್ಣ ಉಚಿತವಾಗಿದೆ.
ಇದನ್ನೂ ಓದಿ: ಅನ್ನ ಭಾಗ್ಯ ಯೋಜನೆ: ಈ ತಿಂಗಳ ಅಕ್ಕಿ ಹಣ ಜಮಾ ಆಗಿದೆ ಎಂದು ತಿಳಿದುಕೊಳ್ಳಲು ಇಲ್ಲಿದೆ ಲಿಂಕ್
ನಿಮ್ಮ ಎಲ್ಲ ಪತ್ರಗಳು ಸರಿ ಇದ್ದರು ನಿಮಗೆ ಹಣ ಬರದಿದ್ದರೆ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೋಗಿ ನಿಮ್ಮ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಗೃಹಲಕ್ಷ್ಮಿ ಅರ್ಜಿಯ ಸ್ವೀಕೃತ ಎಲ್ಲ ದಾಖಲೆಗಳನ್ನು ಕೊಟ್ಟು ನಿಮ್ಮ ಖಾತೆಗೆ ಯಾಕೆ ಹಣ ಬಂದಿಲ್ಲ ಎಂದು ನೀವು ಮಾಹಿತಿಯನ್ನು ಪಡೆಯಬಹುದು.ಸಿಡಿಪಿಯೋ (CDPO)ಕಚೇರಿಯಲ್ಲಿ ನಿಮ್ಮ ಒಂದು ಅರ್ಜಿ ಅನುಮೋದನೆ ಪ್ರಕ್ರಿಯೆ ಪೂರ್ಣಗೊಳ್ಳದಿದ್ದಲ್ಲಿ ಅದನ್ನು ಪೂರ್ಣಗೊಳಿಸಿ ಇದಾದ ಬಳಿಕ ನಿಮ್ಮ ಖಾತೆಗೆ ಕೆ ವೈ ಸಿ ಪ್ರಕ್ರಿಯೆ ಕೂಡ ಪೂರ್ಣಗೊಂಡಿದ್ದರು ನಿಮ್ಮ ಖಾತೆಗೆ ಇವಾಗ ಹಣ ಜಮಾ ಆಗುತ್ತದೆ.
ಸಿಡಿಪಿಯೋ (CDPO)ಕಚೇರಿಯಲ್ಲಿ ನಿಮ್ಮ ಒಂದು ಅರ್ಜಿ ಅನುಮೋದನೆ ಪ್ರಕ್ರಿಯೆ ಪೂರ್ಣಗೊಳ್ಳದಿದ್ದಲ್ಲಿ ಅದನ್ನು ಪೂರ್ಣಗೊಳಿಸಿ ಇದಾದ ಬಳಿಕ ನಿಮ್ಮ ಖಾತೆಗೆ ಕೆ ವೈ ಸಿ ಪ್ರಕ್ರಿಯೆ ಕೂಡ ಪೂರ್ಣಗೊಂಡಿದ್ದರು ನಿಮ್ಮ ಖಾತೆಗೆ ಇವಾಗ ಹಣ ಜಮಾ ಆಗುತ್ತದೆ.
ಅಧಿಕೃತ ವೆಬ್ಸೈಟ್ ಆದ ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿದ ಎಲ್ಲಾ ರೈತರಿಗೂ ಧನ್ಯವಾದಗಳು ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್ ಮೂಲಕ ನೀವು ನಮ್ಮ ಒಂದು ವಾಟ್ಸಾಪ್ ಚಾನೆಲ್ ಗೆ ಸೇರಬಹುದು. WhatsApp channel ಲಿಂಕ್ 👇👇👇👇👇
https://whatsapp.com/channel/0029VaDOwCTKQuJKSwo7D63M