Categories: informationMotivation

ಈ 3 ಜನರಿಂದ ಸದಾ ದೂರ ಇರಬೇಕೆಂದು ಚಾಣಕ್ಯ ಹೇಳಿದ್ದಾನೆ !!

Spread the love

ಚಾಣಕ್ಯ ನೀತಿ :
ಸ್ನೇಹಿತರೆ ಜನರು ಯಾವಾಗಲೂ ತಮ್ಮ ಸ್ವಭಾವಕ್ಕೆ ಸರಿಹೊಂದುವ ಜನರೊಂದಿಗೆ ಬೆರೆಯಲು ಇಷ್ಟಪಡುತ್ತಾರೆ.
ಇನ್ನು ತಮ್ಮ ಸ್ವಭಾವಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುವ ಜನರೊಂದಿಗೆ ಸ್ವಾಭಾವಿಕವಾಗಿ ಅವರು ದೂರವಿರಲು ಬಯಸುತ್ತಾರೆ.
ರಾಜ್ಯನೀತಿ ಮತ್ತು ಕೂಟಾ ನೀತಿಗಳ ಚತುರ ಎಂದೇ ಖ್ಯಾತಿ ಹೊಂದಿರುವ ಆಚಾರ್ಯ ಚಾಣಕ್ಯರು ಹಲವು ವರ್ಷಗಳ ಒಂದೇ ಮನುಷ್ಯನ ಸ್ವಭಾವದ ಬಗ್ಗೆ ತಮ್ಮ ಅರ್ಥಶಾಸ್ತ್ರದ ಕೃತಿಯಲ್ಲಿ ತಿಳಿಸಿದ್ದಾರೆ.
ಆ ಎಲ್ಲಾ ಸಂಗತಿಗಳು ಕೇವಲ ಆ ಕಾಲಕ್ಕೆ ಅಷ್ಟೇ ಸೀಮಿತವಾಗಿರದೆ ಪ್ರಸ್ತುತ ದಿನಗಳಲ್ಲಿ ಅವು ಅತ್ಯಂತ ಮಹತ್ವ ಪಡೆದುಕೊಂಡಿವೆ.
ಬನ್ನಿ ಇವತ್ತಿನ ಈ ಆರ್ಟಿಕಲ್‌ನಲ್ಲಿ ಆಚಾರ್ಯ ಚಾಣಕ್ಯರು
ಹೇಳಿರುವ ಆ ಯಾವುದೇ ಕಾರಣಕ್ಕೂ ಗೆಳೆತನ ಮಾಡಬಾರದ ಆ ಮೂರು ಜನ ಯಾರು ಎಂಬುದನ್ನು ಈ ಆರ್ಟಿಕಲ್‌ನಲ್ಲಿ ತಿಳಿದುಕೊಳ್ಳೋಣ.

Thank you for reading this post, don't forget to subscribe!

1) ಮೊದಲನೆಯದಾಗಿ ಆಚಾರ ಚಾಣಕ್ಯರು ಹೇಳುವಂತೆ ಮೂರ್ಖನು ಪುರುಷನೇ ಆಗಲಿ ಅಥವಾ ಮಹಿಳೆಯೇ ಆಗಲಿ ಅವರಿಗೆ ಉಪದೇಶ ಮಾಡುವುದಾಗಲಿ ಮಾಡಬಾರದೆಂದು ಹೇಳಿದ್ದಾನೆ. ಅದು ಹೊಳೆಯಲ್ಲಿ ಹುಣಿಸೆ ಹಣ್ಣು ತೊಳೆದಂಗಾಗುತ್ತದೆ. ಏಕೆಂದರೆ ನೀವು ನೀಡುವ ಉಪದೇಶಕ್ಕೆ ಅವರದೊಂದು ಅರ್ಥವಿಲ್ಲದ ವಾದ ಇದ್ದೇ ಇರುತ್ತದೆ ಮತ್ತು ನೀವು ಹೇಳುವ ಉಪದೇಶವನ್ನು ಅವರು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಇದರಿಂದ ನಿಮ್ಮ ಅಮೂಲ್ಯವಾದ ಸಮಯ ವ್ಯರ್ಥವಾಗುತ್ತದೆ.ಆದ್ದರಿಂದ ಚಾಣಕ್ಯರು ಹೇಳುತ್ತಾರೆ ಯಾವುದೇ ಕಾರಣಕ್ಕೂ ಮೂರ್ಖರಿಗೆ ಉಪದೇಶ ಮಾಡಬಾರದೆಂದು.

2) ಇನ್ನು ಎರಡನೆಯದಾಗಿ ದುಷ್ಟ ವ್ಯಕ್ತಿಗಳ ಪಾಲನೆ ಪೋಷಣೆ ಮಾಡಬಾರದೆಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಹೌದು ಸ್ನೇಹಿತರೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡವುದು ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕೆಲಸ ಎಂದು ಹೇಳುತ್ತಾರೆ. ಆದರೆ ಆಚಾರ್ಯ ಚಾಣಕ್ಯರು ಪ್ರಕಾರ ದುಷ್ಟ ವ್ಯಕ್ತಿಗಳು ಅಥವಾ ಕ್ರೂರ ವ್ಯಕ್ತಿಗಳು ಎಷ್ಟು ಕಷ್ಟದಲ್ಲಿದ್ದರೂ ಅವರಿಗೆ ಸಹಾಯ ಹಸ್ತ ಚಾಚಬಾರದೆಂದು ಹೇಳುತ್ತಾನೆ ಯಾಕೆಂದರೆ ನೀವು ಹಾವಿಗೆ ಎಷ್ಟು ಹಾಲು ಹಾಕಿ ಪ್ರೀತಿಯಿಂದ ಸಾಕಿದರು ಅದು ತನ್ನ ಹುಟ್ಟು ಗುಣವಾಗಿರುವ ಕಚ್ಚುವ ಸ್ವಭಾವವನ್ನು ಬಿಡುವುದಿಲ್ಲ.

3) ಇನ್ನು ಮೂರನೆಯದಾಗಿ ಸದಾ ದುಃಖಿತರಾಗಿರುವ ಜನರಿಂದ ಯಾವಾಗಲೂ ದೂರವಿರಿ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಯಾಕೆಂದರೆ ಚಾಣಕ್ಯರು ಹೇಳುವ ಹಾಗೆ ಮನುಷ್ಯನ ಜನ್ಮವೂ ಅತ್ಯಮೂಲ್ಯವಾದದ್ದು ಅದು ಭಗವಂತನಿಂದ ಸಿಕ್ಕ ವರವಾಗಿದೆ. ಹೀಗಿದ್ದಾಗ್ಯೂ ಕೆಲವರು ತಮ್ಮ ಕಷ್ಟಗಳಿಗೆ ಅಂಜಿ ಸದಾ ದುಃಖಿತರಾಗಿ ಭಗವಂತನ ಮೇಲೆ ಆಪಾದನೆ ಮಾಡುತ್ತಾರೆ. ಇಂತಹ ಜನರೊಂದಿಗೆ ನೀವು ಸ್ನೇಹ ಮಾಡಿದ್ದಲ್ಲಿ ಅವರು ನಿಮ್ಮಲ್ಲೂ ಅದೇ ಭಾವನೆ ಉಂಟಾಗುವಂತೆ ಮಾಡುತ್ತಾರೆ ಮತ್ತು ನಿಮ್ಮಲ್ಲಿ ನೆಗೆಟಿವ್ ವಿಚಾರಗಳು ಹೆಚ್ಚಾಗುವಂತೆ ಮಾಡುತ್ತಾರೆ. ಆದ್ದರಿಂದ ಅಂತಹ ಜನರೊಂದಿಗೆ ದೂರವಿರಬೇಕೆಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.

ಪ್ರೀತಿ ನಿಮ್ಮ ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಸಂಶೋಧನೆಯಲ್ಲಿ ಆಶ್ಚರ್ಯಕರ ಸಂಗತಿಗಳು ಬಹಿರಂಗ

ಪ್ರೀತಿ ಎನ್ನುವುದು ಮಾಯೆ. ಆ ಮಾಯೆ ಇಲ್ಲದೆ ಬದುಕಿಲ್ಲ. ಬದುಕು ಸುಂದವಾಗಿ ಇರಬೇಕು ಎಂದರೆ ಪ್ರೀತಿಯ ಮಾಯೆ ನಮ್ಮನ್ನು ಸುತ್ತುತ್ತಿರಬೇಕು. ನಿಜ, ಪ್ರೀತಿಗಾಗಿ ಮನುಷ್ಯ ಹಾತೊರೆಯುತ್ತಾನೆ. ನಮಗಾಗಿ ಒಂದು ಜೀವ ಇದೆ, ನಮ್ಮ ಎಲ್ಲಾ ಅಗತ್ಯತೆಗಳಿಗೆ ಆದ್ಯತೆಯನ್ನು ನೀಡಿ ರಕ್ಷಣೆಯ ಭಾವವನ್ನು ನೀಡುತ್ತದೆ ಎನ್ನುವ ನಂಬಿಕೆಯೇ ಜೀವಕ್ಕೊಂದು ಬೆಳಕು.ಈ ಪ್ರೀತಿಯು ಉಳಿದಿರುವುದೇ ನಂಬಿಕೆ, ತಿಳುವಳಿಕೆ ಮತ್ತು ಕಾಳಜಿಯ ಮೇಲೆ ಎಂದು ಹೇಳಬಹುದು.ಆದರೆ ಪ್ರೀತಿ ನಿಮ್ಮ ಮೆದುಳಿಗೆ ಏನು ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಪ್ರೀತಿಯಲ್ಲಿ ಬಿದ್ದ ನಂತರ ಮಾನವ ಮನಸ್ಸಿನ ಮೇಲೆ ಏನು ಪರಿಣಾಮ ಬೀರುತ್ತದೆ? ನಿಮಗೆ ತಿಳಿದಿಲ್ಲದಿದ್ದರೆ, ಪ್ರೀತಿಯ ಬಗ್ಗೆ ನಡೆದ ಹೊಸ ಸಂಶೋಧನೆಯಲ್ಲಿ ಏನೆಲ್ಲಾ ವಿಷಯಗಳು ಬಹಿರಂಗವಾಗಿವೆ ಎಂಬುದನ್ನು ತಿಳಿದುಕೊಳ್ಳೋಣ.

ನೀವು ಪ್ರೀತಿಯಲ್ಲಿ ಬಿದ್ದಾಗ ಏನಾಗುತ್ತದೆ ಗೊತ್ತಾ? ನಾವು ಪ್ರೀತಿಯಲ್ಲಿ ಬಿದ್ದಾಗ, ನಮ್ಮ ಮೆದುಳು ಪ್ರತಿಕ್ರಿಯಿಸಲು ಪ್ರಾರಂಭಿಸುತ್ತದೆ ಮತ್ತು ನಮ್ಮ ಮೆದುಳು ರಾಸಾಯನಿಕಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ ಎಂದು ಸಂಶೋಧನೆ ತಿಳಿಸಿದೆ. ಯುಎಸ್‌ನ ಬಾಲ್ಟಿಮೋರ್‌ನಲ್ಲಿರುವ ಜಾನ್ಸ್ ಹಾಪ್ಕಿನ್ಸ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ನರವಿಜ್ಞಾನದ ಸಹಾಯಕ ಪ್ರಾಧ್ಯಾಪಕ ಡಾ. ಗುಲ್ ಡೋಲೆನ್, ಮೆದುಳಿನ ಮೇಲೆ ಪ್ರೀತಿಯ ಪರಿಣಾಮಗಳ ಬಗ್ಗೆ ಹೇಳಿದ್ದಾರೆ. ಅವರು ಹೇಳುವ ಪ್ರಕಾರ ಪ್ರೀತಿಯಲ್ಲಿ ಬಿದ್ದ ಮನುಷ್ಯನ ಮೆದುಳು ಹಾರ್ಮೋನ್ ಆಕ್ಸಿಟೋಸಿನ್ ಅನ್ನು ಬಿಡುಗಡೆ ಮಾಡುತ್ತದೆ. ಇದನ್ನು “ಪ್ರೀತಿಯ ರಾಸಾಯನಿಕ” ಎಂದು ಕರೆಯಲಾಗುತ್ತದೆ.

ವಿಶೇಷ ಹಾರ್ಮೋನ್ : ಆಕ್ಸಿಟೋಸಿನ್ ಒಂದು ರಾಸಾಯನಿಕ ವಿಶೇಷ ಹಾರ್ಮೋನ್. ಇದು ವಿಶೇಷ ಬಂಧವನ್ನು ಉತ್ತೇಜಿಸುತ್ತದೆ. ಈ ರಾಸಾಯನಿಕವು ಹೆರಿಗೆ, ಹಾಲೂಡಿಕೆ, ಪರಾಕಾಷ್ಠೆ ಮತ್ತು ಮುದ್ದಾಡುವ ಸಮಯದಲ್ಲಿ ಹೈಪೋಥಾಲಮಸ್‌ನಲ್ಲಿರುವ ಕೋಶಗಳಿಂದ ಬಿಡುಗಡೆಯಾಗುತ್ತದೆ ಎಂದು ಡೋಲೆನ್ ಹೇಳಿದರು. “ನಾವು ಮೊದಲು ಸ್ಪಷ್ಟವಾಗಿರಬೇಕು, ನಾವು ಪ್ರೀತಿಯನ್ನು ಏನೆಂದು ಅರ್ಥೈಸುತ್ತೇವೆ?” “ನಾವು ಇಂಗ್ಲಿಷ್‌ನಲ್ಲಿ ಒಂದು ಪದವನ್ನು ಹೊಂದಿದ್ದೇವೆ. ಗ್ರೀಕರು ವಿಭಿನ್ನ ರೀತಿಯ ಪ್ರೀತಿ ಎಂದರೆ ಆರು ಪದಗಳನ್ನು ಹೊಂದಿದ್ದರು” ಎಂದು ಅವರು ಗಮನಿಸಿದರು. ನಮ್ಮಲ್ಲಿ ಸೆಕ್ಸ್‌ನಿಂದ ಹಿಡಿದು ಸ್ನೇಹಕ್ಕಾಗಿ ಮಾನವೀಯತೆ ಎಲ್ಲದಕ್ಕೂ ವಿಭಿನ್ನ ಪದಗಳಿವೆ. ಅದಕ್ಕಾಗಿಯೇ ಪ್ರೀತಿ ಕೇವಲ ಒಂದು ಪದಕ್ಕೆ ಸೀಮಿತವಾಗಬಾರದು ಎಂದರು.

ಪ್ರೀತಿಯಿಂದ ಮೆದುಳಿನ ಮೇಲೆ ಆಗುವ ಪರಿಣಾಮಗಳು : ಪ್ರೊಫೆಸರ್ ಡಾ ಗುಲ್ ಡೋಲೆನ್ ಪ್ರಕಾರ, ಎಲ್ಲಾ ಪ್ರೀತಿಯು ಮೆದುಳಿನ ಮೇಲೆ ಒಂದೇ ರೀತಿ ಪರಿಣಾಮ ಬೀರುವುದಿಲ್ಲ. ಪ್ರಣಯ ಪ್ರೇಮ, ಪೋಷಕರ ಪ್ರೀತಿ ಅಥವಾ ಸ್ನೇಹಿತ-ಸ್ನೇಹಿತ ಪ್ರೇಮದಂತಹ ವಿವಿಧ ರೀತಿಯ ಪ್ರೀತಿಗಳು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತವೆ. ಈ ಎಲ್ಲಾ ಪ್ರೀತಿಯಲ್ಲೂ ವಿಭಿನ್ನ ಶಕ್ತಿಗಳು ಉತ್ಪತ್ತಿಯಾಗುತ್ತವೆ. ಈ ಎಲ್ಲಾ ಭಾವನೆಗಳು ಸ್ವಲ್ಪ ಮಟ್ಟಿಗೆ ಅದೇ ಮೆದುಳಿನ ರಾಸಾಯನಿಕಗಳನ್ನು ಒಳಗೊಂಡಿದ್ದರೂ, ಅವೆಲ್ಲವೂ ಮೆದುಳಿನಲ್ಲಿರುವ ಒಂದೇ ನರ ಕೋಶಗಳಿಂದ ಹುಟ್ಟಿಕೊಳ್ಳುವುದಿಲ್ಲ. ಪ್ರೊಫೆಸರ್ ಡೋಲೆನ್ ಮತ್ತು ಅವರ ಸಹೋದ್ಯೋಗಿಗಳ ಪ್ರಕಾರ, ಪ್ರಣಯ ಪ್ರೇಮವು ಮೆದುಳಿನ ಹೈಪೋಥಾಲಮಸ್‌ನಲ್ಲಿರುವ ಮ್ಯಾಗ್ನೋಸೆಲ್ಯುಲರ್ ಅಥವಾ ದೊಡ್ಡದಾದ ನ್ಯೂರಾನ್‌ಗಳಿಂದ ಬರುತ್ತದೆ. ಆದರೆ ಇತರ ರೀತಿಯ ಪ್ರೀತಿಯ ರಾಸಾಯನಿಕಗಳು ಮೆದುಳಿನಲ್ಲಿರುವ ಪಾರ್ವೊಸೆಲ್ಯುಲರ್ ಅಥವಾ ಸಣ್ಣ ನ್ಯೂರಾನ್‌ಗಳಿಂದ ಬರುತ್ತವೆ. ಪ್ರೊಫೆಸರ್ ಡೋಲೆನ್ ಅವರ ಈ ಸಂಶೋಧನೆಯು ನ್ಯೂರಾನ್ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಇದು ಪ್ರಣಯ ಪ್ರೇಮದ ಸಮಯದಲ್ಲಿ ಮೆದುಳಿನಿಂದ ಹೊರಬರುವ ರಾಸಾಯನಿಕವು ನಿಮ್ಮ ಇಂದ್ರಿಯಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳುತ್ತದೆ.

ಪ್ರತಿಕ್ರಿಯೆಗಳು : ಪ್ರೊಫೆಸರ್ ಡೋಲೆನ್ ಹೇಳಿದರು, “ಇವುಗಳ ಗಾತ್ರವು ಬಹಳಷ್ಟು ಮುಖ್ಯವಾಗಿದೆ.” ಪ್ರೀತಿಯಲ್ಲಿ ಬೀಳುವವರ ಮ್ಯಾಗ್ನೋಸೆಲ್ಯುಲರ್ ನ್ಯೂರಾನ್‌ಗಳಲ್ಲಿ 60,000 ರಿಂದ 85,000 ಆಕ್ಸಿಟೋಸಿನ್ ಅಣುಗಳನ್ನು ಬಿಡುಗಡೆ ಮಾಡುತ್ತಾರೆ. ಇದು ಇತರ ಭಾವನಾತ್ಮಕ ಪ್ರೀತಿಯಲ್ಲಿ ತೊಡಗಿರುವ ಸಣ್ಣ ನ್ಯೂರಾನ್‌ಗಳಿಗಿಂತ ಹೆಚ್ಚು. ಭಾವನಾತ್ಮಕ ಪ್ರೀತಿಯ ಸಮಯದಲ್ಲಿ 7,000 ಮತ್ತು 10,000 ಅಣುಗಳು ಬಿಡುಗಡೆಯಾಗುತ್ತವೆ. ರೊಮ್ಯಾಂಟಿಕ್ ಪ್ರೀತಿ ಮತ್ತು ಪ್ರಣಯ ಬಂಧ ಈ ರಾಸಾಯನಿಕಗಳು ಬಿಡುಗಡೆಯಾದ ನಂತರ, ಆಕ್ಸಿಟೋಸಿನ್ ಅಣುವು ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಆಕ್ಸಿಟೋಸಿನ್ ಮ್ಯಾಗ್ನೋಸೆಲ್ಯುಲರ್ ನ್ಯೂರಾನ್‌ಗಳನ್ನು ಬಿಡುಗಡೆ ಮಾಡಿದಾಗ (ರೊಮ್ಯಾಂಟಿಕ್ ಲವ್ ಆಕ್ಸಿಟೋಸಿನ್ ಕೋಶಗಳು), ಇದು ದೇಹದೊಳಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಈ ಸಮಯದಲ್ಲಿ ಸೆರೆಬ್ರೊಸ್ಪೈನಲ್ ದ್ರವದ ಅತಿಯಾದ ಹರಿವು ಇರುತ್ತದೆ. ಇದು ಇಡೀ ಮೆದುಳನ್ನು ತೇವಗೊಳಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಗರ್ಭಾಶಯ, ಸ್ತನಗಳಂತಹ ಮಹಿಳೆಯರ ದೇಹದ ಅನೇಕ ಗ್ರಂಥಿಗಳು ಸ್ವಯಂಚಾಲಿತವಾಗಿ ಸಕ್ರಿಯವಾಗುತ್ತವೆ. ಈ ಸಮಯದಲ್ಲಿ, ದೇಹದಲ್ಲಿ ಬಾಂಧವ್ಯದ ಜೊತೆಗೆ ಉತ್ಸಾಹದ ಭಾವನೆಗಳಂತಹ ಅನೇಕ ಇತರ ಪ್ರತಿಕ್ರಿಯೆಗಳು ಸಹ ದೇಹದೊಳಗೆ ನಡೆಯುತ್ತವೆ.

Recent Posts

ಇಂದಿನ ಚಿನ್ನದ ಬೆಲೆ! ಇಲ್ಲಿದೆ ಸಂಪೂರ್ಣ ಮಾಹಿತಿ.

ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮೀಡಿಯಾ ಚಾಣಕ್ಯ ವೆಬ್ ಸೈಟ್ ಗೆ ಸುಸ್ವಾಗತ. ನಿಮಗೆಲ್ಲಾ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಚಿನ್ನ…

56 years ago

ಬೆಳೆ ಪರಿಹಾರ: ಹಿಂಗಾರು ಬೆಳೆ ಹಾನಿಯಾದ ರೈತರಿಗೆ ಬೆಳೆಹಾನಿ ಪರಿಹಾರ ಜಮಾ! ಈಗಲೇ ಚೆಕ್ ಮಾಡಿ

ರಾಜ್ಯದಲ್ಲಿ ಈ ಬಾರಿ ಹಿಂಗಾರು ಮಳೆಯಿಂದಾಗಿ ಸುಮಾರು 1.58 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಗೆ ಒಳಗಾಗಿದೆ. ಇದರಿಂದಾಗಿ ರಾಜ್ಯದ…

56 years ago

ನಿಮ್ಮ ಜಮೀನಿನ ಆಕಾರ್ ಬಂದ್ ಡೌನ್ಲೋಡ್ ಮಾಡಿ ಜಮೀನಿನ ಅಸಲಿ ವಿಸ್ತೀರ್ಣ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Check your Land Akarband ರೈತರು ತಮ್ಮ ಜಮೀನಿನ ದಾಖಲೆಗಳಲ್ಲಿ ಒಂದಾದ ಆಕಾರಬಂದ್ ನ್ನು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಬಹುದು.ಹೌದು,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…

56 years ago

ಮಳೆ ಬರುವುದಕ್ಕೂ ಮುಂಚೆಯೇ ಮಾಹಿತಿ ನೀಡುವ ಆ್ಯಪ್ ಇಲ್ಲಿದೆ ನೋಡಿ! ನಿಮ್ಮ ಗ್ರಾಮದಲ್ಲಿ 5 ದಿನಕ್ಕೂ ಮೊದಲೇ ಮಳೆ ಮುನ್ಸೂಚನೆ ನೀಡುವ ಆ್ಯಪ್!

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಸ್ನೇಹಿತರೆ, ಭಾರತದಲ್ಲಿ ಶೇಕಡಾ 60 ರಷ್ಟು…

56 years ago

RTC : ರೈತರೇ ನಿಮ್ಮ ಉತಾರಿಯಲ್ಲಿ ವಕ್ಫ್ ಬೋರ್ಡ್ ಎಂದು ಇದೆಯಾ ಎಂದು ಈಗಲೇ ಚೆಕ್ ಮಾಡಿಕೊಳ್ಳಿ !

ಸಾವಿರಾರು ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಇದ್ದು ರೈತರ ಜಮೀನಿನ ಮೇಲೆ ವಕ್ಫ್ ಅಧಿಕಾರ ಹಕ್ಕು ಹೊಂದಿದೆ ಎಂದು…

56 years ago